ನೇಮದ ಬೂಳ್ಯ ಕೋಪರ್ ಖರ್ಣೆಯಲ್ಲಿ ಹೌಸ್ಫುಲ್
Team Udayavani, Aug 3, 2018, 1:01 PM IST
ನವಿ ಮುಂಬಯಿ:ಸಂಘಟಕ ನಿತೇಶ್ ಶೆಟ್ಟಿ ಕಣಂಜಾರು ಅವರ ವ್ಯವಸ್ಥಾಪಕತ್ವದಲ್ಲಿ ನೇಮದ ಬೂಳ್ಯ ತುಳು ಚಲನಚಿತ್ರವು ಜು. 29 ರಂದು ಬೆಳಗ್ಗೆ ಕೋಪರ್ಖರ್ಣೇಯ ಬಾಲಾಜಿ ಮೂವಿಪ್ಲೆಕ್ಸ್ ಸಿನೇಮಾಗೃಹದಲ್ಲಿ ಹೌಸ್ಫುಲ್ ಪ್ರದರ್ಶನಕಂಡಿತು.
ನವಿಮುಂಬಯಿ ಹೊಟೇಲ್ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡಾ ಅವರ ನಿರ್ಮಾಪಕತ್ವದ ನೇಮದ ಬೂಳ್ಯ ಚಲನಚಿತ್ರದ ಮಹಾರಾಷ್ಟÅದ ಪ್ರಪ್ರಥಮ ಪ್ರದರ್ಶನವನ್ನು ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಉದ್ಘಾಟಿಸಿ ಚಲನಚಿತ್ರದ ಯಶಸ್ಸಿಗೆ ಶುಭಹಾರೈಸಿದರು.
ಸಮಾರಂಭದ ವೇದಿಕೆಯಲ್ಲಿ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಸಮಾಜ ಸೇವಕ, ಶ್ರೀ ಸಂತೋಷಿ ಮಾತಾ ದೇವಾಲಯ ಟ್ರಸ್ಟ್ ಘನ್ಸೋಲಿ ಇದರ ಜತೆ ಕಾರ್ಯದರ್ಶಿ ಭಾಸ್ಕರ ಶೆಟ್ಟಿ ತಾಳಿಪಾಡಿಗುತ್ತು, ನೇಮದ ಬೂಳ್ಯ ಚಿತ್ರದ ನಿರ್ಮಾಪಕಿ ಶ್ರೀಮತಿ ಶಬರಿ ಚಂದ್ರಶೇಖರ ಮಾಡಾ, ಕುದ್ರಾಡಿಗುತ್ತು ಚಂದ್ರಶೇಖರ್ ಮಾಡಾ, ಚಂದ್ರಹಾಸ ಶೆಟ್ಟಿ ದೆಪ್ಪುಣಿಗುತ್ತು, ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ಸಮಾಜ ಸೇವಕ ಸತೀಶ್ ಪೂಜಾರಿ ಕುತ್ಪಾಡಿ, ಯುವ ಉದ್ಯಮಿ, ಸಮಾಜ ಸೇವಕ ಮೋಹನ್ ಶೆಟ್ಟಿ ಮಜ್ಜಾರ್, ನಾರ್ಡಿಕ್ ಲಾಜಿಸ್ಟಿಕ್ ಪ್ರೈವೇಟ್ ಲಿಮಿಟೆಡ್ ಇದರ ಆಡಳಿತ ನಿರ್ದೇಶಕ ಪ್ರಮೋದ್ ಕರ್ಕೇರ ಅಡ್ವೆ, ಕವಿ ಲಕ್ಷಿ¾àನಾರಾಯಣ ರೈ ಹರೇಕಳ, ಯುವ ಉದ್ಯಮಿ, ಸಮಾಜ ಸೇವಕ ಪೂರ್ಣೇಶ್ ಶೆಟ್ಟಿ ಕುರ್ಕಾಲ್, ತುಳುಕೂಟ ಐರೋಲಿ ಇದರ ಮಾಜಿ ಅಧ್ಯಕ್ಷ ಪ್ರಕಾಶ್ ಆಳ್ವ ಇವರು ಉಪಸ್ಥಿತರಿದ್ದರು.
ರಾಜೇಶ್ ಶೆಟ್ಟಿ, ವಿಕಾಸ್ ಶೆಟ್ಟಿ ಬೆಳ್ಕಲೆ, ಸುಕೇಶ್ ಶೆಟ್ಟಿ ಕಟಪ್ಪಾಡಿ, ಜಗದೀಶ್ ಶೆಟ್ಟಿ ಬೆಳ್ಕಲೆ, ದಿಲೀಪ್ ಶೆಟ್ಟಿ ಕಣಂಜಾರು, ಮಹೇಶ್ ಅಂಚನ್, ಅಡ್ವೆ ದಿವಾಕರ ಶೆಟ್ಟಿ, ಶೈಲೇಶ್ ಶೆಟ್ಟಿ ಕೋಡಿಬೈಲ್, ಮಹೇಶ್ ಶೆಟ್ಟಿ ಬೈಲೂರು ಇವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಲೇಖಕ ಸತೀಶ್ ಎರ್ಮಾಳ್ ಅತಿಥಿಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ