ಹೊಟೇಲ್‌ ವ್ಯವಹಾರದ ಸಮಯ ಮತಷ್ಟು ವಿಸ್ತರಿಸಲು ಯತ್ನ : ಶಿವಾನಂದ ಶೆಟ್ಟಿ

ಉದ್ಯಮದ ನೀತಿಗಳಲ್ಲಿ ಬದಲಾವಣೆ ಯನ್ನು ಉಂಟುಮಾಡಬಹುದು.

Team Udayavani, Nov 11, 2021, 2:24 PM IST

ಹೊಟೇಲ್‌ ವ್ಯವಹಾರದ ಸಮಯ ಮತಷ್ಟು ವಿಸ್ತರಿಸಲು ಯತ್ನ : ಶಿವಾನಂದ ಶೆಟ್ಟಿ

ಮುಂಬಯಿ, ನ. 10: ಆಹಾರ್‌ನ ನಿರಂತರ ಪ್ರಯತ್ನದಿಂದಾಗಿ ಮಹಾರಾಷ್ಟ್ರ ಸರಕಾರವು ಉಪಾಹಾರಗೃಹಗಳಿಗೆ ರಾತ್ರಿ 12ರ ವರೆಗೆ ಕಾರ್ಯ ನಿರ್ವಹಿಸಲು ಅನುಮತಿ ನೀಡಿದ್ದು, ಇದು ಉದ್ಯಮಕ್ಕೆ ದೊಡ್ಡ ಉತ್ತೇಜನ ನೀಡಿದಂತಾಗಿದೆ.

ನಾವು ಇನ್ನೂ ಸಮಯದ ಸಮಸ್ಯೆಯನ್ನು ಎದುರಿಸುತ್ತಿದ್ದು, ಅದನ್ನು ಕೊರೊನಾ ಲಾಕ್‌ಡೌನ್‌ ಪೂರ್ವದಂತೆ ಮಧ್ಯರಾತ್ರಿ ಬಳಿಕ 1.30ರ ವರೆಗೆ ಮರುಸ್ಥಾಪಿಸಲು
ಪ್ರಯತ್ನಿಸಲಾಗುವುದು. ನ್ಯಾಯಾಲಯದಲ್ಲಿ ನಮ್ಮ ಪ್ರಯತ್ನಗಳ ಮೂಲಕ ಅಬಕಾರಿ ಇಲಾಖೆಯು ಪರವಾನಿಗೆ ಶುಲ್ಕದ ಶೇ. 50ರಷ್ಟು ಪಾವತಿಸುವ ಮೂಲಕ ವ್ಯವಹಾರವನ್ನು ನಿರ್ವಹಿಸಲು ಅವಕಾಶ ಮಾಡಿಕೊಟ್ಟಿದೆ. ಎಲ್ಲ ಪರ್ಮಿಟ್‌ ರೂಮ್‌ ಸದಸ್ಯರಿಗೆ ತಿಳಿಸಿದ ಅನಂತರ ನಾವು ಶೇ. 50ರಷ್ಟು ಪರವಾನಿಗೆ  ಶುಲ್ಕವನ್ನು ಪಾವತಿಸಿದ ಎಫ್‌ಎಲ್‌-3 ಪರವಾನಿಗೆಗಳ ಪಟ್ಟಿಯನ್ನು ಸಲ್ಲಿಸಿದ್ದೇವೆ. ಶೇ. 50ರಷ್ಟು ಪರವಾನಿಗೆ ಶುಲ್ಕ ಪಾವತಿಸುವ ಎಲ್ಲ ಪರ್ಮಿಟ್‌ ರೂಮ್‌ ಹೊಟೇಲ್‌ಗ‌ಳಿಗೆ ವ್ಯಾಪಾರ ಪುನರಾರಂಭಿಸಲು ಅವಕಾಶ ನೀಡುವಂತೆ ನಾವು ಅಬಕಾರಿ ಇಲಾಖೆಗೆ ಮನವಿ ಮಾಡಿದ್ದೇವೆ ಎಂದು ಆಹಾರ್‌ನ ಅಧ್ಯಕ್ಷ ಶಿವಾನಂದ ಡಿ. ಶೆಟ್ಟಿ ತಿಳಿಸಿದರು.

ನ. 9ರಂದು ನಾನಾ ಚೌಕ್‌ನ ಹೊಟೇಲ್‌ ಕೃಷ್ಣ ಪ್ಯಾಲೇಸ್‌ ರೆಸಿಡೆನ್ಸಿಯಲ್ಲಿ ನಡೆದ ಆಹಾರ್‌ನ 6ನೇ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಾವು ಎಫ್‌ ಡಿಎ ಕಮಿಷನರ್‌ ಪರಿಮಳ್‌ ಸಿಂಗ್‌ ಮತ್ತು ಅವರ ತಂಡದೊಂದಿಗೆ ಸಭೆ ನಡೆಸಿದ್ದು, ಉತ್ತಮ ಸಹಕಾರ ದೊರೆತಿದೆ. ಸೆಲ್ಫ್-ಆಡಿಟ್‌, ಹೈಜೆನಿಕ್‌ ಟೆಸ್ಟಿಂಗ್‌ ಇತ್ಯಾದಿಗಳಿಗೆ ಅವಕಾಶ ನೀಡಲಾಗಿದ್ದು, ಇದರ ಫಲಿತಾಂಶ ಶೇ. 80ಕ್ಕಿಂತ ಹೆಚ್ಚಿದ್ದರೆ ಎಫ್‌ಡಿಎ ಅಧಿಕಾರಿಗಳು ರೆಸ್ಟೋರೆಂಟ್‌ಗಳಿಗೆ ಕಿರುಕುಳ ನೀಡುವುದಿಲ್ಲ.

ಎಲ್ಲ ಹೊಟೇಲ್‌ ಉದ್ಯಮಿಗಳು ತಮ್ಮ ಓರ್ವ ಅಥವಾ ಇಬ್ಬರು ಸಿಬಂದಿಯನ್ನು FOSTAC ಅಡಿಯಲ್ಲಿ ತರಬೇತಿ ಪಡೆಯುವಂತೆ ಪ್ರೇರೇಪಿಸಬೇಕು. ಅವರು ತರಬೇತಿ ಪಡೆದ ಬಳಿಕ ಇತರರಿಗೆ ತರಬೇತಿ ನೀಡಲು ಸಹಕಾರಿಯಾಗುತ್ತದೆ. ಇದರಿಂದ ನಿಯಮಗಳ ಪ್ರಕಾರ ದಾಖಲೆಗಳನ್ನು ನಿರ್ವ ಹಿಸಬಹುದು ಎಂದು ಸಲಹೆ ನೀಡಿದರು.

ಆಹಾರ್‌ನ 42ನೇ ವಾರ್ಷಿಕ ಮಹಾಸಭೆ 2022ರ ಜ. 10 ಮತ್ತು 11ರಂದು ಪೊವಾಯಿಯ ಹೊಟೇಲ್‌ ರೆನೈಸ್ಸಾನ್ಸ್‌ನಲ್ಲಿ ನಡೆಯಲಿದೆ ಎಂದು ತಿಳಿಸಿದ ಶಿವಾನಂದ ಶೆಟ್ಟಿ ಅವರು, ಜ. 10ರಂದು ಸದಸ್ಯರು ಮತ್ತು ಅವರ ಕುಟುಂಬದವರಿಗೆ ಸ್ನೇಹ ಕೂಟವನ್ನು ಆಯೋಜಿಸಲಾಗಿದ್ದು, ಜ. 11ರಂದು ಸಂಸ್ಥೆಯ ವಾರ್ಷಿಕ ಮಹಾಸಭೆ ನೆರವೇರಲಿದೆ. ಆಹಾರ್‌ ನಿಯೋಗವು ಪರ್ಫಾ ರ್ಮೆನ್ಸ್‌ ಬಾರ್‌ಗಳ ಕುಂದುಕೊರತೆಗಳ ಬಗ್ಗೆ ಮುಂಬಯಿ ಪೊಲೀಸ್‌ ಕಮಿಷನರ್‌ ಮತ್ತು ಅವರ ತಂಡವನ್ನು ಭೇಟಿ ಮಾಡಿದ್ದು, ಈ ಸಭೆ ಅತ್ಯಂತ ಫಲಪ್ರದವಾಗಿತ್ತು.

ಕೋವಿಡ್‌ ಲಾಕ್‌ಡೌನ್‌ ಪರಿಸ್ಥಿತಿಗಳು ಮತ್ತು ಉದ್ಯಮದ ನಿಧಾನಗತಿಯ ಚೇತರಿಕೆಯನ್ನು ಗಮನಿಸಿದರೆ ಕಳೆದ ಎಜಿಎಂನಲ್ಲಿ ಪರಿಷ್ಕೃತ, ಹೆಚ್ಚಿದ ಸದಸ್ಯತನ ಶುಲ್ಕದ ಬಗ್ಗೆ ಅನುಮೋದಿಸಿದರೂ ಕೋವಿಡ್‌ ಪರಿಸ್ಥಿತಿಯಿಂದಾಗಿ ಹಿಂದಿನಂತೆ ಸದಸ್ಯತ್ವವನ್ನು ಹೊಂದಲು 2022ರ ಮಾರ್ಚ್ ವರೆಗೆ ಕಾಲಾವಕಾಶ ನೀಡಲಾಗಿದೆ ಎಂದು ಹೇಳಿ, ಸಂಸ್ಥೆಯ ಕಾರ್ಯಗಳಿಗೆ ಎಲ್ಲರ ಸಹಕಾರವನ್ನು ಬಯಸಿದರು.

ಆಹಾರ್‌ನ ಗೌರವ ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ಅವರು ಸದಸ್ಯರನ್ನು ಸ್ವಾಗತಿಸಿದರು. ಸಭೆಯ ಆಯೋಜಕರಾದ ವಲಯ ಮೂರರ ಉಪಾಧ್ಯಕ್ಷ ವಿಜಯ್‌ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ಸದಸ್ಯರ ಎಲ್ಲ ಕುಂದುಕೊರತೆಗಳನ್ನು ಪರಿಹರಿಸಲು ಕಳೆದ ವರ್ಷಗಳಲ್ಲಿ ತನಗೆ ನೀಡಿದ ಬೆಂಬಲಕ್ಕಾಗಿ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು. ಆಹಾರ್‌ ಹೊಟೇಲ್‌ ಉದ್ಯಮದ ಧ್ವನಿಯಾಗಿದೆ. ಇದು ಸದಸ್ಯ ಬಾಂಧವರ ಸಮಸ್ಯೆಗಳನ್ನು ಪರಿಹರಿಸಲು ಹಗಲಿರುಳು ಶ್ರಮಿಸುತ್ತಿದೆ. ಇದರಿಂದ ಉದ್ಯಮದ ನೀತಿಗಳಲ್ಲಿ ಬದಲಾವಣೆ ಯನ್ನು ಉಂಟುಮಾಡಬಹುದು. ಇದು ಮುಂಬಯಿಗೆ ಮಾತ್ರವಲ್ಲದೆ ಇಡೀ ಮಹಾರಾಷ್ಟ್ರಕ್ಕೂ ಅನ್ವಯಿಸುತ್ತದೆ ಎಂದರು.

ಈ ಸಂದರ್ಭ ಉಪ ಸಮಿತಿಯ ಅಧ್ಯಕ್ಷರಾದ ಶಶಿಕಾಂತ ಶೆಟ್ಟಿ, ಮಹೇಶ್‌ ಶೆಟ್ಟಿ, ಪ್ರಸಾದ್‌ ಎಂ. ಶೆಟ್ಟಿ ಮತ್ತು ಗುರುಪ್ರಸಾದ್‌ ಶೆಟ್ಟಿ ಅವರು ಸಂಬಂಧಪಟ್ಟ ವಿಷಯಗಳ ಕುರಿತು ಮಾತನಾಡಿದರು. ಶಶಿಕಾಂತ ಶೆಟ್ಟಿ ಅವರು ಸಂಸ್ಥೆಯ ಸದಸ್ಯರು, ಉದ್ಯೋಗಿಗಳು ತಮ್ಮ ಆಸಕ್ತಿಯಿಂದ ತರಬೇತಿಗೆ ಹಾಜರಾಗಿ ತರಬೇತಿ ಪಡೆಯುವಂತೆ ಮನವಿ ಮಾಡಿದರು.

ಆಹಾರ್‌ನ ಸದಸ್ಯತ್ವ ಸಮಿತಿಯ ಅಧ್ಯಕ್ಷ ಪ್ರಸಾದ್‌ ಎಂ. ಶೆಟ್ಟಿ ಮಾತನಾಡಿ, ಪ್ರತಿಕೂಲ ಕೋವಿಡ್‌ ಪರಿಸ್ಥಿತಿಗಳ ನಡುವೆಯೂ ನಾವು ಇಲ್ಲಿಯವರೆಗೆ ಸದಸ್ಯತ್ವವಾಗಿ 43,20,000 ರೂ. ಗಳನ್ನು ಸಂಗ್ರಹಿಸಲು ಸಾಧ್ಯವಾಯಿತು. ವಾರ್ಷಿಕ ಮಹಾಸಭೆಯವರೆಗೆ ಇದನ್ನು 60 ಲಕ್ಷ ರೂ.ಗಳವರೆಗೆ ವಿಸ್ತರಿಸುವ ಗುರಿಯನ್ನು ಹೊಂದಲಾಗಿದೆ ಎಂದರು.

ಸಲಹೆಗಾರರಾದ ಸಂತೋಷ್‌ ರಾಜು ಶೆಟ್ಟಿ ಮತ್ತು ಸಂತೋಷ್‌ ರಾಮಣ್ಣ ಶೆಟ್ಟಿ ಅವರು ಉತ್ತಮ ಕೆಲಸಕ್ಕಾಗಿ ತಂಡವನ್ನು ಅಭಿನಂದಿಸಿ, ತಮ್ಮ ಅಮೂಲ್ಯವಾದ ಸಲಹೆ ನೀಡಿದರು. ಈ ಸಂದರ್ಭ ಸಭೆಯ ಆಯೋಜಕರಾದ ವಿಜಯ್‌ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು. ವಲಯ ಮೂರರ ತಂಡದಿಂದ ಆಹಾರ್‌ನ ಅಧ್ಯಕ್ಷರನ್ನು ಅವರ ಸಹಕಾರಕ್ಕಾಗಿ ಗೌರವಿಸಲಾಯಿತು. ಪ್ರಧಾನ ಕಾರ್ಯದರ್ಶಿ ಸುಕೇಶ್‌ ಶೆಟ್ಟಿ ವಂದಿಸಿದರು. ಆಹಾರ್‌ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ವಲಯಗಳ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ಟಾಪ್ ನ್ಯೂಸ್

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

1-qwqwewqe

IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-asaa

Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್‌ ಆಫ್‌ ಅಟಾರ್ನಿ, ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.