ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರ: ದುರ್ಗಾಹೋಮ
Team Udayavani, Nov 1, 2019, 6:06 PM IST
ಮುಂಬಯಿ, ಅ. 31: ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಪಾಲ್ಘರ್ ಜಿಲ್ಲಾಯಾದ್ಯಂತ ಇರುವ ತುಳು-ಕನ್ನಡಿಗ ಭಕ್ತಾದಿಗಳನ್ನು ಒಂದೆಡೆ ಸೇರಿಸುತ್ತಿರುವ ಬೊಯಿಸರ್ ಪಶ್ಚಿಮದ ಸದ್ಗುರು ಶ್ರೀ ನಿತ್ಯಾನಂದ ಸ್ವಾಮಿ ಮಂದಿರದಲ್ಲಿ ದುರ್ಗಾಹೋಮ ಮತ್ತು ಕಲಶ ವಿಸರ್ಜನ ಕಾರ್ಯಕ್ರಮವು ನಡೆಯಿತು.
ದೇವಳದ ಗರ್ಭಗುಡಿಯ ಎದುರಿನ ವಿಶಾಲ ಪ್ರಾಂಗಣದಲ್ಲಿ ದುರ್ಗಾಕಲಶ ಸ್ಥಾಪನೆಗೈದು ಮಂದಿರದ ಅರ್ಚಕರಾದ ರಾಜೇಶ್ ಶಾಂತಿ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ರಮಾನಂದ ಪೂಜಾರಿ ಮತ್ತು ರವಿ ರೈ ಅವರು ಶ್ರೀ ದುರ್ಗಾ ಹವನದಲ್ಲಿ ಯಜಮಾನ ಸೇವೆಯ ನೇತೃತ್ವ ವಹಿಸಿದ್ದರು. ನವದುರ್ಗೆಯ ಆರಾಧನೆಯಲ್ಲಿ ಸರಸ್ವತೀ, ಲಕ್ಷ್ಮೀ ಮತ್ತು ದುರ್ಗೆಯ ರೂಪದಲ್ಲಿ ಪೂಜಿಸುವಾಗ ನಮ್ಮಲ್ಲಿಯ ಅರಿಷಡ್ವರ್ಗಗಳನ್ನು ಜಯಿಸಿ ಪರಿಶುದ್ಧರಾಗುವುದೇ ನವರಾತ್ರಿಯ ಮೂಲ ಉದ್ದೇಶವಾಗಿದೆ ಎಂದು ಪುರೋಹಿತ ರಾಜೇಶ್ ಭಟ್ ಇದೇ ಸಂದರ್ಭದಲ್ಲಿ ವಿವರಿಸಿದರು.
ಮಂದಿರದ ವಿಶ್ವಸ್ಥ ಮಂಡಳಿಯ ಶ್ರೀನಿವಾಸ ಕೋಟ್ಯಾನ್ ಅವರು ನಿತ್ಯಾನಂದ ಮಂದಿರದ ವಾಸ್ತುವನ್ನು ನಿರ್ಮಿಸಿದ ದಿವಂಗತ ದಾಮೋದರ್ ನಾಯ್ಕ ಅವರ ಸಮಾಜಪರ ದೂರದೃಷ್ಟಿಯನ್ನು ನೆನಪಿಸುತ್ತಾ, ದೇಗುಲದ ಹೆಸರಿನಲ್ಲಿ ಸ್ಥಾಪಿಸಿದ ವಾಸ್ತುವಿನಲ್ಲಿ ವರ್ಷವಿಡೀ ಜರಗುವ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪಾಲ್ಘರ್ ಜಿಲ್ಲಾ ಪರಿಸರದಲ್ಲಿ ಇರುವ ತುಳು-ಕನ್ನಡಿಗ ಬಂಧುಗಳನ್ನು ಒಂದೆಡೆ ಒಟ್ಟುಗೂಡಿಸುವಂತಹ ಒಳ್ಳೆಯ ಕೆಲಸ ಮಾಡುತ್ತಿದೆ. ಮಂದಿರದ ಸ್ಥಾಪನೆಯಾಗುವ ದಿನದಂದು ಉಪಸ್ಥಿತರಿದ್ದ ಎಲ್ಲರ ಸಮ್ಮುಖದಲ್ಲಿ ಜರಗಿದ ಕೆಲವು ವಿಶೇಷ ವಾಸ್ತವ ಸಂಗತಿಗಳನ್ನು ಉಲ್ಲೇಖೀಸಿ ಮಂದಿರದ ಪೂಜಾ ಸ್ಥಳವು ದೈವೀ ಕೃಪೆ ಹಾಗೂ ಕಾರ್ಣಿಕವನ್ನು ಹೊಂದಿರುವುದಕ್ಕೆ ಈ ಘಟನೆಗಳೇ ಸಾಕ್ಷಿ ಎಂದು ವಿವರಿಸಿದರು.
ದುರ್ಗಾ ಹವನದ ನಂತರ ಮಹಿಳಾ ಭಜನ ವೃಂದದವರಿಂದ ಗರ್ಬಾ ನೃತ್ಯಪ್ರದಕ್ಷಿಣೆ ಸೇವೆ ನಡೆಯಿತು. ಮಹಾಮಂಗಳಾರತಿಯ ಅನಂತರ ಶ್ರೀ ದುರ್ಗಾ ಕಲಶದ ವಿಸರ್ಜನಾ ಕಾರ್ಯಕ್ರಮ ಜರಗಿತು. ಡಿ. 27 ರಂದು ಜರಗಲಿರುವ ಮಂದಿರದ ವಾರ್ಷಿಕ ಸ್ಥಾಪನಾ ದಿನದ ನಿಮಿತ್ತ ಜರಗುವ ಕಾರ್ಯಕ್ರಮಗಳ ಬಗ್ಗೆ ಸಭೆಯಲ್ಲಿ ಪ್ರಕಟಿಸಲಾಯಿತು. ವಿವಿಧ ಕ್ಷೇತ್ರಗಳ ಗಣ್ಯರು, ಭಕ್ತವೃಂದದ ಸದಸ್ಯರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ : ಪಿ. ಆರ್. ರವಿಶಂಕರ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ