ಪುಣೆ ದೇವಾಡಿಗ ಸಂಘ: ಆಟಿಡೊಂಜಿ ಕೂಟ ಆಚರಣೆ
Team Udayavani, Aug 11, 2017, 3:16 PM IST
ಪುಣೆ: ಪುಣೆ ದೇವಾಡಿಗ ಸಂಘದ ಮಹಿಳಾ ವಿಭಾಗದ ವತಿಯಿಂದ ಆಟಿಡೊಂಜಿ ಕೂಟ ಆಚರಣೆಯು ಆ. 6ರಂದು ನಗರದ ಸ್ವಾರ್ಗೆàಟ್ನಲ್ಲಿರುವ ಜಯಶ್ರೀ ಹಾಲ್ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತುಳುನಾಡಿನ ಹಿರಿಯ ಕೃಷಿಕ ಪಾಂಗಾಳ ಬೊಗ್ಗು ದೇವಾಡಿಗ ಮಾತನಾಡಿ, ಹಿಂದಿನ ದಿನಗಳಲ್ಲಿ ಆಟಿ ತಿಂಗಳೆಂದರೆ ನಿರಂತರವಾಗಿ ಸುರಿಯುತ್ತಿರುವ ಜಡಿಮಳೆ, ಮನೆಯಿಂದ ಹೊರಬರಲಾರದಂತಹ ಪರಿಸ್ಥಿತಿ, ತಿನ್ನಲು ಆಹಾರಕ್ಕೆ ತತ್ವಾರದಂತಹ ಸ್ಥಿತಿಯನ್ನು ಇಂದಿನ ಜನತೆಗೆ ವಿವರಿಸಲೂ ಸಾಧ್ಯವಾಗುತ್ತಿಲ್ಲ. ಆದರೆ ಆ ದಿನಗಳಲ್ಲಿ ಪ್ರಕೃತಿದತ್ತವಾದ ಆಹಾರ ಪದಾರ್ಥಗಳ ಸೇವನೆ, ವಿವಿಧ ಆಚರಣೆಗಳು ಆರೋಗ್ಯಪೂರ್ಣ ಬದುಕಿಗೆ ಪೂರಕವಾಗಿತ್ತು. ಇಂದಿನ ದಿನಗಳಲ್ಲಿ ಬದಲಾದ ವಿದ್ಯಮಾನಗಳಲ್ಲಿಯೂ ವಿವಿಧ ಸಂಘಟನೆಗಳು ನಮ್ಮ ಹಿರಿಯರಿಂದ ನಡೆದುಕೊಂಡು ಬಂದ ನಮ್ಮ ಆಚರಣೆಗಳನ್ನು ಆಚರಿಸುವ ಮೂಲಕ ನಮ್ಮ ತುಳುನಾಡಿನ ಆಹಾರ ಪದ್ಧತಿಗಳನ್ನು ಪರಿಚಯಿಸಿ ಜತೆಗೂಡಿ ಸವಿಯುವಂತಹ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.
ಸಂಘದ ಗೌರವಾಧ್ಯಕ್ಷ ಎ. ಬಿ. ಶೇರಿಗಾರ್ ದಂಪತಿಗಳು ತೆಂಗಿನ ಹಿಂಗಾರವನ್ನು ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಸಂಘದ ಅಧ್ಯಕ್ಷ ಸಚಿನ್ ದೇವಾಡಿಗ, ಸ್ಥಾಪಕಾಧ್ಯಕ್ಷ ಪ್ರಭಾಕರ ಜಿ. ದೇವಾಡಿಗ, ಉಪಾಧ್ಯಕ್ಷ ಕೃಷ್ಣ ಕಲ್ಯಾಣು³ರ್, ಕೋಶಾಧಿಕಾರಿ ಸುರೇಶ್ ಶ್ರೀಯಾನ್ ಉಪಸ್ಥಿತರಿದ್ದು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕು| ಕವನಾ ನಾರಾಯಣ ದೇವಾಡಿಗ, ಸುನೀತಾ ವಿಠಲ್ ದೇವಾಡಿಗ, ವಿಠಲ… ದೇವಾಡಿಗ ಅವರ ಹಾಡು, ಒಗಟು, ಗಾದೆ ಮಾತುಗಳು ಸೇರಿದ್ದ ಸಮಾಜ ಬಾಂಧವರನ್ನು ರಂಜಿಸಿತು.
ಮಹಿಳೆಯರು ಮನೆಯಲ್ಲಿ ತಯಾರಿಸಿ ತಂದ ಪತ್ರೊಡೆ, ತೊಜಂಕ್, ಮಂಜಲ್ದ ಇರೆತ ಗಟ್ಟಿ, ಅಪ್ಪ, ನೇಯಪ್ಪ, ನೀರ್ದೋಸೆ, ತಿಮರೆ ಚಟ್ನಿ, ಉಪ್ಪಡಚ್ಚಿರ್, ತೇವುದ ಗಸಿ, ಕುಕ್ಕುದ ಚಟ್ನಿ ಇತ್ಯಾದಿ ಸುಮಾರು 50ಕ್ಕೂ ಅಧಿಕ ಖಾದ್ಯಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ನವೀನ್ ದೇವಾಡಿಗ, ಸುಧಾಕರ ದೇವಾಡಿಗ, ಯಶವಂತ್ ದೇವಾಡಿಗ, ನಾರಾಯಣ ದೇವಾಡಿಗ, ಜನಾದìನ ದೇವಾಡಿಗ, ಸಂತೋಷ್ ದೇವಾಡಿಗ, ವಿಠಲ ದೇವಾಡಿಗ, ವಾಮನ ದೇವಾಡಿಗ, ಸತೀಶ್ ದೇವಾಡಿಗ, ಶಶಿಕಾಂತಿ ದೇವಾಡಿಗ ಹಾಗೂ ವಸಂತಿ ದೇವಾಡಿಗ ಉಪಸ್ಥಿತರಿದ್ದರು. ಸುಧಾಕರ ದೇವಾಡಿಗ ಆಹಾರ ವ್ಯಂಜನಗಳನ್ನು ತಯಾರಿಸಿ ತಂದ ಮಹಿಳೆಯರನ್ನು ಅಭಿನಂದಿಸಿ ವಂದಿಸಿದರು. ಪ್ರಿಯಾ ಎಚ್. ದೇವಾಡಿಗ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
K. Jayaprakash Hegde; ಮೀನುಗಾರಿಕೆ, ಪ್ರವಾಸೋದ್ಯಮದ ಅಭಿವೃದ್ದಿಗೆ ಹೆಚ್ಚಿನ ಆಧ್ಯತೆ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
ಕ್ರಿಕೆಟ್ ಬಗ್ಗೆ ಕಿಂಚಿತ್ತೂ ಜ್ಞಾನವಿಲ್ಲದ ವ್ಯಕ್ತಿಗೆ ಡ್ರೀಮ್11ನಲ್ಲಿ ಒಲಿಯಿತು 1.5 ಕೋಟಿ
IPL; ಸ್ಟಾಯಿನಿಸ್ ಏಟಿಗೆ ತವರಲ್ಲೆ ಚಾಂಪಿಯನ್ ಚೆನ್ನೈ ಠುಸ್!
Congress vs BJP; ಬ್ರಹ್ಮಾವರದಲ್ಲಿ ಶಕ್ತಿ ಪ್ರದರ್ಶನದ ವೇದಿಕೆ!