ಗಣೇಶೋತ್ಸವಕ್ಕೆ ವಿಶೇಷ ರೈಲು; ಸಂಸದ ಗೋಪಾಲ್ ಶೆಟ್ಟಿಗೆ ಅಭಿನಂದನೆ
Team Udayavani, Aug 1, 2018, 3:19 PM IST
ಮುಂಬಯಿ: ಪಶ್ಚಿಮ ಉಪನಗರದ ತುಳು-ಕನ್ನಡಿಗರ ಸುದೀರ್ಘ ಕಾಲದ ಬೇಡಿಕೆ ಯಾಗಿರುವ ಪಶ್ಚಿಮ ರೈಲ್ವೇ ಮಾರ್ಗವಾಗಿ ವಸಾಯಿ ಮೂಲಕ ಮಂಗಳೂರಿಗೆ ರೈಲೊಂದನ್ನು ಪ್ರಾರಂಭಿಸುವ ಬಗ್ಗೆ ರೈಲ್ವೇ ಇಲಾಖೆ ಹಾಗೂ ರೈಲ್ವೇ ಸಚಿವರಿಗೆ ಹಲವಾರು ಬಾರಿ ಮನವಿಯನ್ನು ಸಲ್ಲಿಸಿದ ಬಳಿಕ ಪ್ರಸ್ತುತ ತಾತ್ಕಾಲಿಕವಾಗಿ ಮುಂಬಯಿ ಸೆಂಟ್ರಲ್ ಮತ್ತು ಬಾಂದ್ರಾ ಟರ್ಮಿನಸ್ನಿಂದ ಗಣಪತಿ ಉತ್ಸವದ ಅಂಗವಾಗಿ ವಿಶೇಷ ರೈಲುಗಳನ್ನು ಓಡಿಸುವಂತೆ ರೈಲ್ವೇ ಇಲಾಖೆ ನಿರ್ಧರಿಸಿದ್ದು, ಈ ಬೇಡಿಕೆಯಲ್ಲಿ ರೈಲ್ವೇ ಯಾತ್ರಿ ಸೇವಾ ಸಂಘ ಬೊರಿವಲಿ ಕಳೆದ ಹಲವಾರು ವರ್ಷಗಳಿಂದ ಕಾರ್ಯಪ್ರವೃತ್ತವಾಗಿದ್ದು, ಹಲವಾರು ಬಾರಿ ಲೋಕಸಭಾ ಸದಸ್ಯ ಗೋಪಾಲ ಶೆಟ್ಟಿ ಅವರನ್ನು ಒತ್ತಾಯಿಸಲಾಗಿದ್ದು.
ಇತ್ತೀಚೆಗೆ ಬೊರಿವಲಿಯಲ್ಲಿ ರೈಲ್ವೇ ಇಲಾಖೆಯ ವತಿಯಿಂದ ರೈಲ್ವೇ ನಿಲ್ದಾಣದ ಪಶ್ಚಿಮದಲ್ಲಿ ಮೋಟಾರ್ ಸೈಕಲ್ಗಳ ಪಾರ್ಕಿಂಗ್ ವ್ಯವಸ್ಥೆಯನ್ನು ಉದ್ಘಾಟಿಸಿದ್ದು, ಈ ಸಂದರ್ಭದಲ್ಲಿ ಬೊರಿವಲಿ ರೈಲ್ವೇ ಯಾತ್ರಿ ಸೇವಾ ಸಂಘದ ಸಮಿತಿಯ ಉಪಾಧ್ಯಕ್ಷ ಪ್ರೇಮನಾಥ್ ಕೋಟ್ಯಾನ್, ಜತೆ ಕಾರ್ಯದರ್ಶಿ ರಜಿತ್ ಸುವರ್ಣ ಹಾಗೂ ಇತರ ಪದಾಧಿಕಾರಿಗಳು, ಸದಸ್ಯರು ಗೋಪಾಲ್ ಶೆಟ್ಟಿ ಅವರನ್ನು ಪುಷ್ಪಗುತ್ಛವನ್ನಿತ್ತು ಅಭಿನಂದಿಸಿದರು.
ಚಿತ್ರ-ವರದಿ : ರಮೇಶ್ ಉದ್ಯಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು