ಕಥೆಗಾರ ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥಾ ಸಂಕಲನ ಬಿಡುಗಡೆ


Team Udayavani, Sep 12, 2018, 3:49 PM IST

1109mum03.jpg

ಮುಂಬಯಿ: ಕವಿ,  ಲೇಖಕರು ಸಮಾಜಕ್ಕೆ ಬದ್ಧರಾಗಿರಬೇಕು. ಒಳ್ಳೆಯ ಸಂಸ್ಕಾರ ಪಡೆದವರು ಉನ್ನತ ಮೌಲ್ಯವುಳ್ಳ ಕಾವ್ಯವನ್ನು ರಚಿಸುತ್ತಾರೆ. ಸರ್ವೋದಯವನ್ನು ಪ್ರತಿಪಾದಿಸುವುದು ಸೃಜನಶೀಲ ಮನಸುಗಳ ಮುಖ್ಯ ಧ್ಯೇಯವಾಗಿರಬೇಕು ಎಂದು ಕನ್ನಡದ ಹೆಸರಾಂತ ಸಾಹಿತಿ, ಪದ್ಮಶ್ರೀ ಪುರಸ್ಕೃತ ಡಾ| ದೊಡ್ಡರಂಗೇಗೌಡ ಅವರು ನುಡಿದರು.

ಅವರು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯವು ಸೆ. 8ರಂದು ಕಲಿನಾ ಕ್ಯಾಂಪಸ್ಸಿನ ಕವಿವರ್ಯ ಡಾ| ಕುಸುಮಾಗ್ರಜ ಮರಾಠಿ ಭಾಷಾ ಭವನದಲ್ಲಿ ಆಯೋಜಿಸಿದ್ದ ಸಾಹಿತಿ ಪೇತ್ರಿ ವಿಶ್ವನಾಥ ಶೆಟ್ಟಿ ಅವರ “ತ್ಯಾಂಪರನ ಡೋಲು’ ಕೃತಿಯನ್ನು ಬಿಡುಗಡೆ ಗೊಳಿಸಿ ಮಾತನಾಡಿದರು.

ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥೆಗಳನ್ನು ಓದಿ ಎರಡೇ ದಿನಗಳಲ್ಲಿ ಮುನ್ನುಡಿ ಬರೆದೆ. ಅವರ ಕಥೆಗಳಲ್ಲಿ ಸಣ್ತೀ ಇದೆ. ಕಥೆ ಹೇಳುವುದು ಹೇಗೆ ಎಂದು ಅವರಿಗೆ ತಿಳಿದಿದೆ. ಅವರು ಕಥೆಗಾರರಾಗಿ ಗೆದ್ದಿದ್ದಾರೆ ಎಂದರು.

ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕೃತಿಯನ್ನು ಪರಿಚಯಿಸಿದ ನ್ಯಾಯವಾದಿ ಕಡಂದಲೆ ಪ್ರಕಾಶ್‌ ಎಲ್‌. ಶೆಟ್ಟಿ ಅವರು, ಪೇತ್ರಿ ಅವರ ಕಥೆಗಳಲ್ಲಿ ಜೀವನಾನುಭವವಿದೆ. ಕಥೆಗಳನ್ನು ಓದುವಾಗ ಇದು ನಮ್ಮ ಜೀವನದಲ್ಲಾದ ಘಟನೆಯೋ ಎಂಬ ಭಾವನೆ ಉಂಟಾಗುತ್ತದೆ. ಋಣ, ಟೋಪಿ, ತ್ಯಾಂಪರನ ಡೋಲು ಮೊದಲಾದ ಹಲವು ಸಶಕ್ತ ಕಥೆಗಳು ಈ ಸಂಕಲನದಲ್ಲಿವೆ.  ಟೋಪಿ ಕಥೆಯು ನಮ್ಮ ಆತ್ಮೀಯರೇ ನಮ್ಮನ್ನು ವಂಚಿಸುವ ಕಥೆಯಾದರೆ ಋಣ ಮಾತೃಪ್ರೇಮದ ತುಡಿತ, ದುಡಿಮೆಯ ಸಂಘರ್ಷವನ್ನು ಸಾರುತ್ತದೆ. ತ್ಯಾಂಪರನ ಡೋಲು ನಮ್ಮ ಊರಿನ ಚಿತ್ರಣವನ್ನು ನೀಡುವುದಲ್ಲದೆ ಹಿಂದಿನ ಕಾಲದಲ್ಲಿದ್ದ ಜಾತಿ, ಮತ, ಭೇದ, ಮೇಲು-ಕೀಳು ತಾರತಮ್ಯಗಳ ಅನಾವರಣ ಮಾಡುತ್ತದೆ. ಮುಗ್ಧ ಯುವಕನಿಗೆ ತ್ಯಾಂಪರನ ಕೊಳಲಿನ ದನಿಯ ಸೆಳೆತ ಜಾತಿಯನ್ನು ಮೀರಿದ್ದಾಗಿರುತ್ತದೆ ಎಂದು ಕಥಾ ಸಂಕಲನವನ್ನು ತೆರೆದಿಟ್ಟರು.

ಕೃತಿಯು ಅಂತರ್ಜಾಲದಲ್ಲಿ ಸುಲಭವಾಗಿ ಓದುಗರಿಗೆ ದೊರೆಯುವ ಇ-ಬುಕ್‌ನ್ನು ಮೈಸೂರು ಶ್ರೀಧರ್‌ ಅವರು ಲೋಕಾರ್ಪಣೆ ಗೊಳಿಸಿದರು.

ಮುಖ್ಯ ಅತಿಥಿ, ಉದ್ಯಮಿ, ಸಮಾಜ ಸೇವಕ ಮುದ್ರಾಡಿ ದಿವಾಕರ ಶೆಟ್ಟಿ ಅವರು,  ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಸಾಹಿತ್ಯದಲ್ಲಿ ಅಪಾರ ಒಲವಿರುವವರು. ನೇರ ನಡೆ, ನುಡಿ ಅವರಲ್ಲಿ ನಾನು ಮೆಚ್ಚುವ ಗುಣ. ಅವರು ಬರೆಯುವ ಶೈಲಿಯೇ ಭಿನ್ನ. ಅವರು ಇನ್ನಷ್ಟು ಬರೆಯಬೇಕು ಎಂದು ಹಾರೈಸಿದರು.

ಬಾಂಬೆ ಬಂಟ್ಸ್‌ ಅಸೋಸಿಯೇಶನ್‌ನ
ಮಾಜಿ ಅಧ್ಯಕ್ಷ ಶ್ಯಾಮ್‌ ಎನ್‌. ಶೆಟ್ಟಿ ಮಾತ ನಾಡಿ, ನಮಗೆ ಸಾಹಿತ್ಯದ ಕುರಿತು ಹೆಚ್ಚೇನೂ ಗೊತ್ತಿಲ್ಲದಿದ್ದರೂ ಪೇತ್ರಿ ವಿಶ್ವನಾಥ ಶೆಟ್ಟಿಯಂಥ‌ ಸಾಹಿತಿಗಳ ಒಡನಾಟ ಆ ಕ್ಷೇತ್ರದಲ್ಲಿ ಆಸಕ್ತಿಯನ್ನು ಹುಟ್ಟಿಸಿದೆ. ಬರವಣಿಗೆಯ ಮೂಲಕ ಅವರು ಕ್ರಿಯಾಶೀಲರಾಗಿರಲಿ ಎಂಬುವುದು ನನ್ನ ಹಾರೈಕೆ ಎಂದರು. 

ಬೆಂಗಳೂರಿನ ಟೋಟಲ್‌ ಕನ್ನಡದ ಪ್ರಕಾಶಕ ಲಕ್ಷ್ಮೀಕಾಂತ್‌ ಮಾತನಾಡಿ, ಪೇತ್ರಿ ವಿಶ್ವನಾಥ ಶೆಟ್ಟಿ ಅವರ ಕಥಾ ಸಂಕಲನವನ್ನು ಪ್ರಕಟಿಸಿದ ಖುಷಿ ಇದೆ. ಅವರ ಕಥೆಗಳು ನನಗೆ ತುಂಬಾ ಖುಷಿ ಕೊಟ್ಟಿವೆ ಎಂದರು.

ಅಧ್ಯಕ್ಷತೆ ವಹಿಸಿದ ಮುಂಬಯಿ ವಿಶ್ವವಿದ್ಯಾ ಲಯ ಕನ್ನಡ ವಿಭಾಗ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಮಾತನಾಡಿ, ಪೇತ್ರಿ ವಿಶ್ವನಾಥ ಶೆಟ್ಟಿ ಅವರು ಬದುಕಿನ ಅನುಭವಗಳನ್ನು ಕಥೆಯಾಗಿಸಿದ್ದಾರೆ. ಅವರ ಕೃತಿ ಮುಂಬಯಿ ವಿವಿಯಲ್ಲಿ ಬಿಡುಗಡೆಗೊಂಡಿರುವುದು ಕನ್ನಡಿಗರಿಗೆ ಹೆಮ್ಮೆ ಎಂದರು. 
ಖ್ಯಾತ ಗಾಯಕರಾದ ಗಣೇಶ್‌ ಎರ್ಮಾಳ್‌ ಹಾಗೂ ಲಕ್ಷಿ$¾à ಸತೀಶ್‌ ಶೆಟ್ಟಿ ಅವರಿಂದ “ಗೀತ ಗುಂಜನ’ ನೆರವೇರಿತು.

ಕನ್ನಡ ವಿಭಾಗದ  ಸಹಪ್ರಾಧ್ಯಾಪಕಿ ಡಾ| ಪೂರ್ಣಿಮಾ ಸುಧಾಕರ ಶೆಟ್ಟಿ ಅವರು ಅತಿಥಿ
ಗಳನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರು. 

ಸುಶೀಲಾ ದೇವಾಡಿಗ ಅವರ ನೇತೃತ್ವದಲ್ಲಿ ಪೂರ್ತಿ ಕಾರ್ಯಕ್ರಮವನ್ನು ಮುಂಬಯಿ ಆಕಾಶವಾಣಿಯವರು ಧ್ವನಿ ಮುದ್ರಣ ಮಾಡಿದರು. 

ವಿಭಾಗದ ಸಂಶೋಧನ ವಿದ್ಯಾರ್ಥಿಗಳಾದ ಸುರೇಖಾ ದೇವಾಡಿಗ, ಸುರೇಖಾ ರಾವ್‌, ಕುಮುದಾ ಆಳ್ವ, ಅನಿತಾ ಶೆಟ್ಟಿ, ಉದಯ ಶೆಟ್ಟಿ, ಸೋಮಶೇಖರ ಮಸಳಿ, ದಿನಕರ ನಂದಿ ಮೊದಲಾದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಾನು ಶಾಲೆಗಿಂತ ಗ್ರಂಥಾಲಯದಲ್ಲಿ ಹೆಚ್ಚು ಓದಿದವನು. ಹೊಟ್ಟೆ ಹೊರೆಯಲು ಮಾಡುತ್ತಿದ್ದ ಸಣ್ಣ ವ್ಯಾಪಾರದ ನಡುವೆಯೂ ಪುಸ್ತಕ ನನ್ನ ಸಂಗಾತಿಯಾಗಿತ್ತು. ನಾನು ಕಥೆಗಾರನಾಗಬೇಕೆಂದು ಬಯಸಿದವನಲ್ಲ. ಜೀವನಾನುಭವಗಳನ್ನು ಬರೆಯುತ್ತಾ ನಾನೂ ಕಥೆ ಬರೆಯಬಲ್ಲೆನೆಂಬ ಧೈರ್ಯ, ಹುಮ್ಮಸ್ಸು ನನ್ನಲ್ಲಿ ಮೂಡಿದೆ. ಡಾ| ದೊಡ್ಡರಂಗೇಗೌಡರ ಮುನ್ನುಡಿಯ ಸೇಸೆ, ಡಾ|  ಜಿ.ಎನ್‌. ಉಪಾಧ್ಯ ಅವರ ಸಲಹೆ ನನ್ನಲ್ಲಿ  ಓದುವ ಛಲ, ಬರೆಯುವ ಆಸಕ್ತಿ ಹೆಚ್ಚಿಸಿದೆ. ಬದುಕು ಕಲಿಸಿದ ಪಾಠ, ಶಿಕ್ಷಕರಿಂದ ಕಲಿತಿರುವುದಕ್ಕಿಂತ ಹೆಚ್ಚು.
-ಪೇತ್ರಿ ವಿಶ್ವನಾಥ ಶೆಟ್ಟಿ, ಕಥೆಗಾರ 

ಟಾಪ್ ನ್ಯೂಸ್

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Vijayendra (2)

PM ಮೋದಿಯವರಿಂದ ಏ.28 ಮತ್ತು 29 ರಂದು 5 ಕಡೆ ಪ್ರಚಾರ: ವಿಜಯೇಂದ್ರ ಮಾಹಿತಿ

Lokayukta

Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

Transfer order: ರಾಜ್ಯದ 388 ನ್ಯಾಯಾಧೀಶರ ವರ್ಗಾವಣೆ ಮಾಡಿ ಆದೇಶ

1-WQEWQEWQ

Eshwarappa ಅವರಿಂದ ನಾನೇನು ಕಲಿಯಬೇಕಾಗಿಲ್ಲ: ಗೀತಾ ಶಿವರಾಜ್ ಕುಮಾರ್

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Odisha: ಎನ್‌ಕೌಂಟರ್‌; ಇಬ್ಬರು ನಕ್ಸಲರ ಹತ್ಯೆ

Kundapur: ಕುಸಿದು ಬಿದ್ದು ಸಾವು

Kundapur: ಕುಸಿದು ಬಿದ್ದು ಸಾವು

Electric shock: ಯುವಕನ ಸಾವು

Electric shock: ಯುವಕನ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.