ಪ್ರತಿಭಾವಂತ ಕಲಾವಿದೆ ಕು| ತನ್ವಿ  ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ


Team Udayavani, Aug 22, 2017, 12:34 PM IST

20-Mum10.jpg

ಮುಂಬಯಿ: ಮಕ್ಕಳು ಯಾವತ್ತೂ ಯಶಸ್ಸಿನ ಬಗ್ಗೆ ಯೋಚಿಸುವವರಾಗಿರಬೇಕು. ಪೋಷಕರು ಅವರಿಗೆ ಸದಾ ಪ್ರೋತ್ಸಾಹ ನೀಡುತ್ತಿರಬೇಕು. ಯಶಸ್ಸು ಮತ್ತು ಪ್ರೋತ್ಸಾಹಗಳ ಸಮ್ಮಿಳಿತದಿಂದ ಮಕ್ಕಳು ಶ್ರಮಪಟ್ಟಲ್ಲಿ ಯಾವುದೇ ಕಠಿಣತೆಯನ್ನು ಸಾಧಿಸಬಹುದು ಎಂಬುವುದಕ್ಕೆ ಕು| ತನ್ವಿ ಎಲ್ಲರಿಗೂ ನಿದರ್ಶನ. ಬದುಕು ಕಟ್ಟುವಾಗ  ಹಲವಾರು ಕನಸುಗಳನ್ನು ಕಾಣುವುದು ಅನಿವಾರ್ಯ. ಆದರೆ ಕನಸನ್ನು ಸಾಕ್ಷಾತ್ಕಾರಗೊಳಿಸುವ ಹಂಬಲ ಎಲ್ಲರಿಗೂ ಇರಬೇಕು ಎಂದು ನೃತ್ಯಗುರು, ವಿಮರ್ಶಕ ವಿಜಯ ಶಂಕರ್‌ ಅವರು  ಅಭಿಪ್ರಾಯಪಟ್ಟರು.

ಆ. 20ರಂದು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್‌ ಸಭಾಗೃಹದಲ್ಲಿ ನಡೆದ ದುಬೈ ಉದ್ಯಮಿ ಸುಂದರ್‌ ಕಾಂಚನ್‌ ಮತ್ತು ಶಶಿಕಲಾ ಕಾಂಚನ್‌ ದಂಪತಿಯ ಪುತ್ರಿ ಕು| ತನ್ವಿ ಕಾಂಚನ್‌ ಅವರ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.

ಭಾರತೀಯ ಸಂಸ್ಕೃತಿಯಲ್ಲಿ ಭರತನಾಟ್ಯಕ್ಕೆ ಮಹೋನ್ನತ ಸ್ಥಾನಮಾನವಿದೆ. ತನ್ವಿಯವರಿಗೆ ಮುಂದೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವಿದ್ದು, ಭಾರತ ದೇಶದ ಸಂಸ್ಕೃತಿಯನ್ನು ವಿದೇಶದಲ್ಲಿ ಪಸರಿಸಬೇಕು. ಅವರ ಕೀರ್ತಿ ಎಲ್ಲೆಡೆ ಹರಡಲಿ ಎಂದು ಹಾರೈಸಿದರು.

ಅತಿಥಿಯಾಗಿ ಪಾಲ್ಗೊಂಡ ಅರುಣೋದಯ ಕಲಾನಿಕೇತನ ಮುಂಬಯಿ ಇದರ ನಿರ್ದೇಶಕಿ, ನೃತ್ಯಗುರು ವಿದುಷಿ ಡಾ| ಮೀನಾಕ್ಷೀ ರಾಜು ಶ್ರೀಯಾನ್‌ ಅವರು ಮಾತನಾಡಿ, ಕು| ತನ್ವಿ ಸಫಲತೆಗಾಗಿ ಪಟ್ಟ ಶ್ರಮ ಅಪಾರವಾಗಿದೆ. ಜೊತೆಗೆ ಮಾತಾಪಿತರ ಪ್ರೋತ್ಸಾಹವೂ ಇಲ್ಲಿ ಮೆಚ್ಚುವಂತಹದ್ದು. ಭರತನಾಟ್ಯದ ಮೂಲಕ ಸಾಂಸ್ಕೃತಿಕ ಲೋಕಕ್ಕೆ ತನ್ವಿ ನೀಡಿದ ಕೊಡುಗೆ ಇತರ ಮಕ್ಕಳಿಗೆ ಮಾದರಿಯಾಗಲಿ. ಭವಿಷ್ಯದಲ್ಲಿ ಕು| ತನ್ವಿ ಈ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆಗಳನ್ನು ಮಾಡುವಂತಾಗಲಿ ಎಂದು ಶುಭಹಾರೈಸಿದರು.

ಇನ್ನೋರ್ವ ಅತಿಥಿ ಶ್ರೀ ಮದ್ಭಾರತ ಮಂಡಳಿಯ ಶ್ರೀ ಲಕ್ಷ್ಮೀ ನಾರಾಯಣ ಮಂದಿರದ ಅಧ್ಯಕ್ಷ ಜಗನ್ನಾಥ ಪಿ. ಪುತ್ರನ್‌ ಉಪ್ಪೂರು ಅವರು ಮಾತನಾಡಿ, ಭರತನಾಟ್ಯ ವಿಶ್ವಾಸಾತ್ಮಕ, ಸಾಂಸ್ಕೃತಿಕ ಸೌಂದರ್ಯ ಕಲೆಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನೃತ್ಯ, ಸಂಗೀತದಲ್ಲಿನ ಸಂಶೋಧನಾತ್ಮಕ ಕಲೆಯಾಗಿದೆ. ಪ್ರಪಂಚಕ್ಕೆ ಶ್ರೀ ಕೃಷ್ಣನೋರ್ವನೇ ಅಧಿಪತಿಯಾಗಿರುವ ಈ ನೃತ್ಯಕ್ಕೆ ತನ್ವಿಯನ್ನು ಅವರ ಮಾತಾಪಿತರು ಅರ್ಪಿಸಿದ್ದಾರೆ. ಅವರ ಕೊಡುಗೆ ಅವಿಸ್ಮರಣೀಯವಾಗಿದೆ ಎಂದರು.

ಗೌರವ ಅತಿಥಿಯಾಗಿ ಪಾಲ್ಗೊಂಡ ಮೊಗವೀರ ವ್ಯವಸ್ಥಾಪಕ ಮಂಡಳಿಯ  ಟ್ರಸ್ಟಿ ಪುರಂದರ ಎನ್‌. ಸುವರ್ಣ ಹೊಸಬೆಟ್ಟು ಅವರು ಮಾತನಾಡಿ, ಸುಮಾರು 180 ಸಾಂಸ್ಕೃತಿಕ ನೃತ್ಯ ಕಲೆಗಳಲ್ಲಿ ಭರತನಾಟ್ಯವು ಅತ್ಯಂತ ಪ್ರಮುಖ ನೃತ್ಯಕಲೆಯಾಗಿದೆ. ಯಾವುದೇ ಅಡೆತಡೆಯಿಲ್ಲದೆ ತನ್ವಿಯ ಭರತನಾಟ್ಯ ಕಲೆಗೆ ಸಹಕಾರ ನೀಡಿದ ಮಾತಾಪಿತರು ನಿಜವಾಗಲೂ ಧನ್ಯರು. ಇದೊಂದು ಸುರತ್ಕಲ್‌ ಮತ್ತು ಎರ್ಮಾಳ್‌ ಕುಟುಂಬಸ್ಥರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.

ಇದೇ ಸಂದರ್ಭದಲ್ಲಿ ತನ್ವಿಯ ನೃತ್ಯ ನಿರ್ದೇಶನದ ಮಾರ್ಗದರ್ಶಿ, ನೃತ್ಯಗುರು, ವಿದುಷಿ ರೋಹಿಣಿ ಅನಂತ್‌ ಅವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿ, ಜೀವನದ ಕಠಿಣತೆಯಲ್ಲಿ ಪರಿಪೂರ್ಣತೆಯನ್ನು ಸಾಧಿಸಬಲ್ಲ ವ್ಯಕ್ತಿಗೆ ಯಶಸ್ಸು ಶತಃಸಿದ್ಧ. ಈ ನಿಟ್ಟಿನಲ್ಲಿ ತನ್ವಿಯ ಸಾಧನೆ ಮೆಚ್ಚುವಂತದ್ದು. ಕಿರಿಯ ವಯಸ್ಸಿನಲ್ಲಿ ಅವಳು ಬೆಳೆದ ಹಾದಿಯಿಂದ ಭರತನಾಟ್ಯದ ಆಸೆ, ಚಿಂತನೆಗಳು ಕೈಗೊಡುವಂತೆ ಮಾಡಿದೆ ಎಂದು ಹೇಳಿದರು.

ಪ್ರಾರಂಭದಲ್ಲಿ ಶೀತಲ್‌ ಕೋಟ್ಯಾನ್‌ ಸ್ವಾಗತಿಸಿದರು. ಪುಷ್ಪಾಂಜಲಿ ನೃತ್ಯದೊಂದಿಗೆ ತನ್ವಿ ಅವರಿಂದ ವಿವಿಧ ಭರತನಾಟ್ಯ ನೃತ್ಯಗಳು ನಡೆದವು. ಅಲರಿಪು, ದೇವರನಾಮ, ಪದಂ, ತಿಲ್ಲಣ ಇತ್ಯಾದಿ ವಿವಿಧ ನಾಟ್ಯಗಳಿಂದ ಕಲಾಭಿಮಾನಿಗಳನ್ನು ರಂಜಿಸಿದರು. ಹಿನ್ನೆಲೆ ಗಾಯನದಲ್ಲಿ ರಂಜನಿ ಗಣೇಶನ್‌, ಮೃದಂಗದಲ್ಲಿ ವಿದ್ವಾನ್‌ ಶಂಕರ ನಾರಾಯಣ, ವಯೋಲಿನ್‌ನಲ್ಲಿ ಎಸ್‌. ಆರ್‌. ಬಾಲಸುಬ್ರಹ್ಮಣ್ಯಂ, ಕೊಳಲಿನಲ್ಲಿ ಭಾಸ್ಕರ್‌ ನಾಗರಾಜನ್‌, ಧನುಷ್‌ ಅವರು ಸಹಕರಿಸಿದರು.

ಕೀರ್ತನ ಕೃಷ್ಣನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು. ನಾಟ್ಯ ಪ್ರವೀಣೆ ಕು| ತನ್ವಿ ಅವರು ವಂದಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. 

ಚಿತ್ರ-ವರದಿ : ರಮೇಶ್‌ ಉದ್ಯಾವರ 

ಟಾಪ್ ನ್ಯೂಸ್

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Narayan Gowda: ಹೆಚ್ಚಿನ ಮತಗಳಿಂದ ಎಚ್‌ಡಿಕೆ ಗೆಲ್ಲಿಸುತ್ತೇವೆ: ನಾರಾಯಣ ಗೌಡ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.