ಮುಂಬಯಿಗೆ ದೊರೆಯಬೇಕಾದ ಆಮ್ಲಜನಕ ಥಾಣೆ, ನವಿಮುಂಬಯಿ ಮನಪಾ ಪಾಲಿಗೆ


Team Udayavani, May 3, 2021, 1:32 PM IST

Oxygen Thane for Mumbai

ಮುಂಬಯಿ: ದೇಶದಲ್ಲಿ ಆಮ್ಲಜನಕ ಕೊರತೆಯಿರುವ ಕಾರಣ ರಾಜ್ಯಗಳು ಹೆಚ್ಚಿನ ಆಮ್ಲಜನಕ ಪಡೆಯಲು ಹೆಣಗಾಡುತ್ತಿರುವಾಗ ಮುಂಬಯಿ ನಗರಕ್ಕೆ ವಿತರಣೆಯಾಗಬೇಕಾಗಿದ್ದ ಆಮ್ಲಜನಕವನ್ನು ಥಾಣೆ ಮತ್ತು ನವಿ ಮುಂಬಯಿ ಮನಪಾಗಳು ಸರಬರಾಜುದಾರರಿಂದ ತಮ್ಮ ಕಡೆಗೆ ತಿರುಗಿಸಿಕೊಂಡಿವೆ ಎಂಬ ಆರೋಪವಿದೆ.

ಇದರ ಪರಿಣಾಮವಾಗಿ ಮುಂಬಯಿಗೆ ದೊರೆಯ ಬೇಕಾದ 114 ಮೆಟ್ರಿಕ್‌ ಟನ್‌ ಆಮ್ಲಜನಕವು ನಗರಕ್ಕೆ ತಲುಪದ ಕಾರಣ ಕಳೆದ ವಾರ ಮುಂಬಯಿಯಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಯಿತು. ಈ ನಿಟ್ಟಿನಲ್ಲಿ ಮುಂಬಯಿ ಮಹಾನಗರ ಪಾಲಿಕೆಯು ಆಮ್ಲಜನಕ ಸರಬರಾಜುದಾರರಿಗೆ ನೋಟಿಸ್‌ ನೀಡಿದ್ದು, ಆಹಾರ ಮತ್ತು ಔಷಧ ಆಡಳಿತ ಆಯುಕ್ತರು ಹಾಗೂ ಕೊಂಕಣ ವಿಭಾಗೀಯ ಆಯುಕ್ತರಲ್ಲಿ ದೂರು ಸಲ್ಲಿಸಿದೆ.
ಪ್ರತೀ ನಗರಕ್ಕೆ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಆಮ್ಲಜನಕ ಪಾಲನ್ನು ನಿರ್ಧರಿಸಲಾಗುತ್ತದೆ.

ಅದರಂತೆ ಮುಂಬಯಿಗೆ 234 ಮೆಟ್ರಿಕ್‌ ಟನ್‌ ಆಮ್ಲಜ ನಕವನ್ನು ಒದಗಿಸಲಾಗುತ್ತದೆ. ಗುಜರಾತ್‌, ಅಲಿಬಾಗ್‌ ಮತ್ತು ಇತರ 3 ಪ್ರದೇಶಗಳ ಉತ್ಪಾದಕ ಕಂಪೆನಿಗಳ ವತಿಯಿಂದ ಲಭ್ಯವಾಗುವ ಆಮ್ಲಜನಕವನ್ನು ಸತರಾಮ ದಾಸ್‌ ಗ್ಯಾಸ್‌ ಕಂಪೆನಿ ಮೂಲಕ ಮುಂಬಯಿಗೆ ಸರಬರಾಜು ಮಾಡಲಾಗುತ್ತದೆ. ಪಾಲಿಕೆಯು ಈ ಸಂಗ್ರಹವನ್ನು ನಗರದ ಆಸ್ಪತ್ರೆಗಳು ಮತ್ತು ಜಂಬೋ ಕೋವಿಡ್‌ ಕೇಂದ್ರಗಳಿಗೆ ಹಂಚಲಾಗುತ್ತದೆ.

ಕಂಪೆನಿಯು ಮುಂಬಯಿ ಜತೆಗೆ ಥಾಣೆ ಮತ್ತು ನವಿಮುಂಬಯಿ ಮನಪಾಗಳಿಗೂ ಆಮ್ಲಜನಕವನ್ನು ಪೂರೈಸುತ್ತದೆ. ಆಮ್ಲಜನಕ ವಿತರಣೆ ಬಗ್ಗೆ ನವಿ ಮುಂಬಯಿ ಮತ್ತು ಥಾಣೆ ಮನಪಾಗಳಿಂದ ಮಾಹಿತಿ ಪಡೆದ ಬಳಿಕ ಮುಂಬಯಿ ಮನಪಾ ಅಧಿಕಾರಿಗಳು ಕಂಪೆನಿಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅನಂತರ ಆಹಾರ ಮತ್ತು ಔಷಧ ಆಡಳಿತ ಆಯುಕ್ತರಿಗೆ ಹಾಗೂ ಕೊಂಕಣ ವಿಭಾಗೀಯ ಆಯುಕ್ತರಿಗೆ ಬರೆದ ಪತ್ರದಲ್ಲಿ ಮುಂಬಯಿಗೆ ಸಂಪೂರ್ಣ ಆಮ್ಲಜನಕ ಖಚಿತಪಡಿಸಿಕೊಳ್ಳಲು ಸತರಾಮದಾಸ್‌ ಗ್ಯಾಸ್‌ ಕಂಪೆನಿಯ ಆವರಣದಲ್ಲಿ ತಹಶೀಲ್ದಾರ್‌ ತಂಡವನ್ನು ನೇಮಿಸಬೇಕೆಂದು ಬಿಎಂಸಿ ವಿನಂತಿಸಿದೆ.

ಮನಪಾಗಳ ಹೇಳಿಕೆ ಏನು ?
ಆಮ್ಲಜನಕ ಟ್ಯಾಂಕರ್‌ ಸರಬರಾಜುದಾರ ಕಂಪೆನಿಯಿಂದ ನಮಗೆ ಬಂದಿತ್ತು ಎಂದು ನವಿಮುಂಬಯಿ ಮತ್ತು ಥಾಣೆ ಮನಪಾಗಳು ಉತ್ಪಾದಕ ಕಂಪೆನಿಗಳು ಕಳುಹಿಸಿದ ದಾಖಲೆಗಳನ್ನು ಉಲ್ಲೇಖೀಸಿವೆ. ಆದ್ದರಿಂದ ಅಗತ್ಯಕ್ಕೆ ತಕ್ಕಂತೆ ಆಮ್ಲಜನಕವನ್ನು ನಾವು ಪಡೆದಿದ್ದು, ಉಳಿದ ಆಮ್ಲಜನಕವನ್ನು ಮುಂಬಯಿ ಮಹಾನಗರ ಪಾಲಿಕೆಗೆ ಕಳುಹಿಸಲಾಯಿತು. ಟ್ಯಾಂಕರ್‌ ಮುಂಬಯಿಗೆ ಬಂದಿರುವುದು ತಿಳಿದುಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಮುದ್ರಣದ ದೋಷದಿಂದಾಗಿ ಆಮ್ಲಜನಕವು ನವಿಮುಂಬಯಿ ಹಾಗೂ ಥಾಣೆ ಮನಪಾಕ್ಕೆ ಆಮ್ಲಜನಕ ಪೂರೈಕೆಯಾಗಿರುವುದು ತಿಳಿದುಬಂದಿದೆ. ಈ ಗೊಂದಲದಿಂದ ಘಟನೆ ಸಂಭವಿಸಿದ್ದು, ಇದರ ಹೊರತಾಗಿ ನಾವು ಮುಂಬಯಿಗೆ ಪೂರೈಕೆಯಾಗುವ ಆಮ್ಲಜನಕವನ್ನು ಬಳಸುವುದಿಲ್ಲ ಎಂದು ನವಿ ಮುಂಬಯಿ ಮನಪಾ ಆಯುಕ್ತ ಅಭಿಜಿತ್‌ ಬಂಗಾರ್‌ ಹೇಳಿದ್ದಾರೆ.

ಟಾಪ್ ನ್ಯೂಸ್

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

1-wwwqee

ರಬಕವಿ-ಬನಹಟ್ಟಿ; ಅರಿಸಿನ ಬೀಜಗಳ ಕೊರತೆ: ಗಗನಕ್ಕೇರುತ್ತಿರುವ ಬೆಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Gangavati: ಜೈ ಶ್ರೀರಾಮ್‌ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.