ತೀಯಾ ಸೇವಾ ಸಹಕಾರ ಸಂಘದ ಸ್ವಸಹಾಯ ಸಂಘಗಳ 22ನೇ ತ್ತೈಮಾಸಿಕ ಸಭೆ
Team Udayavani, May 9, 2019, 12:37 PM IST
ಮುಂಬಯಿ: ತೀಯಾ ಸೇವಾ ಸಹಕಾರ ಸಂಘ ಪ್ರಯೋಜಕತ್ವದ ತೀಯಾ ಸ್ವಸಹಾಯ ಸಂಘಗಳ 22ನೇ ತ್ತೈಮಾಸಿಕ ಸಭೆಯು ಮೇ 5ರಂದು ಕ್ಲಿಕ್ ಸಭಾಂಗಣ ತೊಕ್ಕೊಟ್ಟು ಇಲ್ಲಿ ಜರಗಿತು.
ಕುಮಾರಿ ಸಂಜನಾರವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಈ ಕಾರ್ಯಕ್ರಮವನ್ನು ತೀಯಾ ಸಮಾಜ ಮುಂಬಯಿ ಇದರ ಮಾಜಿ ಅಧ್ಯಕ್ಷ, ಮುಂಬಯಿ ಉದ್ಯಮಿ ಚಂದ್ರಶೇಖರ ಬೆಲ್ಚಡ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. 73 ತೀಯಾ ಸ್ವಸಹಾಯ ಸಂಘಗಳ ಕಾರ್ಯವೈಖರಿಯ ಬಗ್ಗೆ ಪ್ರಶಂಸಿಸಿದ ಚಂದ್ರಶೇಖರ ಬೆಲ್ಚಡ ಅವರು ಮುಂದಿನ ದಿನಗಳಲ್ಲಿ ಸ್ತ್ರೀಯರು ಇನ್ನಷ್ಟು ಮುಂದೆ ಬಂದು ತಮ್ಮ ಮಕ್ಕಳಲ್ಲಿಯೂ ತೀಯಾ ಜಾತಿಯ ಬಗ್ಗೆ ಅಭಿಮಾನ ಮೂಡುವಂತೆ ಮಾಡಬೇಕು. ಮನುಷ್ಯನಿಗೆ ಸಮಯಪ್ರಜ್ಞೆ ಬಹಳ ಮುಖ್ಯ. ಬಡವನದರೂ ಪರವಾಗಿಲ್ಲ ಹೃದಯವೈಶಾಲ್ಯ ಇರಬೇಕು. ಒಳ್ಳೆಯ ಕನಸನ್ನು ಹೊಂದಿ ಅದನ್ನು ನನಸಾಗಿಸಬೇಕು. ಸಮಾಜದಲ್ಲಿ ಮಹಿಳೆಯರ ಪಾತ್ರ ಬಹಳವಾಗಿದೆ. ಮುಂದಿನ ಮಕ್ಕಳ ಭವಿಷ್ಯ ನಿಮ್ಮ ಕೈಯಲ್ಲಿದೆ ಎಂಬ ಬಹಳ ರಸವತ್ತಾಗಿ ಮಾತನಾಡಿದರು.
ಅತಿ ಉತ್ತಮ ಸಂಘ ಎಂಬ ಕೀರ್ತಿಗೆ ಶ್ರೀಶಾರದೆ ಸ್ವಸಹಾಯ ಬಹುಮಾನ ಪಡೆದುಕೊಂಡಿತು. ತೀಯಾ ಸಮಾಜ ಉಳ್ಳಾಲ ವಲಯದ ಅಧ್ಯಕ್ಷ ದಿನೇಶ್ ಕುಂಪಲ ಅವರು ಪ್ರಾಸ್ತಾವಿಕವಾಗಿ ಭಾಷಣ ಮಾಡಿದರು. ಉಷಾ ಮನೋಜ್ ವರದಿ ವಾಚಿಸಿದರು. ಯಶವಂತಿ ಜೆ. ಅವರು ಕಾರ್ಯಕ್ರಮ ನಿರೂಪಣೆಗೈದರು. ವೇದಿಕೆಯಲ್ಲಿ ತೀಯಾ ಸೇವಾ ಸಹಕಾರ ಸಂಘದ ಉಪಾಧ್ಯಕ್ಷರು ಮಾಧವ ಸುವರ್ಣ, ನಿರ್ದೇಶಕರಾದ ಪ್ರಕಾಶ್ ಉಳ್ಳಾಲ್, ರಾಜೀವ್ ಕೆ. ದಾಮೋದರ ಉಳ್ಳಾಲ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Lok Sabha Election: ಸೀನಿಯರ್ ಖೂಬಾಗೆ ಜ್ಯೂನಿಯರ್ ಖಂಡ್ರೆ ಸವಾಲು
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…