“ಸೆಪ್ಟಂಬರ್ವರೆಗೆ ಲೋಕಲ್ ರೈಲು ಸೇವೆ ಬೇಡ’
Team Udayavani, Jul 27, 2020, 5:28 PM IST
ಮುಂಬಯಿ, ಜು. 26: ರಾಜ್ಯದಲ್ಲಿ ಕೋವಿಡ್ ಪ್ರಕೋಪ ಇನ್ನೂ ಹತೋಟಿಗೆ ಬರದಿರುವ ಹಿನ್ನೆಲೆ, ಸಾರ್ವಜನಿಕರಿಗೆ ಲೋಕಲ್ ರೈಲು ಸೇವೆಗಳನ್ನು ಸೆಪ್ಟಂಬರ್ವರೆಗೆ ಪುನರಾರಂಭಿಸಬಾರದು ಎಂದು ತಜ್ಞರು ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ರೈಲ್ವೇ ಹಿರಿಯ ಅಧಿಕಾರಿಯೊಬ್ಬರು, ಪ್ರಯಾಣಿಕರು ಲೋಕಲ್ ರೈಲುಗಳನ್ನು ಬಳಸಲು ಹೆಚ್ಚು ಸಮಯ ಕಾಯಬೇಕಾಗುತ್ತದೆ. ನಗರದಲ್ಲಿ ಸಾರ್ವಜನಿಕರಿಗಾಗಿ ಸ್ಥಳೀಯ ರೈಲು ಸೇವೆಗಳನ್ನು ಪ್ರಾರಂಭಿಸುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ನಗರದಲ್ಲಿ ಪ್ರಕರಣಗಳು ಕಡಿಮೆಯಾಗುತ್ತಿವೆ, ಆದರೆ ರೈಲು ಸೇವೆಗಳನ್ನು ಪುನರಾರಂಭಿಸುವ ಮೊದಲು ಮುಂಬಯಿಯ ಹೊರಗಿನ ಇತರ ಪ್ರದೇಶಗಳ ಪರಿಸ್ಥಿತಿಯೂ ಸ್ಥಿರವಾಗಬೇಕು ಎಂದು ಹೇಳಿದ್ದಾರೆ.
ಎಸಿ ಅಲ್ಲದ ರೈಲಿನಲ್ಲಿ ತಾಜಾ ಗಾಳಿ ಪ್ರಸರಣ ಅಧಿಕವಾಗಿರುತ್ತದೆ. ಆದ್ದರಿಂದ ವೈರಸ್ ಹರಡುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಸ್ಥಳೀಯ ರೈಲು ವಿಭಾಗಗಳ ಒಳಗೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ, ಆದ್ದರಿಂದ ರೈಲ್ವೇಗಳು ರೈಲು ಸೇವೆಗಳನ್ನು ಸೆಪ್ಟಂಬರ್ವರೆಗೆ ಪುನರಾರಂಭಿಸಬಾರದು ಎಂದು ಮಾಜಿ ರೈಲ್ವೇ ಮಂಡಳಿ ಸದಸ್ಯ ಮತ್ತು ಕೇಂದ್ರ ರೈಲ್ವೇಯ ಮಾಜಿ ಜನರಲ್ ಮ್ಯಾನೇಜರ್ ಸುಬೋಧ್ ಜೈನ್ ಹೇಳಿದ್ದಾರೆ.
ಕಂಪಾರ್ಟ್ಮೆಂಟ್ಗಳ ಒಳಗೆ ವಾರಕ್ಕೆ ಒಬ್ಬ ವ್ಯಕ್ತಿಗೆ ಅವಕಾಶ ನೀಡುವ ಆಯ್ಕೆಯನ್ನು ರೈಲ್ವೇ ಅನ್ವೇಷಿಸಬಹುದು ಎಂದು ಸಾರಿಗೆ ತಜ್ಞರು ಸೂಚಿಸಿದ್ದಾರೆ. ರೈಲ್ವೇ ಪಾಸ್ ಹೊಂದಿರುವವರು ವಾರಕ್ಕೊಮ್ಮೆ ಮಾತ್ರ ಪ್ರಯಾಣಿಸಲು ಅವಕಾಶ ನೀಡುವ ಆಯ್ಕೆಯನ್ನು ರೈಲ್ವೇ ಬಳಸಬಹುದು. ಈ ರೀತಿಯಾಗಿ ಜನರು ತಮ್ಮ ಕೆಲಸಗಳನ್ನು ಪೂರ್ಣಗೊಳಿಸಬಹುದು. ಬೊರಿ ವಲಿ ಮತ್ತು ವಿರಾರ್ ನಡುವೆ ಸೇವೆಗಳೂ ಇರಬೇಕು ಎಂದು ಸಾರಿಗೆ ತಜ್ಞ ಎ. ವಿ. ಶೆನಾಯ್ ಅವರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ