ರಾಮರಾಜ ಕ್ಷತ್ರಿಯ ಸಂಘ ಮುಂಬಯಿ: ಗಣೇಶೋತ್ಸವ
Team Udayavani, Sep 26, 2018, 4:21 PM IST
ಮುಂಬಯಿ: ರಾಮರಾಜ ಕ್ಷತ್ರಿಯ ಮುಂಬಯಿ ಇದರ ವತಿ ಯಿಂದ ವಾರ್ಷಿಕ ಗಣೇಶೋತ್ಸವ ಸಂಭ್ರಮವು ಸಾಕಿನಾಕಾದ ಕಾವೇರಿ ಕಾಂಪ್ಲೆಕ್ಸ್ನಲ್ಲಿರುವ ಸಂಘದ ಕಚೇರಿಯಲ್ಲಿ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಘದ ಅಧ್ಯಕ್ಷ ಪೂರ್ಣಾನಂದ ಶೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ನೆರವೇರಿತು.
ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಮುಂಜಾನೆಯಿಂದ ಗಣಪತಿ ಪ್ರತಿಷ್ಠಾಪನೆ, ನಂತರ ಸಂಘದ ಕಾರ್ಯದರ್ಶಿ ರತ್ನಾಕರ ಬಟ್ವಾಡಿ ಮತ್ತು ರೂಪಾ ಬಂಟ್ವಾಡಿ ದಂಪತಿಯ ಯಜಮಾನತ್ವದಲ್ಲಿ ಗಣಹೋಮ ನೆರವೇರಿತು. ಶ್ರೀ ಸತ್ಯ ನಾರಾಯಣ ಪೂಜೆಯನ್ನು ಶೇಷಯ್ಯ ಕೋತ್ವಾಲ್ ಮತ್ತು ಸವಿತಾ ಕೋತ್ವಾಲ್ ದಂಪತಿ ನೆರವೇರಿಸಿದರು. ಪೂಜಾ ವಿಧಿ-ವಿಧಾನಗಳನ್ನು ಮಧುಸೂದನ್ ಭಟ್ ನೆರವೇರಿಸಿದರು. ಅನಂತರ ಅನ್ನಸಂತರ್ಪಣೆ ನೇರವೇರಿತು.
ಇದೇ ಸಂದರ್ಭದಲ್ಲಿ ನೆರವೇರಿದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ರಾಧಾಕೃಷ್ಣ ಯು., ಲಕ್ಷ್ಮೀಶ ಹವಾಲ್ದಾರ್ ಅವರನ್ನು ಪುಷ್ಪಗುತ್ಛ, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ವೇದಿಕೆಯಲ್ಲಿ ಬಿ. ಗಣಪತಿ, ದೇವರಾಯ ಎಂ. ಶೇರಿಗಾರ್. ಶಂಕರ ಮುಧ್ದೋಡಿ, ಪ್ರಕಾಶ ಭಟ್. ದಯಾನಂದ ಜಿ. ಶೇರೆಗಾರ್, ಡಾ| ದೇವದಾಸ್, ಶ್ರೀನಿವಾಸ ಕೆ., ವೆಂಕಟೇಶ್ ಬಿಜೂರು, ಕೆ. ವಿ. ಹೆಗ್ಡೆ, ಶುಭಾ ವಿ. ರಾವ್, ವಿಪುಲ್ ಎಸ್. ನಾಯಕ್, ರಾಜಶೇಖರ ಹೆಗ್ಡೆ, ಸತೀಶ್ ಕಳೂರು, ಸಂಘದ ಉಪಾಧ್ಯಕ್ಷ ವಿಶ್ವನಾಥ ಎಂ. ಶೇರೆಗಾರ್, ಕೋಶಾಧಿಕಾರಿ ಆರ್. ಕೆ. ದಿನೇಶ್, ಕೆ. ವಿಶ್ವನಾಥ ಶೇರೆಗಾರ್, ಪಿ. ಸುಧೀರ್ ಶೇರೆಗಾರ್, ಜಿ. ದಿನೇಶ್ ಶೇರೆಗಾರ್, ಅಣ್ಣಯ್ಯ ಶೇರೆಗಾರ್, ನಾಗರಾಜ ಆರ್. ಶೇರೆಗಾರ್, ವಾಸುದೇವ ಶೇರೆಗಾರ್, ಅನೂಪ ಕುಂದಾಪುರ, ಕಿರಣ್ ಆರ್. ಶೇರೆಗಾರ್, ಸಂತೋಷ್ ಶೇರೆಗಾರ್, ಸುರೇಂದ್ರ ಆರ್. ಶೇರೆಗಾರ್ ಮತ್ತಿತರರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನೆರವೇರಿತು. ದ್ವಿತೀಯ ದಿನ ಸಂಜೆ ಮೆರವಣಿಗೆ ಮೂಲಕ ಮಹಾಗಣಪತಿಯನ್ನು ವಿಸರ್ಜಿಸಲಾಯಿತು. ಸಮಾಜ ಬಾಂಧವರು, ಸದಸ್ಯ ಬಾಂಧವರು, ತುಳು-ಕನ್ನಡಿಗರು ಅಧಿಕ ಸಂಖ್ಯೆ ಯಲ್ಲಿ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಸಂಸ್ಥೆಯ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗ ದವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್