ಡೊಂಬಿವಲಿ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದ ಭವನಗಳ ಲೋಕಾರ್ಪಣೆ


Team Udayavani, Jun 11, 2019, 4:30 PM IST

1006MUM14

ಮುಂಬಯಿ: ಪ್ರಪಂಚದ ಜೀವ ಸಂಕುಲಗಳಲ್ಲಿ ಬುದ್ಧಿವಂತ ಪ್ರಾಣಿ ಎನಿಸಿದ ಮಾನವನು ಸಂಘಜೀವಿ. ಕಷ್ಟಮಯ ಜೀವನ ಸಾಗಿಸುತ್ತಿದ್ದ ನಮ್ಮ ಹಿರಿಯರು, ಮುಂಬಯಿ ಪ್ರಾಂತಕ್ಕೆ ಆಗಮಿಸಿ ಕರ್ಮಭೂಮಿಯನ್ನಾಗಿಸಿ ಅಂದಿನ ಸಂಘರ್ಷಮಯ ವಾತಾವರಣದಲ್ಲೂ ಕುಲಗುರು, ಗುರುಪೀಠ, ಕುಲದೇವರ ಸ್ಮರಣೆಯಂತಹ ಶುದ್ಧ ಭಾವನೆಗಳನ್ನು ಬೆಳೆಸಿಕೊಂಡರು. 2018ರ ಅಕ್ಷಯ ತೃತೀಯದಂದು ಮಹಾಗಣಪತಿ ದೇವಸ್ಥಾನಕ್ಕೆ ಬಂದಿ¨ªೆವು. ಕಿಂಚಿತ್‌ ಸಮಯಾವಕಾಶದಲ್ಲಿ ನಿರ್ಮಾಣಗೊಂಡ ಈ ಸೇವಾ ಭವನಗಳು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸಿ ಸಮಾಜಮುಖೀ ಕಾರ್ಯ, ಸಾಂಘಿಕ ಚಟುವಟಿಕೆಗಳಿಂದ ಯಶಸ್ಸು ಗಳಿಸಲಿ ಎಂದು ಕವಳೆ ಮಠಾಧೀಶ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಸ್ವಾಮೀಜಿಯವರು ನುಡಿದರು.

ಮೇ 31ರಂದು ಡೊಂಬಿವಲಿ ಪೂರ್ವದ ಶ್ರೀ ವರದ ಸಿದ್ಧಿವಿನಾಯಕ ಸೇವಾ ಮಂಡಲದಲ್ಲಿ ಎರಡು ನೂತನ ಮಹಡಿಗಳಾದ ಗುರುಕೃಪಾ ಮತ್ತು ನಾರಾಯಣ ಕೃಪಾ ಸೇವಾಭವನಗಳನ್ನು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕವಳೆ ಮಠಾಧೀಶರಾದ ಶ್ರೀ ಶಿವಾನಂದ ಸರಸ್ವತೀ ಮಹಾರಾಜ್‌ ಇವರು ತಮ್ಮ ದಿವ್ಯಹಸ್ತದಿಂದ ಉದ್ಘಾಟಿಸಿ ಮಾತನಾಡಿ, ಸಂಸ್ಥೆಯ ಅಭಿವೃದ್ಧಿಗೆ ಶುಭ ಹಾರೈಸಿ, ಮುಂಬಯಿಯಲ್ಲಿನ ಒತ್ತಡ, ಸಂಘರ್ಷಮಯ ಬದುಕಿನಲ್ಲಿಯೂ ಹುಟ್ಟೂರಿನ ಸೆಳೆತ, ಅಲ್ಲಿನ ದೇವಸ್ಥಾನಗಳ ಬಗ್ಗೆ ಪ್ರೀತಿ, ಕಾಳಜಿಯಯನ್ನು ಗಮನಿಸಿದ್ದೇವೆ. ಈಶ್ವರನ ಅಸ್ತಿತ್ವವನ್ನು ಸ್ವೀಕರಿಸಿದ ಜೀವನ ನೈತಿಕತೆಯಿಂದ ಕೂಡಿ ಉನ್ನತಿಯತ್ತ ಸಾಗುತ್ತದೆ. ಇಂದು ದೀಕ್ಷೆಯ 25ರ ಸಂಭ್ರಮವನ್ನು ಆಚರಿಸಿದ ಈ ಕ್ಷಣವು ನಮ್ಮ ಗುರುಗಳಾಗಿದ್ದ ಶ್ರೀ ಸಚ್ಚಿದಾನಂದ ಸರಸ್ವತೀ ಸ್ವಾಮಿಗಳಿಗೆ ಸಂದ ವಿಶೇಷ ಗೌರವವಾಗಿದೆ ಎಂದರು.

ಪ್ರಾತಃಕಾಲ ಶ್ರೀಗಳನ್ನು ಪೂರ್ಣಕುಂಭದೊಂದಿಗೆ ಜಯ ಘೋಷಗಳ ಮೂಲಕ ಸ್ವಾಗತಿಸಲಾಯಿತು. ಮಕ್ಕಳು, ಮಹಿಳೆಯರೂ ಸೇರಿದಂತೆ ಶಿಷ್ಯವರ್ಗದವರು ಪಾರಂಪರಿಕ ತೊಡುಗೆಯಲ್ಲಿ ಭಾಗವಹಿಸಿದ್ದರು. ಗುರುವರ್ಯರ ಸನ್ಯಾಸ ದೀಕ್ಷೆಯ ರಜತವರ್ಷ ಆಚರಣೆಯ ಸಂದರ್ಭದಲ್ಲಿ ಸೇವಾಮಂಡಲದ ವತಿಯಿಂದ ಪಾದಪೂಜೆ ಹಾಗೂ ಸಮಸ್ತ ಶಿಷ್ಯವರ್ಗದ ಪರವಾಗಿ ಗೌರವಾರ್ಪಣೆ-ಗುರುವಂದನಾ ಕಾರ್ಯಕ್ರಮ ಜರಗಿತು. ಮಂಡಲದ ಅಧ್ಯಕ್ಷ ಲಕ್ಷ್ಮಣ್‌ ವಿನಾಯಕ್‌ ಅವರು ನೆನಪಿನ ಕಾಣಿಕೆಗಳನ್ನು ಶ್ರೀಗಳಿಗೆ ಅರ್ಪಿಸಿದರು.

ಅಪರಾಹ್ನ ಎಲ್‌. ವಿ. ನಾಯಕ್‌ ಅಧ್ಯಕ್ಷತೆಯಲ್ಲಿ ಜರಗಿದ ಧರ್ಮಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಜತೆ ಆಯುಕ್ತ ಎಂ. ಗೋಕುಲ್‌ದಾಸ್‌ ನಾಯಕ್‌ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ದೇಶದಾದ್ಯಂತ ಇರುವ ರಾಜಾಪುರ ಸಾರಸ್ವತ ಸಮಾಜದ ಪ್ರತಿನಿಧಿಗಳು ಉಪಸಿuತರಿದ್ದರು.

ಕಳೆದ 33 ವರ್ಷಗಳಿಂದ ಸಂಸ್ಥೆಯ ಅಧ್ಯಕ್ಷರಾಗಿರುವ ಲಕ್ಷ್ಮಣ್‌ ವಿ. ನಾಯಕ್‌ ಅವರು ಮಾತನಾಡಿ, ಕಮಿಟಿಯು ನಿಮಿತ್ತ ಮಾತ್ರ. ಈ ನೂತನ ಭವನಗಳ ನಿರ್ಮಾಣವು ಮಹಾರಾಷ್ಟ್ರದಾದ್ಯಂತ ಇರುವ ಸಹೃದಯಿ ದಾನಿಗಳಿಂದ ಸಾಧ್ಯ ಎನಿಸಿದೆ. ಜನರಿಂದ ಜನರಿಗೋಸ್ಕರ ನಿರ್ಮಿತವಾದ ಈ ಭವನಗಳಲ್ಲಿ ಧರ್ಮ, ಕಲೆ ಹಾಗೂ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಸೇವಾಕಾರ್ಯಗಳು ನಿರಂತರ ಜರಗಬೇಕೆಂಬ ಉದ್ದೇಶ ನಮ್ಮದು ಎಂದರು.

ಕಾರ್ಯದರ್ಶಿ ರವೀಂದ್ರನಾಥ್‌ ಜಿ. ನಾಯಕ್‌ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, 1986ರಲ್ಲಿ ಲಕ್ಷ್ಮೀàನಾರಾಯಣ ಭಟ್‌ರಿಂದ ಬೀಜಾಂಕುರಗೊಂಡ ಸೇವಾಮಂಡಲದ ಕನಸು ಸಾಕಾರಗೊಂಡು 2001ರಲ್ಲಿ ವರದ ಸಿದ್ಧಿ ಸೇವಾ ಭವನ, 2011 ರಲ್ಲಿ ಮಹಾಗಣಪತಿ ಮಂದಿರ ಮತ್ತು ಇಂದು ಎರಡು ನೂತನ ಭವನಗಳು ಲೋಕ ಕಲ್ಯಾಣದ ಉದ್ದೇಶದಿಂದ ನಿರ್ಮಿತಗೊಂಡು ಲೋಕಾರ್ಪಣೆಗೊಂಡಿವೆ. ಸಂಸ್ಥಾನ ಗೌಡಪಾದಾಚಾರ್ಯ ಮೂಲ ಪರಂಪರೆಯಿಂದ ಬೆಳಗಿ ಬಂದ ಸಾರಸ್ವತರ ಕೇಂದ್ರೀಯ ಮಠ ಕವಳೆ ಮಠಾಧೀಶರ ಆಶೀರ್ವಾದದಿಂದ ಈ ಸತ್ಕಾರ್ಯಗಳು ಜರಗುತ್ತಿವೆ ಎಂದರು.

ನೂತನ ವಾಸ್ತು ನಿರ್ಮಾಣ ಸಾಗಿಬಂದ ಬಗ್ಗೆ ಉಪಾಧ್ಯಕ್ಷ ಮಾಧವ್‌ ಪಿ. ನಾಯಕ್‌ ಹಾಗೂ ಖರ್ಚು ವಿವರಗಳ ಮಾಹಿತಿಯನ್ನು ಕೋಶಾಧಿಕಾರಿ ಋ‌ಂಜಯ್‌ ಬಿಪಾಟ್ಕರ್‌ ಅವರು ವಿವರಿಸಿದರು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕಲ್ಲಡ್ಕ ವಿಠಲ ನಾಯಕ್‌ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಜರಗಿತು. ಭಕ್ತಾದಿಗಳು, ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಚಿತ್ರ-ವರದಿ: ರವಿಶಂಕರ್‌ ಡಹಾಣೂರೋಡ್‌

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

2-aa

ಮೂಡುಬೆಳ್ಳೆ : ವೈಭವದ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.