“ರಕ್ತದಾನದಿಂದ ಹಲವು ಜೀವಗಳ ರಕ್ಷಣೆ”
Team Udayavani, May 9, 2021, 1:00 PM IST
ಮುಂಬಯಿ: ಉತ್ತರ ಮುಂಬಯಿ ಸಂಸದ ಗೋಪಾಲ್ ಶೆಟ್ಟಿ ಅವರ ಉತ್ತರ ಮುಂಬಯಿಯಲ್ಲಿ 5,000 ಯುನಿಟ್ ರಕ್ತದಾನ ಅಭಿಯಾ ನದ ಅಂಗವಾಗಿ ಕಾಂದಿವಲಿ ಪಶ್ಚಿಮದಲ್ಲಿ ರಕ್ತದಾನ ಶಿಬಿರ ನಡೆಯಿತು. ಸ್ಥಳೀಯ ನಗರ ಸೇವಕ ಕಮಲೇಶ್ ಯಾಧವ ಅವರ ವತಿಯಿಂದ ನಡೆದ ಈ ರಕ್ತದಾನ ಶಿಬಿರವು ಅವರ ಚಾರ್ಕೋಪ್ನ ಕಾರ್ಯಾಲಯದಲ್ಲಿ ಜರಗಿತು.
ಶಿಬಿರವನ್ನು ಉತ್ತರ ಮುಂಬಯಿಯ ಸಂಸದ, ಕನ್ನಡಿಗ ಗೋಪಾಲ್ ಶೆಟ್ಟಿ ಅವರು ಉದ್ಘಾಟಿಸಿ ಮಾತನಾಡಿದರು. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದಾನ ಬಹಳ ಮುಖ್ಯ. ಲಸಿಕೆ ಪಡೆದ ಬಳಿಕ ರಕ್ತದಾನ ಮಾಡಲು ಸಾಧ್ಯವಿಲ್ಲ. ಆದ್ದರಿಂದ ಲಸಿಕೆ ಪಡೆಯುವ ಮೊದಲು ಎಲ್ಲರು ರಕ್ತದಾನ ಮಾಡಬೇಕು.
ರಕ್ತದಾನದಿಂದ ಹಲವಾರು ಜೀವಗಳು ಉಳಿಯಲಿದೆ. ಇಂದಿನ ಸಂಕಷ್ಟದ ಸಂದರ್ಭದಲ್ಲಿ ಐದು ಸಾವಿರ ಯುನಿಟ್ ರಕ್ತವನ್ನು ಸಂಗ್ರಹಿಸುವ ಅಭಿಯಾನ ಪ್ರಾರಂಭಿಸಿದ್ದೇವೆ. ನಮ್ಮ ಈ ಅಭಿಯಾನಕ್ಕೆ ಎಲ್ಲರಿಂದಲೂ ಸಹಕಾರ ದೊರೆಯಲಿದೆ ಎಂಬ ಭರವಸೆ ನನಗಿದೆ. ಈಗಾಗಲೇ ಹಲವಾರು ರಕ್ತದಾನ ಶಿಬಿರಗಳನ್ನು ಆಯೋಜಿಸಿ ಯಶಸ್ಸು ಸಾಧಿಸಿದ್ದೇವೆ. ಸಹಕರಿಸಿದ ಎಲ್ಲರಿಗೂ ವಂದನೆಗಳು ಎಂದರು.
ಉತ್ತರ ಮುಂಬಯಿ ಶಾಸಕ ರಘುನಾಥ್ ಕುಲಕರ್ಣಿ ಅವರೊಂದಿಗೆ ಪ್ರಮಾಣ ಪತ್ರಗಳನ್ನು ರಕ್ತದಾನಿಗಳಿಗೆ ನೀಡಿ ಸಂಸದರು ಅಭಿಂದಿಸಿದರು. ಗೌರವ ಕಾರ್ಯದರ್ಶಿ ಯೋಗೇಶ್ ಸಾಗರ್, ಕಾರ್ಯದರ್ಶಿ ಬಿನೋದ್ ಶೆಲಾರ್, ಜಿಲ್ಲಾಧ್ಯಕ್ಷ ಗಣೇಶ್ ಖಂಕರ್, ಕೌನ್ಸಿಲರ್ ಬಾಲಾ ತಾಬ್ಡೆ, ವಾರ್ಡ್ ಅಧ್ಯಕ್ಷ ರಾಧೇಶ್ಯಂ, ಮಂಡಲ್ ವಾರ್ಡ್ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kushtagi: ವಸತಿ ನಿಲಯದ ಅವ್ಯವಸ್ಥೆ; ವಿದ್ಯಾರ್ಥಿಗಳಿಂದ ಪ್ರತಿಭಟನೆ
Bengaluru:ನಗರ್ತಪೇಟೆಯಲ್ಲಿ ಬಿಜೆಪಿ ಪ್ರತಿಭಟನೆಯ ಕಿಚ್ಚು; ಕ್ರಮದ ಭರವಸೆ, ಪ್ರತಿಭಟನೆ ವಾಪಸ್
Tollywood: ‘ಪುಷ್ಪʼ ನಿರ್ದೇಶಕನ ಜೊತೆ ರಾಮ್ ಚರಣ್ ಸಿನಿಮಾ? 2ನೇ ಬಾರಿಯೂ ಮಾಡ್ತಾರಾ ಮೋಡಿ?
ಅನೈತಿಕ ಸಂಬಂಧ: ಜೋಡಿ ಹತ್ಯೆಗೈದು ಮೈಮೇಲೆ ಮುಳ್ಳುಕಂಟಿ ಹಾಕಿಹೋದ ಹಂತಕರು
ಯಾರಾಗಲಿದ್ದಾರೆ ಬೆಳಗಾವಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ: ಶೆಟ್ಟರ್ ಸ್ಪರ್ಧೆಗೆ ಭಾರಿ ವಿರೋಧ…