ಪೇಜಾವರ ಮಠ: 25ನೇ ಪುರಂದರದಾಸರ ಆರಾಧನೆ


Team Udayavani, Jan 19, 2018, 2:07 PM IST

1801mum02.jpg

ಮುಂಬಯಿ: ಸಾಂತಾಕ್ರೂಜ್‌ ಪೂರ್ವ ಶ್ರೀ ಪೇಜಾವರ ಮಠ ಮುಂಬಯಿ ವತಿಯಿಂದ ಭಜನೆ ಕೀರ್ತನೆಯೊಂದಿಗೆ 25ನೇ ವಾರ್ಷಿಕ ಪುರಂದರದಾಸರ ಆರಾಧನೆ ನಡೆಯಿತು.  ಶ್ರೀ ಕೃಷ್ಣ ವಿಟuಲ ಪ್ರತಿಷ್ಠಾನದ ಸಂಸ್ಥಾಪಕ ವಿದ್ವಾನ್‌ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರ ನಿರ್ದೇಶನದಲ್ಲಿ ವಿವಿಧ ಪೂಜೆಗಳು ನಡೆದವು.

ಇದೇ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಕೈರಬೆಟ್ಟು ವಿಶ್ವನಾಥ್‌ ಭಟ್‌ ಅವರು, ಅಪನಂಬಿಕೆಗಳ ನಿರ್ಮೂಲನಕ್ಕೆ ಭಕ್ತಿ ಮತ್ತು ಭಕ್ತಿಯ ಶ್ರದ್ಧೆಗೆ ಭಜನೆ ಆವಶ್ಯಕವಾಗಿದ್ದು. ಭಜನೆಗಳು ಮನುಷ್ಯನನ್ನು ಭಗವಂತನತ್ತ ಸಮೀಪಿಕರಿಸುತ್ತವೆೆ. ಭಜನೆಯಿಂದ ಸಂಸ್ಕೃತಿಯ  ಅರಿವು ಸಾಧ್ಯವಾಗಿ ಸಂಸ್ಕಾರದ ಬಾಳಿಗೆ ಪೂರಕವಾಗುತ್ತದೆ. ಭಜನೆ ಮನೆಮನಗಳನ್ನು ಪ್ರಫುಲ್ಲಗೊಳಿಸುತ್ತದೆ. ಇವುಗಳಿಗೆಲ್ಲಾ ಗುರುವರ್ಯರ ಆಶೀರ್ವಾದದ ಅಗತ್ಯವಿದೆ. ಗುರುಗಳ ಶಿಷ್ಯನಾಗುವವನೇ ಪರಮ ಭಕ್ತನಾಗುತ್ತಾನೆ. ರತ್ನಾ ಆಚಾರ್ಯ, ಸಾಬಕ್ಕ ಖೇಡೆಕರ್‌ ಪ್ರಸಿದ್ಧಿಯ ಸುನಂದಾ ಉಪಾಧ್ಯಾಯ ಇವರೆಲ್ಲರ ಭಜನನಿಷ್ಠೆ ಇಂತಹ ಕಾರ್ಯಕ್ರಮಕ್ಕೆ ಪ್ರೇರಕವಾಗಿದೆ. ಸದ್ಯ ಸ್ವರ್ಗಸ್ಥ ರತ್ನಾ ಆಚಾರ್ಯ ಅವರ  ಸ್ಮರಣೆಯೊಂದಿಗೆ ಅವರಿಗೆ ವೈಕುಂಠವನ್ನು ಭಗವಂತ ಕರುಣಿಸಲಿ. ಭಜನಾ ಮಂಡಳಿಗಳ ಸೇವೆ, ಪ್ರೋತ್ಸಾಹ ಎಲ್ಲರಿಗೂ ಅನುಕರಣೀಯ. ಮುಂದೆಯೂ ಪರಿಪೂರ್ಣ ಮನಸ್ಸಿನಿಂದ ಭಜನೆಯನ್ನಾಡಿ ಶ್ರೀದೇವರನ್ನು ಸ್ತುತಿಸಿ ಜೀವನ ಪಾವನಗೊಳಿಸಿರಿ ಎಂದು ಹಾರೈಸಿದರು.

ಮಠದ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಆಡಳಿತ ಸಮಿತಿ ಗೌರವ ಅಧ್ಯಕ್ಷ ಡಾ| ಎ. ಎಸ್‌. ರಾವ್‌, ಭಜನ ಕಾರ್ಯಕ್ರಮ ಸ್ಪರ್ಧೆಯ ಸಂಘಟಕಿ ಸುನಂದಾ ಸದಾನಂದ ಉಪಾಧ್ಯಾಯ, ಪೇಜಾವರ ಮಠ ಮುಂಬಯಿ ಶಾಖೆಯ  ಪ್ರಬಂಧಕ ವಿದ್ವಾನ್‌ ರಾಮದಾಸ ಉಪಾಧ್ಯಾಯ ರೆಂಜಾಳ ವೇದಿಕೆಯಲ್ಲಿ ಆಸೀನರಾಗಿದ್ದು, ವಿಜೇತ ಭಜನ ತಂಡಗಳಿಗೆ  ಬಹುಮಾನ, ಫಲಕ ಪ್ರದಾನಿಸಿ ಅಭಿನಂದಿಸಿದರು.

ಎ. ಎಸ್‌. ರಾವ್‌ ಮಾತನಾಡಿ,  ಭಜನೆ ಮಹಾನ್‌ ಕಾಯಕವಾಗಿದೆ. ಭಜನೆ ಎಂದಿಗೂ  ಸ್ಪರ್ಧೆ 

ಆಗಲಾರದು. ಆದರೂ ತಂಡಗಳ ಪ್ರೋತ್ಸಾಹಕ್ಕಾಗಿ ಹೆಸರಿ ಗಷ್ಟೇ ಸ್ಪರ್ಧೆ. ಭಜನೆಯಲ್ಲಿ  ಭಕ್ತಿ ಇಮ್ಮಡಿಗೊಳ್ಳುತ್ತಿದ್ದು, ಇದರಿಂದ ಎಲ್ಲರೂ ಭಜನೆಯಲ್ಲಿ ಚಿಂತೆನೆ ಮೂಡಿಸಿ ಅನುಸರಿಸುವಿಕೆ ಅವಶ್ಯವಾಗಿದೆ ಎಂದು ಎ. ಎಸ್‌. ರಾವ್‌ ಅವರು ತಿಳಿಸಿದರು.

ರಾಮದಾಸ ಉಪಾಧ್ಯಾಯ ಅವರು ಸ್ವಾಗತಿಸಿ ಮಾತನಾಡಿ,  ಜಗದ್ಗುರು ಶ್ರೀ  ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ  ಪೇಜಾವರ ಅಧೋಕ್ಷಜ ಮಠಾಧೀಶ ಪರಮಪೂಜ್ಯ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಪಂಚಮ ಪರ್ಯಾಯದ ಕೊನೆಯ ದಿನವಾದ ಇಂದು ಪರ್ಯಾಯೋತ್ಸವ ಸಮಾಪ್ತಿ ಸಂಭ್ರಮ ಎಲ್ಲರಲ್ಲೂ ಹರ್ಷ ಮೂಡಿಸಿದೆ ಎಂದರು.

ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವ ಕಾರ್ಯದರ್ಶಿಗಳಾದ ಬಿ. ಆರ್‌.  ಗುರುಮೂರ್ತಿ, ಪೇಜಾವರ ಮಠದ ವ್ಯವಸ್ಥಾಪಕ ಹರಿ ಭಟ್‌, ಶ್ರೀನಿವಾಸ ಭಟ್‌ ಪರೇಲ್‌, ವಿಜಯಲಕ್ಷ್ಮೀ ಸುರೇಶ್‌ ರಾವ್‌, ಸುಶೀಲಾ ಎಸ್‌. ದೇವಾಡಿಗ, ಸುಮತಿ ಆರ್‌. ಶೆಟ್ಟಿ, ಪಿ. ವಿ.  ಐತಾಳ್‌, ಶೇಖರ್‌ ಸಸಿಹಿತ್ಲು, ಎಂ. ಎಸ್‌. ರಾವ್‌ ಚಾರ್ಕೋಪ್‌, ಶೇಖರ್‌ ಸಾಲ್ಯಾನ್‌, ಪದ್ಮಜಾ ಮಣ್ಣೂರು, ಶ್ಯಾಮಲಾ ಅವಿನಾಶ್‌ ಶಾಸ್ತ್ರಿ ಸಹಿತ ಅನೇಕ ಗಣ್ಯರು ಉಪಸ್ಥಿತರಿದ್ದು ಮಹಾ ನಗರಾದ್ಯಂತದ ಸುಮಾರು 15 ಕ್ಕೂ ಮಿಕ್ಕಿದ ಭಜನ ಮಂಡಳಿಗಳು ಶಾಸ್ತ್ರೋಕ್ತವಾಗಿ ಭಜನೆ ನೆರವೇರಿಸಿದವು. ಸುನಂದಾ ಉಪಾಧ್ಯಾಯ ವಂದಿಸಿದರು. 

ಚಿತ್ರ- ವರದಿ:ರೋನ್ಸ್‌ ಬಂಟ್ವಾಳ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.