ಸಂಯಮೀಂದ್ರ ತೀರ್ಥರೊಬ್ಬರೇ ಗುರುವರ್ಯರು


Team Udayavani, Nov 22, 2017, 11:19 AM IST

21-Mum02b.jpg

ಮುಂಬಯಿ: ಸಮಗ್ರ ಜಿಎಸ್‌ಬಿ ಸಂಸ್ಥೆಗಳ ಸಾರಥ್ಯ ಹಾಗೂ ಮಹಾರಾಷ್ಟ್ರ ಮತ್ತು ಗುಜರಾತ್‌ ರಾಜ್ಯಗಳ ಗೌಡ ಸಾರಸ್ವತ್‌ ಬ್ರಾಹ್ಮಣ ಸಮಾಜ ಬಾಂಧವರ ಒಗ್ಗೂಡುವಿಕೆಯಲ್ಲಿ ಶ್ರೀ ಕಾಶೀಮಠ ಸಂಸ್ಥಾನದ ಮಠಾಧೀಶರಾಗಿದ್ದು ದೈವೈಕ್ಯ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಕಾಶೀಮಠ ಸಂಸ್ಥಾನದ ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಪರ ಭಕ್ತಿನಿಷ್ಠೆ ಭಕ್ತಿಪೂರ್ವಕ ಮಹಾಸಭೆಯು ನ. 19 ರಂದು ಸಂಜೆ ದಹಿಸರ್‌ ಪೂರ್ವದ ಎನ್‌.ಎಲ್‌ ಕಾಂಪ್ಲೆಕ್ಸ್‌ನಲ್ಲಿನ ಕಲ್ಚರಲ್‌ ಆ್ಯಂಡ್‌ ರಿಕ್ರಿಯೇಶನ್‌ ಸೆಂಟರ್‌ ಮೈದಾನದಲ್ಲಿ ನಡೆಯಿತು.

ದಹಿಸರ್‌ ಪೂರ್ವದ ಶ್ರೀ ಕಾಶೀಮಠ ಸಂಸ್ಥಾನದ ಮಂದಿರದಲ್ಲಿ ಪ್ರತಿಷ್ಠಾಪಿತ ಶ್ರೀ  ವಿಟ್ಠಲ ರುಖುಮಯಿ   ದೇವರಿಗೆ ಪೂಜೆ ನೆರವೇರಿಸಿ ಬಳಿಕ ರಿಕ್ರಿಯೇಶನ್‌ ಮೈದಾನದಲ್ಲಿ ಶ್ರೀ ಭುವನೇಂದ್ರ ತೀರ್ಥ ಸ್ವಾಮೀಜಿಗಳ ಪುಣ್ಯತಿಥಿ ಸುದಿನ ಸಜ್ಜುಗೊಳಿಸಿದ ಪಾವಿತ್ರ್ಯತ ವೇದಿಕೆಯಲ್ಲಿ ಜಿಎಸ್‌ಬಿ ಸಮುದಾಯದ ಹಿರಿಯ ಮುತ್ಸದ್ಧಿಗಳು ಪಾಲ್ಗೊಂಡು ಪೂಜ್ಯತಾ ಶ್ರೀಮದ್‌ ಸುಧೀಂದ್ರ ತೀರ್ಥ ಸ್ವಾಮೀಜಿ ಮತ್ತು ಮಠಾಧೀಶ ಶ್ರೀಮದ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರನ್ನು ಸ್ಮರಿಸಿ, ಹರಿಗುರುಗಳ ಅನುಗ್ರಹಗಳೊಂದಿಗೆ ಮಹಾಸಭೆಯನ್ನು ಆರಂಭಿಸಲಾಯಿತು.  ವೇದಮೂರ್ತಿ  ಬಂಟ್ವಾಳಕೃಷ್ಣ ಭಟ್‌ ಪ್ರಾರ್ಥನೆಗೈದರು. ಭುವನೇಂದ್ರ ತೀರ್ಥರ  ಭಾವಚಿತ್ರಕ್ಕೆ ಆರತಿ ನೆರವೇರಿಸಿ ಮಹಾಸಭೆಗೆ ವಿಧ್ಯುಕ್ತವಾಗಿ ಚಾಲನೆ ನೀಡಿದರು

ಜಿಎಸ್‌ಬಿ ಸಮಾಜದ ಧುರೀಣರಾದ ನಾಗೇಂದ್ರ ಶೆಣೈ ಮಂಗಳೂರು, ಮೋಹನದಾಸ್‌ ಮಲ್ಯ, ನ್ಯಾಯವಾದಿ ಎಂ. ವಿ. ಕಿಣಿ, ರಘುನಂದನ ಎಸ್‌. ಕಾಮತ್‌ ನ್ಯಾಚುರಲ್‌ ಐಸ್‌ಕ್ರೀಂ,  ಜಿ. ಡಿ. ರಾವ್‌, ಕುಂದಾಪುರ ಶ್ರೀನಿವಾಸ ಪ್ರಭು, ಜಿ. ಸುರೇಶ್‌ ಕಾಮತ್‌, ಪದ್ಮನಾಭ ಶೆಣೈ, ಜಿತೇಂದ್ರ ನಾಯಕ್‌ ನಾಗ್ಪುರ, ಕೆ. ಆರ್‌. ಮಲ್ಯ, ಎಂ. ಉದಯ ಪಡಿಯಾರ್‌, ಸಾಣೂರು ಮನೋಹರ್‌ ವಿ. ಕಾಮತ್‌ ಮತ್ತಿತರರು ಉಪಸ್ಥಿತರಿದ್ದು  ಯತಿವರ್ಯರಲ್ಲಿನ ತಮ್ಮ ಪೂಜ್ಯಭಾವನೆ ವ್ಯಕ್ತಪಡಿಸಿ ಸ್ವಾಮಿನಿಷ್ಠೆ  ಮೆರೆದರು.

ನಾವು ಯಾವೊತ್ತೂ ಏಕ ಸ್ವಾಮಿ ನಿಷ್ಠರು. ಅಂದು, ಇಂದು, ಮುಂದೆಂದೂ ನಮಗೊಬ್ಬರೇ ಗುರುಗಳು. ಪೂಜ್ಯ ಸುಧೀಂದ್ರ ತೀರ್ಥರಿಂದ ಉತ್ತರಾಧಿಕಾರಿಯಾಗಿ ನೇಮಿಸಲ್ಪಟ್ಟ ಸಂಯಮೀಂದ್ರತೀರ್ಥರೇನಮ್ಮ ಪೂಜ್ಯ ಗುರು ವರ್ಯರು. ಇವರೇ ನಮ್ಮ ಮಠಾಧಿಪತಿಗಳು. ಇವರನ್ನು ಬಿಟ್ಟರೆ ನಮಗ್ಯಾರೂ ಪೀಠಾ ಧಿಪತಿಗಳಿಲ್ಲ. ಮತ್ಯಾರನ್ನೂ ನಾವು ಗುರುವರ್ಯರನ್ನಾಗಿ ಸ್ವೀಕರಿಸುವ ಪ್ರಶ್ನೆಯೇಇಲ್ಲ ಎಂದು ಕಿಕ್ಕಿರಿದು ನೆರೆದ ಜಿಎಸ್‌ಬಿ ಬಂಧುಗಳು ಒಕ್ಕೊ ರಲಿನಿಂದ ಸಭೆಯಲ್ಲಿ  ಸಮರ್ಥಿಸಿಕೊಂಡರು.

  ಕಾರ್ಯಕ್ರಮದಲ್ಲಿ ಸುಧೀಂದ್ರ ತೀರ್ಥರ ಗುರುನಿಷ್ಠೆಗೆ ಪಾತ್ರರಾದ ದಿ. ದಿನೇಶ್‌ ಎಸ್‌. ಪೈ ಅವರನ್ನು ಮರಣೋತ್ತರವಾಗಿ, ಬಂಟ್ವಾಳ ಕೃಷ್ಣ ಭಟ್‌, ಬಾಬುರಾಯ ಶೆಣೈ, ಅಶೋಕ್‌ ನಾಯಕ್‌, ನಂದಕುಮಾರ್‌ ಕುಡ್ವ, ನರಸಿಂಹಮೂರ್ತಿ ಪೈ ಅವರನ್ನು ಸಭೆಯಲ್ಲಿ ಸಮ್ಮಾನಿಸಲಾಯಿತು.  ಈ ಸಂದರ್ಭದಲ್ಲಿ ಜಿಎಸ್‌ಬಿ ಸಮಾಜದ ಮುಂದಾಳುಗಳಾದ, ಸತೀಶ್‌ ಆರ್‌. ನಾಯಕ್‌, ಸುಗುಣಾ ಕೆ. ಕಾಮತ್‌, ರಮಾನಾಥ ಕಿಣಿ, ರಮೇಶ್‌ ಭಂಡಾರ್ಕರ್‌, ಜೆ. ಪಿ. ಕಾಮತ್‌ ಮತ್ತಿತರರು ಉಪಸ್ಥಿತರಿದ್ದರು.

ವ್ಯಾಸೋಪಾಸನಾ ವೃಂದ ಮುಂಬಯಿ ಇವರು ಭುವನೇಂದ್ರ ಅಷ್ಟಕ ಮತ್ತು ಸುಧೀಂದ್ರ ಶ್ರವಣ, ಸಂಯಮಿಂದ್ರ ಸ್ತುತಿಗಳನ್ನು ಹಾಡಿದರು. ವೈದಿಕರು ವೇದಘೋಷಗೈದರು. ವಾಲ್ಕೇಶ್ವರ ಶ್ರೀ ಕಾಶೀ ಮಠದ ಅಧ್ಯಕ್ಷ ಜಿ. ಜಿ. ಪ್ರಭು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಆರ್‌. ಜಿ. ಭಟ್‌ ಮತ್ತು ವಿಜಯಾ ವರದ ಮಲ್ಯ ಕಾರ್ಯಕ್ರಮ ನಿರೂಪಿಸಿದರು. ಉಮಾನಾಥ್‌ ಕಾಮತ್‌ ವಂದಿಸಿದರು. ಸಾವಿರಾರು ಸಂಖ್ಯೆಯಲ್ಲಿ ಜಿಎಸ್‌ಬಿ ಬಾಂಧವರು ಉಪಸ್ಥಿತರಿದ್ದರು. 

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.