ಬಿಲ್ಲವರ ಅಸೋಸಿಯೇಶನ್ ಸಂಚಾಲಿತ ಭಾರತ್ ಬ್ಯಾಂಕ್ ಸಿಬಂದಿ ನಿವೃತ್ತಿ
Team Udayavani, Jul 5, 2021, 2:26 PM IST
ಮುಂಬಯಿ: ಬಿಲ್ಲವರ ಅಸೋಸಿ ಯೇಶನ್ ಮುಂಬಯಿ ಸಂಚಾಲಿತ ಭಾರತ್ ಕೋ – ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಇದರ ನಾಲ್ವರು ಅಧಿಕಾರಿಗಳು ಸೇವಾ
ನಿವೃತ್ತಿ ಹೊಂದಿದರು.
ಭಾರತ್ ಬ್ಯಾಂಕ್ ಕೇಂದ್ರ ಕಚೇರಿಯ ಮಹಾ ಪ್ರಬಂಧಕ ವಾಸುದೇವ ಎಂ. ಸಾಲ್ಯಾನ್ ಅವರು 37 ವರ್ಷಗಳ ಸೇವಾವಧಿ ಬಳಿಕ, ಕುರ್ಲಾ ಪಶ್ಚಿಮ ಶಾಖೆಯ ಸಹಾಯಕ ಮಹಾ ಪ್ರಬಂಧಕ ರಮೇಶ್ ಎಚ್. ಪೂಜಾರಿ ಅವರು 37 ವರ್ಷಗಳ ಸೇವಾವಧಿ
ಬಳಿಕ, ಪೊವಾಯಿ ಶಾಖೆಯ ಪ್ರಬಂಧಕ ಪ್ರಕಾಶ್ ಆರ್. ಅಮೀನ್ ಅವರು 35 ವರ್ಷಗಳ ಸೇವಾವಧಿ ಬಳಿಕ ಹಾಗೂ ದಹಿಸರ್ ಶಾಖೆಯ ಅಧಿಕಾರಿ ಕೃಷ್ಣಪ್ಪ ಎಸ್. ಪೂಜಾರಿ ಅವರು 32 ವರ್ಷಗಳ ಸೇವಾವಧಿ ಬಳಿಕ ಜೂ. 30ರಂದು ನಿವೃತ್ತಿ ಹೊಂದಿದ್ರು. ಇದೇ ದಿನ ಇವರಿಗೆ ವಿದಾಯ ಕಾರ್ಯಕ್ರಮವನ್ನು ಗೋರೆಗಾಂವ್ ಪೂರ್ವದ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಂಕ್ನ ಆಡಳಿತ ನಿರ್ದೇಶಕ ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ವಿದ್ಯಾನಂದ ಎಸ್. ಕರ್ಕೇರ, ಜಂಟಿ ಆಡಳಿತ ನಿರ್ದೇಶಕ ದಿನೇಶ್ ಬಿ. ಸಾಲ್ಯಾನ್, ಮುಖ್ಯ ಮಾಹಿತಿ ಅಧಿಕಾರಿ ನಿತ್ಯಾನಂದ ಎಸ್. ಕಿರೋಡಿಯನ್, ಮಹಾ ಪ್ರಬಂಧಕರಾದ ಮಹೇಶ್ ಬಿ. ಕೋಟ್ಯಾನ್, ವಿಶ್ವನಾಥ ಜಿ. ಸುವರ್ಣ, ಉಪ ಮಹಾ ಪ್ರಬಂಧಕರು, ಸಹಾಯಕ ಮಹಾ ಪ್ರಬಂಧಕರು ಮತ್ತು ಸಿಬಂದಿ ಉಪಸ್ಥಿತರಿದ್ದು, ನಿವೃತ್ತರ ಮುಂದಿನ ಬದುಕಿಗೆ ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Dublin; ಆಸೀಸ್ ಸರಣಿ ಮುಂದೂಡಿದ ಐರ್ಲೆಂಡ್
T20 Cricket: “ವಿಂಡೀಸ್ ಪರ ಟಿ20 ವಿಶ್ವಕಪ್ ಆಡಲ್ಲ’: ಸುನೀಲ್ ನಾರಾಯಣ್ ಸ್ಪಷ್ಟ ನುಡಿ
Kyrgyzstan; ಹೆಪ್ಪುಗಟ್ಟಿದ ಜಲಪಾತದಲ್ಲಿ ಸಿಲುಕಿ ಆಂಧ್ರದ ವಿದ್ಯಾರ್ಥಿ ಸಾವು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!