ಕವಿ, ವಿಮರ್ಶಕ ವಿ. ಎಸ್‌. ಶ್ಯಾನ್‌ಭಾಗ್‌ ಅವರ ಎರಡು ಕೃತಿಗಳ ಬಿಡುಗಡೆ


Team Udayavani, May 30, 2018, 4:13 PM IST

2905mum05a.jpg

ಮುಂಬಯಿ: ಕವಿತೆಯೊಂದರಲ್ಲಿ ವಕ್ರತೆ ಬಹು ಮುಖ್ಯವಾದುದು. ವಕ್ರವಾಗಿ ದ್ದಾಗಲೇ ಅದು ಕವಿತೆ ಎನಿಸುವುದು. ಧಾವಂತದ ಈ ಮಹಾನಗರದಲ್ಲಿ ಸಾಂಸ್ಕೃತಿಕ ಆಸಕ್ತಿಯನ್ನು ಉಳಿಸಿ ಕೊಳ್ಳುವುದು ಕಷ್ಟವಿದ್ದರೂ, ಶ್ಯಾನ್‌ಭಾಗ್‌ರವರಂತಹ ಕವಿಗಳು ಕಾವ್ಯ ಪರಂಪರೆಯ ಜೊತೆ ಸಂವಾದ ನಡೆಸುತ್ತಿದ್ದಾರೆ, ಮುಖಾಮುಖೀ ಆಗಿದ್ದಾರೆ ಎನ್ನುವುದು ಸಂತೋಷದ ಸಂಗತಿಯಾಗಿದೆ ಎಂದು ಪ್ರಸಿದ್ಧ ಕವಿ, ವಿಮರ್ಶಕ ಸುಬ್ರಾಯ ಚೊಕ್ಕಾಡಿ ಇವರು ನುಡಿದರು.

ಮೇ 27ರಂದು ಮಾಟುಂಗ ಕನ್ನಡ ಸಂಘ ಮುಂಬಯಿ ಮತ್ತು ಕವಿತಾ ಪ್ರಕಾಶನದ ಆಶ್ರಯದಲ್ಲಿ ಕನ್ನಡ ಸಂಘದ ಸಭಾಗೃಹದಲ್ಲಿ ನಗರದ ಕವಿ, ವಿಮರ್ಶಕ ವಿ. ಎಸ್‌. ಶ್ಯಾನ್‌ಭಾಗ್‌ ಅವರ “ಒದ್ದೆ ಬಳಪದ ಹಾದಿ’ ಕವನ ಸಂಕಲನ ಮತ್ತು “ಮುಂಬಯಿ ಎನ್ನುವ ಮಾನಸಿಕ ಕ್ರಿಯೆ’ ಲೇಖನಗಳ ಸಂಗ್ರಹ ಕೃತಿಗಳನ್ನು ಬಿಡುಗಡೆಗೊಳಿಸಿ ಮಾತನಾಡಿದ ಇವರು, ಇಲ್ಲಿನ ಕವಿತೆಗಳೆಲ್ಲ ಅಂತಧ್ವìನಿಗಳಾಗಿ ಬಂದಿವೆ. ಬರವಣಿಗೆ ಸಲೀಸು ಆಗಬಾರದು ಎನ್ನುತ್ತಾ, ಸಲೀಸು ಆದಾಗಲೆಲ್ಲ ಲೇಖಕ ಬೇರೆ ಮಾಧ್ಯಮದತ್ತ ಹೊರಳಿ ತನ್ನ ಸೃಜನಶೀಲತೆಯನ್ನು ಅಭಿವ್ಯಕ್ತಿಸುವ ಪ್ರಯತ್ನಕ್ಕೆ ತೊಡಗು ತ್ತಾನೆ. ಒಬ್ಬ ಸಾಹಿತಿಗೆ ಬಾಲ್ಯದ ನೆನಪುಗಳೇ ಮೂಲ ಬಂಡವಾಳ. ಆನಂತರ ಕವಿತೆಗಳು ಬೌದ್ಧಿಕವಾಗಿ ಹುಟ್ಟಿಕೊಂಡದ್ದು ಎಂಬ ಮಾತನ್ನು ಇಲ್ಲಿ ನೆನಪಿಸಿಕೊಳ್ಳಬೇಕು ಎಂದರು.

“ಮುಂಬಯಿ ಎನ್ನುವ ಮಾನಸಿಕ ಕ್ರಿಯೆ’ ಕೃತಿಯನ್ನು  ಪರಿಚಯಿಸಿದ ಅಕ್ಷಯ ಮಾಸಿಕದ ಸಂಪಾದಕ ಡಾ| ಈಶ್ವರ ಅಲೆವೂರು ಅವರು, ಮುಂಬಯಿಯ ಚಿತ್ರಣವನ್ನು ಇಲ್ಲಿ ರೂಪಕಗಳ ಮೂಲಕ ಶ್ಯಾನ್‌ ಭಾಗ್‌ ಚಿತ್ರಿಸಿದ್ದಾರೆ. ಹಾಗೂ ಕಾಸೊ¾ಪೊಲಿಟನ್‌ ಸಂಸ್ಕೃತಿಯನ್ನು ನೆನಪಿಸುತ್ತಾರೆ. ಮುಂಬಯಿ ಶಹರ ವನ್ನು ಹೇಳುವುದೆಂದರೆ ಅದು ಆನೆ ಮುಟ್ಟಿದ ಕುರುಡನಂತೆ. ಮುಂಬಯಿ ಶಹರದಲ್ಲಿ ಮಾನಸಿಕ ಕ್ರಿಯೆಯ ರೂಪಕಗಳು ಇಲ್ಲಿ ಗಮನ ಸೆಳೆಯುತ್ತದೆ ಎಂದರು.

ಕೃತಿಕಾರ ವಿ. ಎಸ್‌. ಶ್ಯಾನ್‌ಭಾಗ್‌ ಅವರು ಮಾತನಾಡಿ, ತನ್ನ ಬರಹಗಳ ರಚನೆಗೆ ಮೂರು ದಶಕಗಳು ಕಳೆದಿವೆ. ಈ ತನಕ 6 ಕವನ ಸಂಕಲನಗಳು ಬಂದಿವೆ. ಕರ್ನಾಟದಲ್ಲೂ ಮುಂಬ ಯಿಯ ಸಾಹಿತಿಗಳು ಗುರು ತಿಸಿಕೊಳ್ಳುವಂತಾಗಬೇಕು ಎಂದು ಆಶಯ ವ್ಯಕ್ತಪಡಿಸಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಜಿ. ಎಸ್‌. ನಾಯಕ್‌ ಇವರು ಮಾತನಾಡಿ, ಶ್ಯಾನ್‌ಭಾಗ್‌ರಂತಹ ಹಿರಿಯ ಕವಿ, ಲೇಖಕರ ಕೃತಿ ಇಲ್ಲಿ ಬಿಡುಗಡೆ ಆಗುತ್ತಿರುವುದು ಸಂತೋಷದ ವಿಷಯವಾಗಿದೆ. ತಾನು ವೃತ್ತಿಯಿಂದ ನಿವೃತ್ತನಾಗಿದ್ದರೂ ಕನ್ನಡದ ಕೆಲಸಗಳಲ್ಲಿ ಆಸಕ್ತಿ ಉಳಿಸಿಕೊಂಡಿದ್ದೇನೆ. 82ನೇ ವರ್ಷಕ್ಕೆ ಮಾದಾರ್ಪಣೆ ಮಾಡಿರುವ ಈ ಸಂಘ ಮುಂಬಯಿಯ ಪ್ರಮುಖ ಸಂಘಗಳಲ್ಲಿ ಗುರುತಿಸಿಕೊಂಡಿದೆ. ಮುಂದೆಯೂ ಕನ್ನಡ ಸಂಘದ ಕೆಲಸಗಳು ನಿರಂತರವಾಗಿ ನಡೆಯಲಿದೆ. ಅದಕ್ಕಾಗಿ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ಹೇಳಿದರು.

ಪದ್ಮನಾಭ ಸಿದ್ಧಕಟ್ಟೆ ಪ್ರಾರ್ಥನೆ ಗೈದರು. ಸೋಮನಾಥ ಸಿ. ಕರ್ಕೇರ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ಕೃತಿಕಾರ ವಿ. ಎಸ್‌. ಶ್ಯಾನ್‌ಭಾಗ್‌ ಸ್ವಾಗತಿಸಿದರು. ಸುಬ್ರಾಯ ಚೊಕ್ಕಾಡಿ ಅವರ ಜೊತೆ ಸಂವಾದ ಕಾರ್ಯಕ್ರಮ ಜರಗಿತು. ತೇಜು ಪಬಿ¾ಕೇಶನ್‌ ಈ ಕೃತಿಗಳನ್ನು ಪ್ರಕಟಿಸಿತು. ಡಾ| ಸುನೀತಾ ಎಂ. ಶೆಟ್ಟಿ, ಕೆ. ಎಂ. ಕೋಟ್ಯಾನ್‌, ಪುರಂದರ ಸಾಲ್ಯಾನ್‌, ಡಾ| ಮಮತಾ ರಾವ್‌, ಮೊಗವೀರ ಸಂಪಾದಕ ಅಶೋಕ್‌ ಸುವರ್ಣ, ಶ್ರೀನಿವಾಸ ಜೋಕಟ್ಟೆ, ಡಾ| ವಿಶ್ವನಾಥ ಕಾರ್ನಾಡ್‌, ಕನ್ನಡ ಸೇನಾನಿ ಎಸ್‌. ಕೆ. ಸುಂದರ್‌, ಕರುಣಾಕರ ಹೆಜ್ಮಾಡಿ, ಕಮಲಾಕ್ಷ ಸರಾಫ್‌ ಮೊದಲಾದವರು  ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.