ಶ್ರೀ ರಂಜನಿ ಸಂಗೀತ ಸಭಾ ಡೊಂಬಿವಲಿ 21ನೇ ವಾರ್ಷಿಕೋತ್ಸವ
Team Udayavani, Feb 28, 2019, 4:14 PM IST
ಡೊಂಬಿವಲಿ: ಶ್ರೀ ರಂಜನಿ ಸಂಗೀತ ಸಭಾ ಡೊಂಬಿವಲಿ ಇದರ 21ನೇ ವಾರ್ಷಿಕೋತ್ಸವ ಮತ್ತು ಶ್ರೀ ಪುರಂದರ ದಾಸರ ಮತ್ತು ಶ್ರೀ ತ್ಯಾಗರಾಜರ ಆರಾಧನಾ ಮಹೋತ್ಸವವು ಡೊಂಬಿವಲಿ ಪೂರ್ವದ ಜಿಎಸ್ಬಿ ಆಂಗ್ಲ ಮಾಧ್ಯಮ ಶಾಲಾ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ನಡೆಯಿತು.
ಧಾರ್ಮಿಕ ಕಾರ್ಯಕ್ರಮವಾಗಿ ಬೆಳಗ್ಗೆ ಗಣಪತಿ ಪೂಜೆ, ನವಗ್ರಹ ಹೋಮ, ಪಂಚಾಮೃತ ಅಭಿಷೇಕ, ಶ್ರೀ ಸತ್ಯನಾರಾಯಣ ಮಹಾಪೂಜೆ, ಮಹಾಮಂಗಳಾರತಿ ನೆರವೇರಿತು. ಅನಂತರ ಸಂಗೀತ ವಿದ್ವಾನ್ ಟಿ. ಎನ್. ಅಶೋಕ್ ಅವರ ಶಿಷ್ಯವೃಂದದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕಾರ್ಯಕ್ರಮ ಜರಗಿತು. ಪಕ್ಕವಾದ್ಯದಲ್ಲಿ ಸತೀಶ್ ಶೇಷಾದ್ರಿ ಅವರು ಪಿಟೀಲಿನಲ್ಲಿ, ಮೃದಂಗದಲ್ಲಿ ಸುರೇಶ್ ಸೇತು ಮಾಧವನ್ ಸಹಕರಿಸಿದರು.
ವಿದ್ವಾನ್ ಹಾಗೂ ವಿದುಷಿಯರಿಂದ ಶ್ರೀ ಪುರಂದರ ದಾಸರ ಪಿಳ್ಳಾರಿ ಗೀತೆಗಳು ಹಾಗೂ ಶ್ರೀ ತ್ಯಾಗರಾಜರ ಪಂಚರತ್ನ ಕೃತಿಗಳ ಸಮೂಹ ಗಾಯನ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಶ್ರೀ ರಂಜನಿ ಸಂಗೀತ ಸಭಾದ ಅಧ್ಯಕ್ಷ ಜಿ. ಎಸ್. ನಾಯಕ್ ಸ್ವಾಗತಿಸಿ ಅತಿಥಿಗಳನ್ನು ಪರಿಚಯಿಸಿ, ಗಣ್ಯರನ್ನು ಗೌರವಿಸಿದರು.
ಮುಖ್ಯ ಅತಿಥಿ ಸುಧಾ ಜಿ. ಪೈ ಅವರು ಮಾತನಾಡಿ, ಶ್ರೀ ಪುರಂದರದಾಸರು ರಚಿಸಿರುವ ಕೃತಿಗಳಲ್ಲಿ ಸಾಹಿತ್ಯ, ತತ್ವ, ಭಕ್ತಿ ಹಾಗೂ ಆಚಾರ- ವಿಚಾರಗಳನ್ನು ನಾವು ಕಾಣಬಹುದು. ಕಲಾವಿದರು ಹೆಚ್ಚಿನ ಹೊಸ ಕೃತಿಗಳನ್ನು ಹಾಡಿ ಜನರ ಮನಸ್ಸಿನಲ್ಲಿ ಭಕ್ತಿ ಮತ್ತು ಸಾಹಿತ್ಯದ ಕಡೆ ಒಲವು ಮೂಡಿಸಬೇಕು ಎಂದು ನುಡಿದು ತನ್ನ ವತಿಯಿಂದ ಐದು ಸಾವಿರ ರೂ. ಗಳನ್ನು ಸಂಸ್ಥೆಗೆ ನೀಡಿ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಎಂ. ಎಸ್. ಪರಮೇ ಶ್ವರನ್ ಹಾಗೂ ಹಿರಿಯ ಕಲಾವಿದರಾದ ವಿದುಷಿ ಬಾಂಬೆ ಲಕ್ಷ್ಮೀ ರಾಜಗೋಪಾಲನ್ ಇವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಿ ಸಂಸ್ಥೆಯ ವತಿಯಿಂದ ಸಂಗೀತ ಭೂಷಣ ಬಿರುದು ಪ್ರದಾನಿಸಿ ಅಭಿನಂದಿಸಲಾಯಿತು. ಸಮ್ಮಾನ ಸ್ವೀಕರಿಸಿ ಮಾತನಾಡಿದ ಎಂ. ಎಸ್. ಪರಮೇಶ್ವರನ್ ಮತ್ತು ಬಾಂಬೆ ಲಕ್ಷ್ಮೀ ರಾಜಗೋಪಾಲ್ ಅವರು, ಶ್ರೀ ರಂಜನಿ ಸಂಗೀತ ಸಭಾದ ಸುಮಾರು 20 ವರ್ಷಗಳ ಸಿದ್ಧಿ-ಸಾಧನೆಗಳನ್ನು ಅಭಿನಂದಿಸಿ ಶ್ಲಾಘಿಸಿದರು.
ವಿ. ಬಾಲಸುಂದರ ಅಯ್ಯರ್
ವಂದಿಸಿದರು. ಕು| ಟಿ. ಲಾವಣ್ಯಾ ಅಶೋಕ್ ಕಾರ್ಯಕ್ರಮ ನಿರ್ವಹಿಸಿದರು. ಮಹಾ ಮಂಗಳಾರತಿ, ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಮಾರೋಪಗೊಂಡಿತು. ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು, ವಿದ್ಯಾರ್ಥಿಗಳು, ಪಾಲಕರು, ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ