ಮೀರಾರೋಡ್ ಪೂ. ಶನೀಶ್ವರ ಮಂದಿರದಲ್ಲಿ ಸಾಧಕರಿಗೆ ಸಮ್ಮಾನ
Team Udayavani, Mar 3, 2017, 4:19 PM IST
ಮುಂಬಯಿ: ಮೀರಾರೋಡ್ ಪೂರ್ವದ ಮೀರಾಧಾಮ್ ಸೊಸೈಟಿಯ ಸಮೀಪದಲ್ಲಿರುವ ನ್ಯೂ ಪ್ಲೆಸೆಂಟ್ ಪಾರ್ಕ್ನಲ್ಲಿರುವ ಶ್ರೀ ಶನೀಶ್ವರ ಸೇವಾ ಚಾರಿಟೇಬಲ್ ಟ್ರಸ್ಟ್ನ ಶ್ರೀ ಶನೀಶ್ವರ ಮಂದಿರದ 13 ನೇ ವಾರ್ಷಿಕ ಶ್ರೀ ಶನಿಮಹಾಪೂಜೆಯು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಫೆ. 26 ರಂದು ಜರಗಿತು.
ಇದೇ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕಟೀಲು ದುರ್ಗಾಪರಮೇಶ್ವರಿಯ ಪಲ್ಲಕ್ಕಿ ಅಲಂಕಾರವನ್ನು ಮಾಡಿ ನಿಸ್ವಾರ್ಥ ಸೇವೆಗೈದ ಮೀರಾರೋಡ್ನ ಪುರುಷೋತ್ತಮ ಮಂಚಿ, ಗಿರೀಶ್ ಕರ್ಕೇರ ಮತ್ತು ಸದಾನಂದ ಅವರನ್ನು ಮಂದಿರದ ವತಿಯಿಂದ ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು. ಮಂದಿರದ ಹಿರಿಯ ಸದಸ್ಯರುಗಳಾದ ನಾರಾಯಣ ಶೆಟ್ಟಿ, ಇಂದಿರಾ ಶೆಟ್ಟಿ ಅವರನ್ನು ಮಂದಿರದ ವತಿಯಿಂದ ಶಾಲು ಹೊದೆಸಿ, ಕಾಣಿಕೆಯನ್ನಿತ್ತು ಗೌರವಿಸಿ ಸಮ್ಮಾನಿಸಲಾಯಿತು.
ಧಾರ್ಮಿಕ ಕಾರ್ಯಕ್ರಮಗಳು ಬೊರಿವಲಿ ಶ್ರೀ ಕ್ಷೇತ್ರ ಸಾವರಾ³ಡಾದ ಶ್ರೀ ಶನಿಮಂದಿರದ ಪ್ರಧಾನ ಅರ್ಚಕ ಪೆರ್ಡೂರು ವಿಷ್ಣುಮೂರ್ತಿ ಅಡಿಗರ ಸಾರಥ್ಯದಲ್ಲಿ ನಡೆಯಿತು. ಗ್ರಂಥ ವಾಚಕ ಅಚ್ಚುತ ಕೋಟ್ಯಾನ್, ಗೋಪಾಲ್ ದೇವಾಡಿಗ, ಉಷಾ ಶೆಟ್ಟಿಗಾರ್, ಅರ್ಥದಾರಿಗಳಾದ ನಾರಾಯಣ ಶೆಟ್ಟಿ, ಪುರಂದರ ಶ್ರೀಯಾನ್, ಮಂದಿರದ ಗೌರವಾಧ್ಯಕ್ಷ ವಿನೋದ್ ವಾಘಾಸಿಯಾ, ಅಧ್ಯಕ್ಷೆ ವಿದ್ಯಾ ಕರ್ಕೇರ, ಉಪಾಧ್ಯಕ್ಷರಾದ ಗೋಪಾಲ್ ದೇವಾಡಿಗ, ಸಂಪತ್ ಶೆಟ್ಟಿ, ಕಾರ್ಯದರ್ಶಿ ಗುಣಕಾಂತ್ ಶೆಟ್ಟಿ ಕರ್ಜೆ, ಜತೆ ಕಾರ್ಯದರ್ಶಿಗಳಾದ ಲೀಲಾ ಪೂಜಾರಿ, ಜಯಕರ ಶೆಟ್ಟಿ, ಕೋಶಾಧಿಕಾರಿ ಪುರಂದರ ಶ್ರೀಯಾನ್, ಜತೆ ಕೋಶಾಧಿಕಾರಿಗಳಾದ ಅಚ್ಚುತ ಕೋಟ್ಯಾನ್, ಸುಜಾತಾ ಶೆಟ್ಟಿ ಹಾಗೂ ಸರ್ವ ಕಾರ್ಯಕಾರಿ ಸಮಿತಿಯ ಸದಸ್ಯರು, ಪೂಜಾ ಸಮಿತಿಯ ಸದಸ್ಯರುಗಳು ಉಪಸ್ಥಿತರಿದ್ದರು.
ವಿವಿಧ ಸಂಘಟನೆಗಳ ಪದಾಧಿಕಾರಿಗಳು, ದಾನಿಗಳು, ಸ್ಥಳೀಯ ರಾಜಕೀಯ ಧುರೀಣರು, ಸಮಾಜ ಸೇವಕರು, ತುಳು-ಕನ್ನಡಿಗ, ಅನ್ಯಭಾಷಿಗ ಭಕ್ತಾದಿಗಳು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಕಾರ್ಯದರ್ಶಿ ಗುಣಕಾಂತ ಶೆಟ್ಟಿ ಕರ್ಜೆ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾ ಕರ್ಕೇರ, ಪುರಂದರ ಶ್ರೀಯಾನ್ ಅವರು ಅತಿಥಿಗಳನ್ನು ಪ್ರಸಾದವನ್ನಿತ್ತು ಗೌರವಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು