ಮುಂಬಯಿಯ ಶೇ. 13ರಷ್ಟು ವಿದ್ಯಾರ್ಥಿಗಳಲ್ಲಿ ಮೊಬೈಲ್ ಇಲ್ಲ: ಸಮೀಕ್ಷೆ
Team Udayavani, Jun 25, 2020, 5:12 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಜೂ. 24: ಮುಂಬಯಿಯಲ್ಲಿ ಶೇ.12.51ರಷ್ಟು ವಿದ್ಯಾರ್ಥಿಗಳು ಮೊಬೈಲ್ ಫೋನ್ ಹೊಂದಿಲ್ಲ. ಅದೇ ಶೇ. 3.58ರಷ್ಟು ವಿದ್ಯಾರ್ಥಿಗಳಿಗೆ ದೂರದರ್ಶನ (ಟಿವಿ), ರೇಡಿಯೋ ಲಭ್ಯತೆಯಿಲ್ಲ ಎಂದು ರಾಜ್ಯ ಶಿಕ್ಷಣ ಇಲಾಖೆ ನಡೆಸಿದ ಸಮೀಕ್ಷೆಯೊಂದು ತಿಳಿಸಿದೆ.
ಆಯ್ದ ಕ್ಲಸ್ಟರ್ಗಳಿಂದ ಮಾಹಿತಿ ಸಂಗ್ರಹಿಸುವ ಸಲುವಾಗಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಮಹಾರಾಷ್ಟ್ರದ 35 ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿತು. ಈ ಸಮೀಕ್ಷೆಯು ವಾಟ್ಸಾಪ್, ಎಸ್ಎಂಎಸ್, ಟಿವಿ, ಮೊಬೈಲ್ ಫೋನ್ಗಳು ಮತ್ತು ರೇಡಿಯೋಗಳ ಲಭ್ಯತೆ ಇರುವವರ ಜತೆಗೆ ಸೌಲಭ್ಯ ಲಭ್ಯವಿರದ ವಿದ್ಯಾರ್ಥಿಗಳ ಶೇಕಡಾವಾರು ಮುಂತಾದ ವಿವಿಧ ನಿಯತಾಂಕಗಳನ್ನು ಕೇಂದ್ರೀಕರಿಸಿದೆ. ಸಮೀಕ್ಷಾ ಮಾಹಿತಿಯ ಪ್ರಕಾರ, ಮುಂಬಯಿ ಜಿಲ್ಲೆಯ ಶೇ. 70.33ರಷ್ಟು ವಿದ್ಯಾರ್ಥಿಗಳನ್ನು ವಾಟ್ಸಾಪ್ ಮೂಲಕ ಸಂಪರ್ಕಿಸಬಹುದು ಮತ್ತು ಶೇ. 17.16ರಷ್ಟು ವಿದ್ಯಾರ್ಥಿಗಳನ್ನು ಎಸ್ಎಂಎಸ್ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ತಿಳಿದು ಬಂದಿದೆ.
ಅಲ್ಲದೆ, ನಗರದ ಶೇ.79.74ರಷ್ಟು ವಿದ್ಯಾರ್ಥಿಗಳು ಟಿವಿ ಸಂಪರ್ಕ ಹೊಂದಿದ್ದು, ಶೇ. 13.97ರಷ್ಟು ವಿದ್ಯಾರ್ಥಿಗಳನ್ನು ರೇಡಿಯೋ ಮೂಲಕ ತಲುಪಬಹುದಾಗಿದೆ. ಆದರೆ ಶೇ. 12.51ರಷ್ಟು ವಿದ್ಯಾರ್ಥಿಗಳು ಮೊಬೈಲ್ ಫೋನ್ ಹೊಂದಿಲ್ಲ. ಅದೇ ಶೇ. 3.58ರಷ್ಟು ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ ಅಥವಾ ಮೊಬೈಲ್ ಫೋನ್ಗಳ ಲಭ್ಯತೆಯಿಲ್ಲ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಕೊರೊನಾ ಪರಿಸ್ಥಿತಿಯ ಮಧ್ಯೆ ವಿದ್ಯಾರ್ಥಿಗಳಿಗೆ ಆನ್ಲೈನ್ ಶಿಕ್ಷಣವನ್ನು ನೀಡುವ ಉದ್ದೇಶದಿಂದ ರಾಜ್ಯವು ಸಂಗ್ರಹಿಸಿದ ಈ ಮಾಹಿತಿಯು, ಮುಂಬ ಯಿಯಂತಹ ಅಭಿವೃದ್ಧಿ ಹೊಂದಿದ ಮಹಾನಗರದಲ್ಲೂ ಕೆಲವು ವಿದ್ಯಾರ್ಥಿಗಳು ಶಾಲೆಗಳನ್ನು ಅವಲಂಬಿಸಿರುವುದರಿಂದ ಆನ್ಲೈನ್ ತರಗತಿಗಳ ಎಲ್ಲರಿಗೂ ಲಭ್ಯವಿಲ್ಲ ಎಂಬುದನ್ನು ತಿಳಿಸುತ್ತದೆ.
ಅಭಿವೃದ್ಧಿ ಹೊಂದಿದ ನಗರದಲ್ಲೇ ಈ ಪರಿಸ್ಥಿತಿ ಇರುವಾಗ, ರಾಜ್ಯದ ಗ್ರಾಮೀಣ ಜಿಲ್ಲೆಗಳ ಪರಿಸ್ಥಿತಿ ಹೇಗಿರಬಹುದು? ಮುಂಬಯಿಯಲ್ಲಿ ಮೊಬೈಲ್ ಫೋನ್, ಟಿವಿ ಅಥವಾ ರೇಡಿಯೋ ಇಲ್ಲದ ವಿದ್ಯಾರ್ಥಿಗಳು ಇದ್ದಾರೆ ಎಂಬುದು ಆನ್ಲೈನ್ ಶಿಕ್ಷಣವು ಎಲ್ಲರಿಗೂ ತಲುಪಲು ಸಾಧ್ಯವಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಶಿಕ್ಷಣ ಸಂಶೋಧನಾ ವಿಶ್ಲೇಷಕ ಕಾಶಿನಾಥ್ ಕೇಡೇಕರ್ ನುಡಿದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ