ಆಮ್ಲಜನಕ ಯೋಜನೆ ಉದ್ಘಾಟನೆ
Team Udayavani, May 19, 2021, 1:40 PM IST
ಮೀರಾ-ಭಾಯಂದರ್: ಆಮ್ಲಜನಕ ಕೊರತೆ ನೀಗಿಸಲು ಭಾಯಂದರ್ ಪಶ್ಚಿಮದ ಪಂಡಿತ್ ಭೀಮ್ಸೇನ್ ಜೋಶಿ ಆಸ್ಪತ್ರೆಯಲ್ಲಿ ಆಮ್ಲಜನಕ ಯೋಜನೆ ಸ್ಥಾಪಿಸ ಲಾಗಿದ್ದು, ಭವಿಷ್ಯದಲ್ಲಿ 120 ಆಮ್ಲಜನಕ ಹಾಸಿಗೆಗಳನ್ನು ಒದಗಿಸಲಿದೆ. ಇದಕ್ಕಾಗಿ ಪುರಸಭೆ ಆಡಳಿತವು 1.80 ಕೋಟಿ ರೂ. ಗಳನ್ನು ವ್ಯಯಿಸಲಿದೆ.
ಮೀರಾ – ಭಾಯಂದರ್ ನಗರದಲ್ಲಿ ಹೆಚ್ಚುತ್ತಿರುವ ಕೊರೊನಾ ರೋಗಿಗಳ ದೃಷ್ಟಿ ಯಿಂದ ಸೋಮವಾರ ಉಸ್ತುವಾರಿ ಸಚಿವ ಏಕನಾಥ್ ಶಿಂಧೆ ಅವರು ರಿಬ್ಬನ್ ಕತ್ತರಿಸಿ ಯೋಜನೆಯನ್ನು ಉದ್ಘಾಟಿಸಿದರು. ಕಳೆದ ಎರಡು ದಿನಗಳಿಂದ ಚಂಡಮಾರುತದ ಹಿನ್ನೆಲೆ ಆಡಳಿತವು ಮುನ್ನೆಚ್ಚರಿಕೆಗಾಗಿ ನಿರಂತರವಾಗಿ ಜಾಗರೂಕತೆಯಿಂದ ಕರೆ ನೀಡುತ್ತಿರುವುದರಿಂದ ಈ ಉದ್ಘಾಟನ ಕಾರ್ಯಕ್ರಮದ ನಡೆಯುವ ಬಗ್ಗೆ ಅನಿಶ್ಚಿತತೆ ಇತ್ತು. ಭಾರೀ ಬಿರುಗಾಳಿ ಮತ್ತು ಧಾರಾಕಾರ ಮಳೆಯ ನಡುವೆ ಮೇಯರ್ ಜ್ಯೋಸ್ಟ್ನಾ ಹಸ್ನಾಲೆ, ಸಂಸದ ರಾಜನ್ ವಿಚಾರೆ, ಶಾಸಕ ಗೀತಾ ಜೈನ್, ಪುರಸಭೆ ಆಯುಕ್ತ ದಿಲೀಪ್ ಧೋಲ್ ಮತ್ತು ಪುರಸಭೆ ಆಡಳಿತಾಧಿಕಾರಿಗಳು ಮತ್ತು ಶಿವಸೇನೆ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ವಿಪಕ್ಷಗಳಿಂದ ಟೀಕೆ
ಚಂಡಮಾರುತ ಸಮಯದಲ್ಲಿಯೂ ಆಡಳಿತ ಅಧಿಕಾರಿಗಳು ಆಮ್ಲಜನಕ ಯೋಜನೆಯ ಉದ್ಘಾಟನೆಗೆ ಸೇರಿದ್ದರು. ಒಂದೆಡೆ ರಾಜ್ಯದಲ್ಲಿ ಲಾಕ್ಡೌನ್ ಕಟ್ಟುನಿಟ್ಟಿನ ನಿರ್ಬಂಧಗಳು ಮತ್ತು ಮುಂಬಯಿಯಲ್ಲಿ ಚಂಡಮಾರುತ ಕುರಿತಾದ ಎಚ್ಚರಿಕೆಗಳ ಹೊರತಾಗಿಯೂ ಸಚಿವರು ಸಹಿತ ನಾಯಕರು ಮತ್ತು ಆಡಳಿತ ಅಧಿಕಾರಿಗಳಿಂದ ತುಂಬಿ ತುಳುಕುತ್ತಿದ್ದ ಈ ಸಮಾರಂಭವು ಇದೀಗ ವಿಪಕ್ಷಗಳ ಟೀಕೆಗೆ ಗುರಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ