ಶಿರ್ವ ಹಳೆವಿದ್ಯಾರ್ಥಿ ಸಂಘ : ಮಹಾರಾಷ್ಟ್ರ ಘಟಕ ಮಹಾಸಭೆ
Team Udayavani, Oct 25, 2018, 4:08 PM IST
ಪುಣೆ: ಸೈಂಟ್ ಮೇರಿಸ್ ಕಾಲೇಜ್ ಶಿರ್ವ ಹಳೆ ವಿದ್ಯಾರ್ಥಿ ಸಂಘದ ಮುಂಬಯಿ ಮಹಾರಾಷ್ಟ್ರ ಘಟಕದ ಮೂರನೇ ವಾರ್ಷಿಕ ಮಹಾಸಭೆಯು ಅ. 21 ರಂದು ಅಂಧೇ ರಿಯ ಅರೋ ಪಂಜಾಬ್ ಹೊಟೇಲ್ ಸಭಾಗೃಹದಲ್ಲಿ ಅಧ್ಯಕ್ಷ ಮಹೇಶ್ ಹೆಗ್ಡೆ ಕಟ್ಟಿಂಗೇರಿ ಅಧ್ಯಕ್ಷತೆಯಲ್ಲಿ ಜರಗಿತು.
ಮಹಾರಾಷ್ಟ್ರ ಘಟಕದ ಪ್ರಮುಖ ರಾದ ಯಶೋಧರ ಕೋಟ್ಯಾನ್, ಜಾನ್ ಡಿ’ಸೋಜಾ, ರೇಮಸ್ ಡಿ’ಸೋಜಾ, ವಿನ್ಸೆಂಟ್ ಮೆಂಡೋನ್ಸಾ ಉಪಸ್ಥಿತರಿದ್ದರು. ಮಹೇಶ್ ಹೆಗ್ಡೆ ಸ್ವಾಗತಿಸಿದರು.
ಪ್ರಕಾಶ್ ಶೆಟ್ಟಿ ಅವರು ಈ ಸಂಘದ ಉದ್ದೇಶಗಳನ್ನು ಸಭೆಗೆ ತಿಳಿಸಿದರು. ಸಂಘದ ಪದಾಧಿಕಾರಿ ಜಾನ್ ಡಿ’ಸೊಜಾ ಅವರು, ಸಂಘದ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಡಿ. 29ರಂದು ಮಾತೃ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ ಗುರು ವಂದನೆ ಕಾರ್ಯಕ್ರಮದಲ್ಲಿ ಭಾಗಿಯಾ ಗುವ ಬಗ್ಗೆ ತಿರ್ಮಾನಿಸಲಾಯಿತು, ಸದಸ್ಯರಿಗೆ ಒಂದು ದಿನದ ವಿಹಾರ ಕೂಟ ಏರ್ಪಡಿಸುವ ಬಗ್ಗೆ ಸದಸ್ಯರು ಸಲಹೆಗಳನ್ನು ನೀಡಿದರು.
ಸಂಘದ ಯೋಜನೆಗಳನ್ನು ರೂಪಿಸಲು ಸದಸ್ಯ ರೋಕಿ ಡಿಕುನ್ಹಾ ಮಾರ್ಗಸೂಚಿ ತಿಳಿಸಿದರು.
ಅವಿರೋಧ ಪುನರಾಯ್ಕೆ
ಪ್ರಸಕ್ತ ಅಧ್ಯಕ್ಷ ಮಹೇಶ್ ಹೆಗ್ಡೆ ಅವರನ್ನು ನೂತನ ಅಧ್ಯಕ್ಷರನ್ನಾಗಿ ಅವಿರೋಧವಾಗಿ ಪುನರಾಯ್ಕೆ ಮಾಡಲಾಯಿತು. ಕಾರ್ಯಕಾರಿ ಸಮಿತಿಗೆ ಉಪಾಧ್ಯಕ್ಷರಾಗಿ ಜಾನ್ ಡಿ’ಸೋಜಾ, ಕಾರ್ಯದರ್ಶಿಯಾಗಿ ಪ್ರಸಿÇÉಾ ಮೆಂಡೋನ್ಸಾ, ಜತೆ ಕಾರ್ಯದರ್ಶಿಯಾಗಿ ಕ್ಲಾರಾ ಮಿನೇಜಸ್, ಕೋಶಾಧಿಕಾರಿಯಾಗಿ ರೇಮಸ್ ಡಿ’ಸೋಜಾ, ಜತೆ ಕೋಶಾ ಧಿಕಾರಿಯಾಗಿ ಸಿಎ ಸಂತೋಷ್ ಶೆಟ್ಟಿ, ಜನ ಸಂಪರ್ಕಾಧಿಕಾರಿಗಳಾಗಿ ಜಾನ್ ಅರ್. ಡಿಕುನ್ಹಾ, ಹ್ಯುಬರ್ಟ್ ಫೆರ್ನಾಂಡಿಸ್, ಕಾನೂನು ಸಲಹೆಗಾರರಾಗಿ ಅರ್ಜಿ. ಶೆಟ್ಟಿ, ಸದಸ್ಯರಾಗಿ ಜೂಲಿಯೆಟ್ ಡಿ’ಸೋಜಾ, ಪ್ರಿಯಾ ಶೆಟ್ಟಿ, ಇರೆನ್ ಮಾರ್ಟಿಸ್, ಲೀನಾ ಡೆಸಾ, ಸರ್ವಮಂಗಳಾ ಶೆಟ್ಟಿ, ಜಾನ್ ಫೆರ್ನಾಂಡಿಸ್, ರವಿಂದ್ರ ಅಚಾರ್ಯ, ಪ್ರಸಾದ್ ಹಾಗೂ ಸಲಹೆಗಾರರಾಗಿ ಸದಾನಂದ ಕೋಟ್ಯಾನ್, ವಿನ್ಸೆಂಟ್ ಮೆಂಡೋನ್ಸಾ, ಯಶೋಧರ ಕೋಟ್ಯಾನ್, ಲ್ಯಾನ್ಸಿ ಬಬೋìಜ, ರೋಶನ್ ಆಳ್ವ ಅವರನ್ನು ಆಯ್ಕೆ ಮಾಡಲಾಯಿತು.
ಮಹೇಶ್ ಹೆಗ್ಡೆ ಮಾತನಾಡಿ, ನಮಗೆ ವಿದ್ಯಾದಾನ ಮಾಡಿದ ಸಂಸ್ಥೆಯ ನೆನಪಿನಲ್ಲಿ ನಾವು ಒಂದೇ ಸೂರಿನಡಿಯಲ್ಲಿ ಸೇರಿ ಪರಸ್ಪರ ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತಾ, ತೊಂದರೆಯಲ್ಲಿರುವ ಸಹಪಾಠಿ ಗಳಿಗೆ ಸಹಕಾರಿಯಾಗುವಂಥ ಕೆಲಸ ಮಾಡೋಣ. ನಾವೆಲ್ಲರೂ ಒಂದೇ ಎಂಬ ಭಾವನೆ ಯಿಂದ ಸೇವೆಯಲ್ಲಿ ತೊಡಗೋಣ ಎಂದರು.
ಕಾಲೇಜಿನ ಹಳೆ ವಿದ್ಯಾರ್ಥಿಗಳು ಮಹಾರಾಷ್ಟ್ರದ ವಿವಿಧೆಡೆಗಳಲ್ಲಿ ನೆಲೆ ಸಿದ್ದರೆ ನಮ್ಮನ್ನು ಸಂಪರ್ಕಿಸಿ ಈ ಸಂಸ್ಥೆಯ ಜೊತೆ ಸೇರಿಕೊಳ್ಳಬಹುದು ಎಂದು ಅವರು ಹೇಳಿದರು.
ಸಂಘದ ಸದಸ್ಯ ರೋಶನ್ ಆಳ್ವ ವಂದಿಸಿದರು.
ಚಿತ್ರ-ವರದಿ : ಹರೀಶ್ ಮೂಡಬಿದ್ರಿ ಪುಣೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು