ಮೀರಾರೋಡು ಪಲಿಮಾರು ಮಠದಲ್ಲಿ ಶನೀಶ್ವರ ಜಯಂತಿ
Team Udayavani, Jun 5, 2019, 5:32 PM IST
ಮುಂಬಯಿ: ಪರ್ಯಾಯ ಶ್ರೀ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು ಜಗದ್ಗುರು ಶ್ರೀ ಮನ್ಮಧ್ವಾಚಾರ್ಯರ ಸರ್ವಮೂಲ ಗ್ರಂಥ, ಹಂಸ ಮಂತ್ರಗಳಿಂದ ಮುದ್ರಿತವಾದ 100 ಕಿಲೋ ಬಂಗಾರದ ಹೊದಿಕೆಯನ್ನು ಉಡುಪಿ ಶ್ರೀ ಕೃಷ್ಣಮಠದ ಗರ್ಭಗುಡಿಯ ಗೋಪುರಕ್ಕೆ ಹೊದಿಸುವ ಮೂಲಕ ಅಷ್ಟಮಠಗಳ ಧ್ಯೇಯೋದ್ಧೇಶಗಳಿಗೆ ಶಾಶ್ವತ ನೆಲೆ ಒದಗಿಸಿದರು. ಶ್ರೀಗಳು ಆರ್ಥಿಕ, ಧಾರ್ಮಿಕ, ಮಾನವೀಯ ದೃಷ್ಟಿಯಿಂದ ಸ್ಥಾಪಿಸಿದ 20 ತಳಿಗಳ ಸುಮಾರು 300 ಸ್ವದೇಶಿ ಗೋವುಗಳ ಸಮ್ಮಿಲನವು ಉಡುಪಿಯಲ್ಲಿ ಗೋಪುರವನ್ನು ನಿರ್ಮಿಸಿದೆ ಎಂದು ಪಲಿಮಾರು ಮಠದ ಮುಖ್ಯ ಪ್ರಬಂಧಕ, ಟ್ರಸ್ಟಿ, ವಿದ್ವಾನ್ ರಾಧಾಕೃಷ್ಣಭಟ್ ತಿಳಿಸಿದರು.
ಜೂ. 3ರಂದು ಸಂಜೆ ಮೀರಾರೋಡು ಪೂರ್ವದ ಪಲಿಮಾರು ಮಠದ ಶ್ರೀ ಬಾಲಾಜಿ ಸನ್ನಿಧಿಯ ಪ್ರಾಂಗಣದಲ್ಲಿ ಆಯೋಜಿಸಿದ್ದ ಶ್ರೀ ಶನೀಶ್ವರ ಜಯಂತಿ ಉತ್ಸವದಲ್ಲಿ ಧಾರ್ಮಿಕ ಸಂದೇಶ ನೀಡಿದ ಅವರು, ಶನಿಯು ತುಂಬಾ ಶಕ್ತಿಯುತವಾದ ನಿಷ್ಠುರ ಮಾತಿನ, ಸಹನೆ, ಶ್ರಮ, ಪ್ರಯತ್ನ ಅನುಭವಗಳ ಪ್ರತೀಕವಾಗಿ¨ªಾರೆ. ಮನುಷ್ಯ ತಾನು ಮಾಡಿದ ಕೆಟ್ಟ ಕರ್ಮದ ಫಲದ ಅನುಸಾರ, ಶನಿಯ ಸ್ಥಾನ ಕೆಟ್ಟದಾಗಿ ಕಷ್ಟಗಳು ಬರುತ್ತವೆ. ಸನ್ಮಾರ್ಗದಿಂದ ನಡೆದರೆ ಉತ್ತಮ ಫಲಪ್ರಾಪ್ತಿ ಯೊಂದಿಗೆ ದೇವರ ಸಾನ್ನಿಧ್ಯ ಹೊಂದಲು ಸಾಧ್ಯ ಎಂದರು.
ಯತಿರಾಜ ಉಪಾಧ್ಯಾಯ ಅವರು ಶ್ರೀ ಶನಿ ದೇವರ ಮಹಿಮೆಯನ್ನು ವಿವರಿಸಿ ಲೌಖೀಕ ಜಗತ್ತಿನಲ್ಲಿ ಯಾವುದೂ ಶಾಶ್ವತವಲ್ಲ. ಪರೋಪಕಾರ ಜೀವನ, ಸತ್ಯ, ಪ್ರಾಮಾಣಿಕತೆ ದುಡಿಮೆಯಿಂದ ಜೀವನ ಸವೆಸುವುದೇ ಶನಿ ಗ್ರಂಥದ ತಾತ್ಪರ್ಯವಾಗಿದೆ. ಆಹಂ ಅನ್ನು ಬಿಟ್ಟರೆ ಮಾನವ ದೈವತ್ವಕ್ಕೆ ಏರಲು ಸಾಧ್ಯ ಎಂದರು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಪೂರ್ಣ ನವಗ್ರಹ ಶನಿ ಯಾಗ, ಶನೈಶ್ವರ ಯಾಗ, ಸಾಮೂಹಿಕ ಭಜನೆ, ಸಾರ್ವಜನಿಕ ಶ್ರೀ ಶನಿ ಪೂಜೆ ಹಾಗೂ ಸನ್ನಿಧಿಯ ಪರಿವಾರ ದೇವರಿಗೆ ವಿಶೇಷ ಪೂಜೆ ನೆರವೇರಿತು.
ರಾಘವೇಂದ್ರ ನಕ್ಷತ್ರಿ, ಗೋಪಾಲ್ ಭಟ್, ವಿಷ್ಣು ಪ್ರಸಾದ್ ಭಟ್, ಕಾರ್ತಿಕ್ ಉಪಾಧ್ಯಾಯ, ವಾಸುದೇವ ಭಟ್, ದೇವರಾಜ ನೆಲ್ಲಿ, ನಾಗರಾಜ ಪೋತಿ ಅವರು ವೈದಿಕ ತತ್ವದಡಿ ಸಹಕರಿಸಿದರು. ಕರಮ ಚಂದ್ರ ಗೌಡ ಮತ್ತಿತರರು ಭಕ್ತಾದಿಗಳ ವ್ಯವಸ್ಥೆಗಳಿಗೆ ಸಹಕರಿಸಿದರು. ತುಳು ಕನ್ನಡಿಗರು, ಪರಿಸರದ ಭಕ್ತಾದಿಗಳು ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು.
ಚಿತ್ರ-ವರದಿ: ರಮೇಶ ಅಮೀನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ