ಮುಂಬಯಿ ರಾಜಾಪುರ ಸಾರಸ್ವತ ಸಂಘದಿಂದ ಸಾರಸ್ವತ ಉತ್ಸವ-2019
Team Udayavani, Feb 14, 2019, 3:45 PM IST
ಮುಂಬಯಿ: ಸಾಮಾಜಿಕ ಕ್ಷೇತ್ರದಲ್ಲಿ ಮಹತ್ತರ ಸಾಧನೆಗೈಯುವ ಮೂಲಕ ವಿಶ್ವಮಟ್ಟದಲ್ಲಿ ಹೆಸರು ಗಳಿಸಿದ ಸರ್ ಎಂ. ವಿಶ್ವೇಶ್ವರಯ್ಯ, ಪಿ. ಟಿ. ಉಷಾ, ಡಾ| ಅಬ್ದುಲ್ ಕಲಾಂ ಅವರಂತಹ ವ್ಯಕ್ತಿತ್ವ ಮೂಡಿಬರುವ ನಿಟ್ಟಿನಲ್ಲಿ ನಮ್ಮ ಸಮಾಜದ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರಯತ್ನಗಳು ನಡೆಯಬೇಕು. ಸಮಾಜದ ಯುವಕರು ಜಾಗತಿಕ ಮಟ್ಟದಲ್ಲಿ ದಾಖಲೆ ನಿರ್ಮಿಸಬೇಕು. ನಮ್ಮಲ್ಲೂ ಒಬ್ಬರಿಗೆ ಭಾರತ ರತ್ನ ಲಭಿಸುವಂತಾಗಬೇಕು ಎಂದು ಪುತ್ತೂರಿನ ಕ್ಯಾಂಪ್ಕೊ ಲಿಮಿಟೆಡ್ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ಅವರು ಅಭಿಪ್ರಾಯಿಸಿದರು.
ಜ. 26ರಂದು ದಹಿಸರ್ ಕಾಶೀ ಮಠದ ಸಭಾಂಗಣದಲ್ಲಿ ನಡೆದ ಮುಂಬಯಿ ರಾಜಾಪುರ ಸಾರಸ್ವತ ಸಂಘ ಆಯೋಜಿಸಿದ ಸಾರಸ್ವತ ಉತ್ಸವ-2019 ಸಂಭ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತಡಿ, ತನ್ನ ಅಧ್ಯಕ್ಷತೆಯಲ್ಲಿರುವ ಪುತ್ತೂರಿನ ಸರಸ್ವತಿ ಸಹಕಾರಿ ಸಂಸ್ಥೆಯು ಸಹಕಾರಿ ಕ್ಷೇತ್ರದಲ್ಲಿನ ಅಧ್ಯಯನದಲ್ಲಿ ಕರ್ನಾಟಕ ರಾಜ್ಯದಲ್ಲಿಯೇ ಮಾದರಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಸಂಸ್ಥೆಯ ಬೆಳವಣಿಗೆಯ ಹಂತದಲ್ಲಿನ ತನ್ನ ಅನುಭವವನ್ನು ಹಂಚಿಕೊಂಡರು.
ಆಮಂತ್ರಿತ ಅತಿಥಿಗಳಾಗಿ ಪಾಲ್ಗೊಂಡ ಕರ್ನಾಟಕ ಸರಕಾರ ರೆವೆನ್ಯೂ ಇಲಾಖೆಯ ಡೆಪ್ಯುಟಿ ಸೆಕ್ರೆಟರಿ ಎಳ್ಳಾರೆ ಸದಾಶಿವ ಪ್ರಭು ಮಾತನಾಡಿ, ನನ್ನ ವೃತ್ತಿರಂಗದಲ್ಲಿನ ಏರ್ಫೋರ್ಸ್ ಪೊಲೀಸ್ ಮತ್ತು ರೆವೆನ್ಯೂ ಇಲಾಖೆಗಳಲ್ಲಿ ದುಡಿಯುವಾಗ ದೇಶದ ಇತರ ಭಾಗಗಳಲ್ಲಿನ ಜನರು ದಕ್ಷಿಣ ಕನ್ನಡದವರ ಬಗ್ಗೆ ಗೌರವ ವ್ಯಕ್ತಪಡಿಸಿದ್ದನ್ನು ತಿಳಿಸಿದರು. ಅಧ್ಯಾತ್ಮ ಚಿಂತನೆಯತ್ತ ಒಯ್ಯುವ ಈ ಭಜನೆಯು ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಮಕ್ಕಳು ಕೂಡಾ ಕಲಿತುಕೊಳ್ಳುವ ಆವಶ್ಯಕತೆಯಿದೆ ಎಂದರು.
ಇನ್ನೋರ್ವ ಅತಿಥಿ ಗೋರೆಗಾಂವ್ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ಶಕುಂತಳಾ ಆರ್. ಪ್ರಭು ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಎಲ್ಲಾ ಸಂಸ್ಥೆಗಳಲ್ಲಿ ಮಹಿಳೆಯರ ಪಾಲು ಪ್ರಶಂಸನೀಯವಾಗಿರುವುದು ಅಭಿಮಾನದ ವಿಷಯವಾಗಿದೆ ಎಂದರು.
ಮುಂಬಯಿ ದಹಿಸರ್ ಕಾಶೀಮಠ ಹಾಗೂ ವಿಟuಲ ರಖುಮಾಯಿ ಮಂದಿರದ ಉಮೇಶ್ ಕಾಮತ್ ಅವರು ಮಾತನಾಡಿ, ಸಂಸ್ಥೆಯ ಚಟುವಟಿಕೆಗಳನ್ನು ಕಂಡು ಸಂ ತೋಷವಾಯಿತು. ಸಕಾರಾತ್ಮಕ ಧ್ಯೇಯ ಗಳನ್ನು ತಮ್ಮದಾಗಿಸಿಕೊಂಡ ಯುವಕರು, ಮಹಿಳೆಯರು, ಮಕ್ಕಳು ಹಿರಿಯರಿಂದ ಬಳುವಳಿಯಾಗಿ ಬಂದ ಸಂಸ್ಕೃತಿಯನ್ನು ಕಾಪಾಡಿಕೊಂಡು ಬಂದಿರುವುದು ಅಭಿಮಾನದ ಸಂಕೇತವಾಗಿದೆ ಎಂದು ನುಡಿದು ಶುಭಹಾರೈಸಿದರು.
ಆಮಂತ್ರಿತ ಅತಿಥಿ ಒಟಿಸ್ ಎಲಿವೇಟರ್ ಸಂಸ್ಥೆಯ ಭರತ್ ಎಸ್. ನಾಯಕ್ ಅವರು ಮಾತನಾಡಿ, ವೃತ್ತಿರಂಗದಲ್ಲಿ ನಾವು ಅನುಭವಿಸುವ ಸೋಲುಗಳಿಂದಲೂ ಬದುಕಿನ ಪಾಠ ಕಲಿಯುತ್ತೇವೆ. ಯುವಕರಿಗೆ ಇಂದು ವಿವಿಧ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು, ಅದನ್ನು ಸಮರ್ಥವಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳನ್ನು ಸಂಸ್ಥೆಯ ವತಿಯಿಂದ ಅಧ್ಯಕ್ಷ ಪ್ರಭಾಕರ ಡಿ. ಬೋರ್ಕರ್ ಗೌರವಿಸಿದರು. ಸಾಂಸ್ಕೃತಿಕ ಕಾರ್ಯಕ್ರ ಮವಾಗಿ ಬೆಳಗ್ಗೆ 9.30ರಿಂದ ಭಕ್ತಿಗೀತೆ, ಭಜನೆ, ದೇಶದ ಸಂಸ್ಕೃತಿಯನ್ನು ಸಾರುವ ನೃತ್ಯ ವೈವಿಧ್ಯ, ಯುವ ವಿಭಾಗದಿಂದ ಜಾಯ್ ಆಫ್ ಗಿವಿಂಗ್ ಕಾರ್ಯಕ್ರಮ ನಡೆಯಿತು. 75 ವರ್ಷ ಮೇಲ್ಪಟ್ಟ ಸಮಾಜದ ಹಿರಿಯರನ್ನು ಗೌರವಿಸಲಾಯಿತು.
ರಾಜಾಪುರ ಸಾರಸ್ವತ ಸಂಘದ ಅಧ್ಯಕ್ಷ ಪ್ರಭಾಕರ ಜಿ. ಬೋರ್ಕರ್, ಕಾರ್ಯದರ್ಶಿ ಪೂಜಾ ಜೆ. ಕಾಮತ್, ಕೋಶಾಧಿಕಾರಿ ನಿತ್ಯಾನಂದ ಪ್ರಭು, ಮಹಿಳಾ ವಿಭಾಗದ ಅಧ್ಯಕ್ಷೆ ಸುಮಾ ವಿ. ನಾಯಕ್, ಕಾರ್ಯದರ್ಶಿ ಸುಲತಾ ಆರ್. ನಾಯಕ್, ಕೋಶಾಧಿಕಾರಿ ಸುನಿತಾ ಎಸ್. ಕಾಮತ್, ಯುವ ವಿಭಾಗದ ಅಧ್ಯಕ್ಷೆ ಮಾಧವಿ ನಾಯಕ್, ಕಾರ್ಯದರ್ಶಿ ವಿರಾಜ್ ನಾಯಕ್, ಕೋಶಾಧಿಕಾರಿ ಮಹೇಶ್ ಪ್ರಭು ಹಾಗೂ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಮಹಿಳಾ ವಿಭಾಗ, ಯುವ ವಿಭಾಗದ ವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಾಲ^ರ್, ಥಾಣೆ, ಮುಂಬಯಿಯ ವಿವಿಧೆಡೆಗಳಿಂದ ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಚಿತ್ರ-ವರದಿ :
ಪಿ. ಆರ್. ರವಿಶಂಕರ್ ಡಹಾಣೂರೋಡ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು