ನವಿಮುಂಬಯಿ: ಬಿಜೆಪಿ ಕನ್ನಡ ಘಟಕದಿಂದ ವಿಜಯೋತ್ಸವ
Team Udayavani, May 19, 2018, 4:32 PM IST
ನವಿಮುಂಬಯಿ: ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯು ಆತೀ ಹೆಚ್ಚು ಸ್ಥಾನಗಳಿಸಿ ಹೊರಹೊಮ್ಮಿರುವ ನಿಮಿತ್ತ ಭಾರತೀಯ ಜನತಾ ಪಾರ್ಟಿ ಕನ್ನಡ ಘಟಕದ ವತಿಯಿಂದ ವಿಜಯೋತ್ಸವ ಆಚರಣೆಯು ನವಿಮುಂಬಯಿಯಲ್ಲಿ ನಡೆಯಿತು.
ಕನ್ನಡ ಘಟಕ ನವಿ ಮುಂಬಯಿ ಜಿಲ್ಲಾ ಅಧ್ಯಕ್ಷ ಹರೀಶ್ ಪೂಜಾರಿ ಅವರು ಮಾತನಾಡಿ, ಕರ್ನಾಟಕದ ಆಡಳಿತದಿಂದ ಬೇಸತ್ತ ಜನತೆ ಮುಂದಿನ ಪೀಳಿಗೆಯ ಭವಿಷ್ಯಕ್ಕಾಗಿ ಬಿಜೆಪಿಯನ್ನು ಗೆಲ್ಲಿಸಿದ್ದಾರೆ. ಇದು ಕರ್ನಾಟಕದ ಜನತೆ ನಮ್ಮ ನೆಚ್ಚಿನ ಪ್ರದಾನ ಮಂತ್ರಿಗೆ ಕೊಟ್ಟ ಉಡುಗೊರೆಯಾಗಿದೆ ಎಂದರು.
ನವಿಮುಂಬಯಿ ಬಿಜೆಪಿ ಜಿÇÉಾಧ್ಯಕ್ಷ ರಾಮಚಂದ್ರ ಘರತ್ ಮಾತಾನಾಡಿ, ಬೃಹತ್ ಸಂಖ್ಯೆಯಲ್ಲಿ ಬಿಜೆಪಿ ಶಾಸಕರನ್ನು ತಮ್ಮ ಅಮೂಲ್ಯ ಮತ ಹಾಕಿ ಆರಿಸದಕ್ಕೆ ಕರ್ನಾಟಕ ಜನತೆಗೆ ಅಭಿನಂದನೆ ಸಲ್ಲಿಸಿದರು, ಅಲ್ಲದೆ ಸರಕಾರ ರಚಿಸಲು ಸ್ವಲ್ಪವೇ ಸೀಟು ಬೇಕಿದಾದರೂ ಸರಕಾರ ಮಾತ್ರ ಬಿಜೆಪಿ ರಚಿಸುವುದು ಶತಸಿದದ್ಧವಾಗಿದೆ ಎಂದು ನುಡಿದರು.
ಕನ್ನಡ ಘಟಕದ ಪ್ರಧಾನ ಕಾರ್ಯದರ್ಶಿ ಗಣೇಶ್ ಶೇರಿಗಾರ್ ಮಾತಾನಾಡಿ, ಇದೇ ಮಾದರಿಯನ್ನು ನವಿಮುಂಬಯಿಯಲ್ಲೂ ಮಾಡಬೇಕೆಂದು ತಿಳಿಸಿ ನವಿಮುಂಬಯಿಯ ಕನ್ನಡಿಗರಿಗೆ ಜಿÇÉಾ ಬಿಜೆಪಿ ವತಿಯಿಂದ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಿದರು.
ಕನ್ನಡ ಘಟಕದ ಮಹಿಳಾ ಅಧ್ಯಕ್ಷ ಪೂರ್ಣಿಮಾ ದೇವಾಡಿಗ ಮಾತಾನಾಡಿ, ಕರ್ನಾಟಕ ಜನತೆ ಮೋದಿಯ ಕಾರ್ಯ ಶೈಲಿಯನ್ನು ಮೆಚ್ಚಿ ಯಾವುದೇ ಜಾತಿ ಮತ ನೋಡದೇ ಬಿಜೆಪಿಗೆ ಮತ ಹಾಕಿದ್ದಾರೆ ಎಂದರು.
ಕನ್ನಡ ಘಟಕದ ಉಪಾಧ್ಯಕ್ಷರುಗಳಾದ ರಾಜಾರಾಮ ಅಚಾರ್ಯ, ರಮೇಶ್ ಸಾಲ್ಯಾನ್ ಬಜೆಗೋಳಿ, ದೆಪ್ಪುಣಿಗುತ್ತು ಜಗದೀಶ ಶೆಟ್ಟಿ, ಸದಸ್ಯರುಗಳಾದ ಪ್ರಭಾಕರ ಬಂಗೇರಾ, ಸಂಜೀವ ಶೆಟ್ಟಿ, ದಯನಂದ ದೇವಾಡಿಗ, ಸುರೇಶ ದೇವಾಡಿಗ, ಮನೋಹರ ನಾಯ್ಕ, ವಿಶ್ವನಾಥ ಪೂಜಾರಿ, ಗಂಗಾಧರ ಬಂಗೇರ, ರಾಘು ಮೂಲ್ಯ, ಭೋಜ ದೇವಾಡಿಗ, ಕಲಾ ಶೇರಿಗಾರ್, ಮಹಿಳಾ ವಿಭಾಗ ಕಾರ್ಯದರ್ಶಿ ಪ್ರೇಮಾ ಮೂಲ್ಯ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರುಗಳಾದ ನಿತೀನ್ ಕಾಂದಾರಿ, ಆನಂದ ಸನೋತ್ರ ಹಾಗೂ ಜಿಲ್ಲಾ ಉಪ ಸಮಿತಿಯ ಹಲಾವಾರು ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕರ್ತರು ಪಟಾಕಿ ಸಿಡಿಸಿ, ಡೋಲು ಬಾರಿಸಿ ಕುಣಿದು ಸಂಭ್ರಮಿಸಿದರು. ಸದಸ್ಯರೆಲ್ಲರಿಗೂ ಸಿಹಿ ಹಂಚಿ ದಕ್ಷಿಣ ಭಾರತ ಶೈಲಿಯ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ