ಶಿಕ್ಷಕ ದಾನಯ್ಯ ಕವಟಗಿಮಠ ಇವರ ಕೃತಿ ಬಿಡುಗಡೆ ಕಾರ್ಯಕ್ರಮ
Team Udayavani, Mar 17, 2018, 4:19 PM IST
ಸೊಲ್ಲಾಪುರ: ಸಾಧನೆ ಮಾಡುವ ಮನಸ್ಸಿದ್ದರೆ ಏನೆಲ್ಲವೂ ಮಾಡಬಹುದು. ಸತತ ಪ್ರಯತ್ನ ಹಾಗೂ ಉನ್ನತ ಗುರಿಯಿಂದ ಯಶಸ್ಸು ಪಡೆಯಬಹುದು. ಯಶಸ್ಸು ತಾನಾಗಿಯೇ ಬರುವಂತ ವಸ್ತುವಲ್ಲ. ಅದು ಪರಿಶ್ರಮದಿಂದ ಮಾತ್ರ ದೊರೆಯುತ್ತದೆ ಎಂದು ವಿಜಯಪುರ ಮಹಿಳಾ ವಿಶ್ವ ವಿದ್ಯಾಲಯದ ಇಂಗ್ಲಿಷ್ ಪ್ರಾಧ್ಯಾಪಕ ರಮೇಶ ಜೋಶಿ ಅವರು ಹೇಳಿದರು.
ಇಂಗ್ಲಿಷ್ ಉಪನ್ಯಾಸಕರ ನೇಮಕಾತಿಗಾಗಿ ಹಾಗೂ ನೆಟ್-ಸ್ಲೆಟ್ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ದಾನಯ್ಯ ಕವಟಗಿಮಠ ಅವರು ಬರೆದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕ ಪರೀಕ್ಷ ಪ್ರಾಧಿ ಕಾರ, ಕೆಪಿಎಸ್ಸಿ ನಡೆಸುವ ಉಪನ್ಯಾಸಕರ ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯುಕ್ತವಾಗುವಂತಹ ಹಾಗೂ ನೆಟ್, ಸ್ಲೆಟ್ಗೆ ಅನುಕೂಲ ವಾಗಲೆಂದು, ತಾವು ಸ್ವತ: 24 ಸ್ಲೆಟ್, 2 ನೆಟ್, 3 ಟಿಇಟಿ, 1 ಪಿ.ಎಚ್ಡಿ ಪರೀಕ್ಷೆಗಳನ್ನು ಉತ್ತೀರ್ಣರಾಗಿ ವಿಶ್ವದಾಖಲೆ ನಿರ್ಮಿಸಿದ ದಾನಯ್ಯ ಕವಟಗಿಮಠ ಅವರು ತಮ್ಮ ಸ್ವಂತ ಅನುಭವದ ಆಧಾರದ ಮೇಲೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಈ ಕೃತಿ ಬರೆದಿದ್ದಾರೆ ಎಂದರು.
ನನ್ನ ವಿದ್ಯಾರ್ಥಿಯೊಬ್ಬರು ಇಷ್ಟೊಂದು ಉನ್ನತ ಯಶಸ್ಸು ಸಾಧಿಸಿದ್ದಲ್ಲದೆ ತಮ್ಮ ಗುರುಗಳಿಂದ ಕೃತಿ ಬಿಡುಗಡೆಗೊಳಿಸಿರುವುದು ನನಗೆ ಬಹಳ ಸಂತೋಷ ತಂದಿದೆ. ಇದಕ್ಕಿಂತ ದೊಡ್ಡ ಗೌರವ ಬೇರೆ ಯಾವುದಿಲ್ಲ. ಶಿಷ್ಯಾದೆಚ್ಛೆ ಪರಾಜಯಂ ಎಂಬಂತೆ ಯಾವಾಗ ವಿದ್ಯಾರ್ಥಿಗಳು ತಮಗೆ ವಿದ್ಯೆ ನೀಡಿದ ಗುರುಗಳಿಗಿಂತ ದೊಡ್ಡ ಸ್ಥಾನಕ್ಕೆ ಏರುತ್ತಾರೋ ಅದು ಆ ಗುರುಗಳಿಗೆ ನೀಡಿದ ಗೌರವ ಎಂದು ನುಡಿದರು. ಈ ಸಂದರ್ಭದಲ್ಲಿ ಬ್ರಿಟಿಷ್ ಕೌನ್ಸಿಲ್ನ ಮಹಾರಾಷ್ಟ್ರದ ವಿಭಾಗೀಯ ಪ್ರಮುಖರಾದ ಯೋಗೇಶ ಕಬಾಡೆ, ಪ್ರಾ| ಗೊಪಾಳ ಕುಲಕರ್ಣಿ, ಸಾವಳಿಗಿಯ ಎಸ್. ಹಿರೇಮಠ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ
Desi Swara: ಟ್ರೆಂಟ್ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …
Desi Swara: ಬಸ್ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ
Desi Swara: ಕನ್ನಡಿಗಾಸ್ ಸ್ಟಾರ್ ಅವಾರ್ಡ್ 2024 ಪ್ರದಾನ
Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ
MUST WATCH
ಹೊಸ ಸೇರ್ಪಡೆ
Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್, ಸ್ಟೋಯಿನಿಸ್, ಅಗರ್ ಹೊರಕ್ಕೆ
ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್
Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್
Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್ಗಳು: ಪ್ರವಾಸಿಗರಿಗೆ ಭಯ
IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್ಗಳ ಜಯ