“ಬಂದರು ಯೋಜನೆ 2022 ರಲ್ಲಿ ಪೂರ್ಣ’


Team Udayavani, Dec 7, 2020, 8:45 PM IST

“ಬಂದರು ಯೋಜನೆ 2022 ರಲಿ ಪೂರ್ಣ’

ಮುಂಬಯಿ, ಡಿ. 6: ದಕ್ಷಿಣ ಮುಂಬಯಿ ಮತ್ತು ನವಿ ಮುಂಬ ಯಿ ಯನ್ನು ಸಂಪರ್ಕಿಸುವ ಮಹತ್ವಾ ಕಾಂಕ್ಷೆಯ ಬಂದರು ಯೋಜನೆಯಾದ ಮುಂಬಯಿ ಟ್ರಾನ್ಸ್ ಹಾರ್ಬರ್‌ ಲಿಂಕ್‌ ರಸ್ತೆ (ಎಂಟಿಎಚ್‌ಎಲ್) ಯೋಜ ನೆಯ ಕಾಮಗಾರಿ ಶೇ. 35ರಷ್ಟು ಪೂರ್ಣ ಗೊಂಡಿದ್ದು, ಈ ಯೋಜ ನೆಯು 2022ರ ಸೆಪ್ಟಂಬರ್‌ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ನಗರಾಭಿವೃದ್ಧಿ ಸಚಿವ ಮತ್ತು ಮುಂಬಯಿ ಮಹಾನಗರ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಏಕನಾಥ್‌ ಶಿಂಧೆ ಹೇಳಿದ್ದಾರೆ.

ಶುಕ್ರವಾರ ಈ ಯೋಜನೆಯನ್ನು ಪರಿಶೀಲಿ ಸಿದ್ದು, ಸಮಯಕ್ಕೆ ಸರಿಯಾಗಿ ಯೋಜನೆ ಪೂರ್ಣಗೊಳ್ಳಲಿದೆ. ಹಲವು ವರ್ಷ ಗಳಿಂದ ಪ್ರಸ್ತಾವಿಸಲಾಗಿರುವ 22 ಕಿ.ಮೀ. ಯೋಜನೆಯನ್ನು ಮಾರ್ಚ್‌ 2018ರಲ್ಲಿ ಪ್ರಾರಂಭಿಸಲಾಯಿತು. ಪ್ರಸ್ತುತ ಎಂಜಿನಿ ಯರ್‌ಗಳು, ನುರಿತ ಕೌಶ ಲ ರಹಿತ ಕಾರ್ಮಿಕರು ಸೇರಿ ದಂತೆ ಸುಮಾರು ಆರು ಸಾವಿರ ಮಾನವ ಶಕ್ತಿ ಈ ಯೋಜನೆ ಯಲ್ಲಿ ಕಾರ್ಯ ನಿರ್ವ ಹಿ ಸು ತ್ತಿದೆ ಎಂದು ಶಿಂಧೆ ಹೇಳಿದ್ದಾರೆ.

ಲಾಕ್‌ಡೌನ್‌ ಅವಧಿಯಲ್ಲಿ ಕೆಲಸದ ಮೇಲೆ ಪರಿಣಾಮ ಬೀರಿದ್ದರಿಂದಾಗಿ ಯೋಜನೆ ವಿಳಂಬವಾಗಲಿದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ ಕೆಲಸದ ಅವಧಿ ಹೆಚ್ಚುವುದರೊಂದಿಗೆ ಕಾಮಗಾರಿಯನ್ನು ಚುರುಗೊಳಿಸಲಾಗಿದ್ದು, ಹೆಚ್ಚು ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಲಾಗುತ್ತಿದೆ. ಆದ್ದರಿಂದ ಯೋಜನೆ ಯನ್ನು ಸಮಯಕ್ಕೆ ಪೂರ್ಣಗೊಳಿ ಸಬ ಹುದು ಎಂದು ಎಂಎಂಆರ್‌ಡಿಎ ಮೆಟ್ರೋಪಾಲಿಟನ್‌ ಆಯುಕ್ತ ಆರ್‌. ಎ. ರಾಜೀವ್‌ ಹೇಳಿದ್ದಾರೆ.

ಸೇತುವೆಯ ಕೆಳಗೆ ದೋಣಿಗಳ ಸಂಚಾ ರಕ್ಕೆ ಅನುಕೂಲವಾಗುವಂತೆ ಮತ್ತು ಸಮುದ್ರದಲ್ಲಿನ ತೈಲ ರಿಂಗ್‌ಗಳನ್ನು ಹೊಡೆಯದಂತೆ ಧ್ರುವಗಳ ನಡುವೆ ಹೆಚ್ಚಿನ ಅಂತರವನ್ನು ಇಡು ವುದು ಆವಶ್ಯಕ. ಅತ್ಯಾಧುನಿಕ ಆಥೊì ಟ್ರೊಪಿಕ್‌ ಸ್ಟೀಲ್‌ ಡೆಕ್‌ಗಳನ್ನು (ಒಎಸ್‌ಡಿ) ಅಲ್ಲಿ ಬಳಸಲಾಗುತ್ತಿದೆ. ಒಟ್ಟು 22 ಕಿ.ಮೀ ಸೇತುವೆಗಳಲ್ಲಿ 4.1 ಕಿ.ಮೀ ಸ್ಟೀಲ್‌ ಬಾಕ್ಸ್ ಗಿರ್ಡರ್‌ಗಳಾಗಿರುತ್ತವೆ. 90ರಿಂದ 180 ಮೀಟರ್‌ ಉದ್ದದ 29 ಒಎಸ್‌ಡಿಗಳನ್ನು ಬಳಸಲಾಗುತ್ತದೆ. ಈ ಉಕ್ಕಿನ ನಿರ್ಮಾಣದ ವೆಚ್ಚ ಸುಮಾರು 4,300 ಕೋಟಿ ರೂ.ಗಳಷ್ಟಾಗಿದೆ.

ಎಂಟಿಎಚ್‌ಎಲ್‌ ಅನ್ನು ನೇರವಾಗಿ ವಿರಾರ್‌-ಅಲಿಬಾಗ್‌ ಮಲ್ಟಿಮೋಡಲ್‌ ಕಾರಿಡಾರ್‌ಗೆ ವರ್ಲಿ-ಶಿವಿx ಎಲಿವೇಟೆಡ್‌ ರಸ್ತೆ, ಶಿವಿx ಯಿಂದ ಪೂರ್ವ ಫ್ರೀ ವೇ ಮತ್ತು ನವಿ ಮುಂಬಯಿಯಲ್ಲಿ ಸಂಪರ್ಕಿಸಲಾಗುವುದು. ಜೆಎನ್‌ಪಿಟಿ, ರಾಜ್ಯ ಹೆದ್ದಾರಿ 54, ಮುಂಬಯಿ-ಪುಣೆ ಹಳೆಯ ರಾಷ್ಟ್ರೀಯ ಹೆದ್ದಾರಿ, ನವಿ ಮುಂಬಯಿ ವಿಮಾನ ನಿಲ್ದಾಣದತ್ತ ಪ್ರಯಾಣ ಸುಲಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಮುಂಬಯಿ-ಪುಣೆ ಎಕ್ಸ್‌ಪ್ರೆಸ್‌ ವೇ ಚಿರ್ಲೆ ನಿಂದ 8 ಕಿ.ಮೀ ದೂರದಲ್ಲಿದೆ.

ಪ್ರಯಾಣ ಅವಧಿ ಇಳಿಕೆ :  ಈ ಯೋಜನೆ ಪೂರ್ಣಗೊಂಡ ಅನಂತರ, ದಕ್ಷಿಣ ಮುಂಬಯಿ ಯಿಂದ ನವಿ ಮುಂಬಯಿಗೆ ತಲುಪಲು ವ್ಯಯಿಸುವ ಅವಧಿಯಲ್ಲಿ ಸುಮಾರು 40 ನಿಮಿಷಗಳಷ್ಟು ಉಳಿಕೆ ಯಾಗುತ್ತದೆ. ಆದರೆ ಈ ಮಾರ್ಗದಲ್ಲಿ ರಸ್ತೆ ತೆರಿಗೆ ವಿಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಂದಾಜಿನ ಪ್ರಕಾರ ಸುಮಾರು 200 ರೂ.ಗಳ ರಸ್ತೆ ತೆರಿಗೆ ವಿಧಿಸಬಹುದು.

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqwewq

Congress;ಕಾರ್ಕಳ ಕ್ಷೇತ್ರದಿಂದ 40 ಸಾವಿರ ಲೀಡ್ ಗೆ ಪ್ರಯತ್ನ: ಮುನಿಯಾಲು

1-wewqe

Belgavi; ತಂದೆ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸುತ್ತೇವೆ: ಶ್ರದ್ಧಾ ಶೆಟ್ಟರ್

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.