ಪ್ರಧಾನಿಗೆ ಠಾಕ್ರೆ, ಪವಾರ್ ಬೆಂಬಲದ ಭರವಸೆ
Team Udayavani, Jun 21, 2020, 10:35 AM IST
ಮುಂಬಯಿ, ಜೂ. 20: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಆಡಳಿತಾರೂಢ ಮೈತ್ರಿ ಪಾಲುದಾರ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಶರದ್ ಪವಾರ್ ಅವರು ಚೀನ ಜತೆಗಿನ ಮುಖಾಮುಖೀ ವಿಷಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಂಪೂರ್ಣ ಬೆಂಬಲವನ್ನು ಘೋಷಿಸಿದ್ದಾರೆ.
ಶುಕ್ರವಾರ ಸಂಜೆ ರಾಜಕೀಯ ಪಕ್ಷಗಳೊಂದಿಗೆ ನಡೆದ ಪ್ರಧಾನಿಯವರ ವೀಡಿಯೋ ಸಭೆಯಲ್ಲಿ ಶಿವಸೇನೆ ಮುಖ್ಯಸ್ಥ ಠಾಕ್ರೆ ಮತ್ತು ಪವಾರ್ ಅವರು ಈ ಬದ್ಧತೆಯನ್ನು ವ್ಯಕ್ತಪಡಿಸಿದರು. ನಾವು ಬಲಶಾಲಿ ಮತ್ತು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ಚೀನಕ್ಕೆ ತಲುಪಿಸಬೇಕು. ನಿಮ್ಮ ಮತ್ತು ಗಡಿಯಲ್ಲಿರುವ ಸೈನಿಕರ ಹಿಂದೆ ಮಹಾರಾಷ್ಟ್ರ ಸರಕಾರ ಸಂಪೂರ್ಣವಾಗಿ ನಿಲ್ಲಲಿದೆ ಎಂದು ಠಾಕ್ರೆ ಹೇಳಿದರು.
ಚೀನಕ್ಕೆ ಹೋಲಿಸಿದರೆ ಭಾರತವು ದುರ್ಬಲವಾಗಿದೆ ಎಂಬ ತಪ್ಪು ಅಭಿಪ್ರಾಯವನ್ನು ಹಬ್ಬಿಸಲಾಗಿತ್ತು. ಆದರೆ ಅದು ಹಳೆಯ ಕಥೆ ಈಗ, ನಾವು ಸಹ ಎಲ್ಲ ರೀತಿಯಲ್ಲೂ ಸುಸಜ್ಜಿತರಾಗಿದ್ದೇವೆ, ಆದರೆ ಯಾರಿಗೂ ಆಕ್ರಮಣ ಮಾಡಲು ಯಾವುದೇ ಆತುರವನ್ನು ಹೊಂದಿಲ್ಲ ಎಂದು ಸಿಎಂ ನುಡಿದರು. ನಾವು ಯಾವಾಗಲೂ ಸಂವಹನ ಮತ್ತು ಚರ್ಚೆಗೆ ಒತ್ತು ನೀಡುತ್ತೇವೆ, ಆದರೆ ಯಾರಾದರೂ ಅದರ ಲಾಭವನ್ನು ಪಡೆಯಲು ಪ್ರಯತ್ನಿಸಿದರೆ, ನಾವು ಅವರಿಗೆ ನಮ್ಮ ಶಕ್ತಿಯನ್ನು ತೋರಿಸಬೇಕಾಗುತ್ತದೆ ಎಂದು ಠಾಕ್ರೆ ಹೇಳಿದ್ದಾರೆ.
ಗಾಲ್ವಾನ್ ಕಣಿವೆಯಲ್ಲಿನ ಚೀನಿಯರ ವಿಮೋಚನಾ ಸೈನ್ಯವು ಆಕ್ರಮಿಸಿಕೊಂಡಿರುವುದು ಮೂಲಭೂತವಾಗಿ ಭಾರತದ ಕಡೆಯ ಡುಬ್ರೂಕ್-ಡಿಬಿಒ ರಸ್ತೆಯಲ್ಲಿ ಪ್ರಾಬಲ್ಯ ಸಾಧಿಸುವ ನಿರ್ದಿಷ್ಟ ಉದ್ದೇಶವನ್ನು ಹೊಂದಿದೆ ಎಂದು ಮಾಜಿ ರಕ್ಷಣಾ ಸಚಿವ ಪವಾರ್ ಹೇಳಿದರು.
ಚೀನಿ ಸೈನ್ಯವು ಯಾವುದೇ ಸಮಯದಲ್ಲಿ ಈ ರಸ್ತೆಯನ್ನು ಮುಚ್ಚಲು ಒತ್ತಾಯಿಸಲು ನಿರ್ಧರಿಸಬಹುದು ಮತ್ತು ಇದು ಭಾರತಕ್ಕೆ ಭಾರೀ ಮಿಲಿಟರಿ ವೆಚ್ಚವಾಗಿ ಪರಿಣಮಿಸಬಹುದು. ಡಿಬಿಒ ಕರಕೋರಂ ಪಾಸ್ ಮತ್ತು ಎಡಭಾಗದಲ್ಲಿನ ಸಿಯಾಚಿನ್ ಗ್ಲೆಸಿಯರ್ಗೆ ಮತ್ತಷ್ಟು ಸಂಪರ್ಕ ಕಲ್ಪಿಸುವುದರಿಂದ ಅದು ನಮಗೆ ಬಹಳ ಮುಖ್ಯವಾಗಿದೆ ಎಂದು ಪವಾರ್ ನುಡಿದಿದ್ದಾರೆ.
ಪಿಎಲ್ಎಯನ್ನು ಭಾರತದ ಕಡೆಯಿಂದ ಗಾಲ್ವಾನ್ ಕಣಿವೆಯಲ್ಲಿನ ಎತ್ತರದ ನೆಲವನ್ನು ಆಕ್ರಮಿಸದಂತೆ ಸ್ಥಳಾಂತರಿಸಬೇಕು. ಪಿಎಲ್ಎ ಗಾಲ್ವಾನ್ನಿಂದ ಸ್ಥಳಾಂತರಿಸಬೇಕೆಂದು ನಾವು ಬಯಸಿದರೆ, ಅದಕ್ಕೆ ಕಡ್ಡಾಯ ಕ್ರಮಗಳನ್ನು ಗಡಿಯಲ್ಲಿನ ಉದ್ವಿಗ್ನತೆಯನ್ನುನಿಷ್ಕ್ರಿಯಗೊಳಿಸಲು ರಾಜತಾಂತ್ರಿಕ ಮಾರ್ಗಗಳನ್ನು ಬಳಸುವ ಕಾರ್ಯತಂತ್ರವನ್ನು ಅನುಸರಿಸುವುದು ಸೂಕ್ತವಾಗಿದೆ ಎಂದು ಪವಾರ್ ಸಲಹೆ ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ