ಗೆಳೆಯರ ಸ್ವಾವಲಂಬನ ಕೇಂದ್ರದಿಂದನೃತ್ಯ ತರಬೇತಿ ಶಿಬಿರದ ಉದ್ಘಾಟನೆ
Team Udayavani, Aug 24, 2017, 2:44 PM IST
ಡೊಂಬಿವಲಿ: ಡೊಂಬಿವಲಿಯ ಗೆಳೆಯರ ಸ್ವಾವಲಂಬನ ಕೇಂದ್ರದ ಆಶ್ರಯದಲ್ಲಿ ಜರಗಿದ ನೃತ್ಯ ತರಬೇತಿ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ಇತ್ತೀಚೆಗೆ ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಅತಿಥಿಯಾಗಿ ಪಾಲ್ಗೊಂಡ ರಾಧಿಕಾ ಅವರು ತರಗತಿಯನ್ನು ಉದ್ಘಾಟಿಸಿ ಮಾತನಾಡಿ ನೃತ್ಯದಿಂದ ಮಾನಸಿಕ ಹಾಗೂ ಶಾರೀರಿಕ ಸ್ವಾಸ್ಥವನ್ನು ಕಾಪಾಡಲು ಸಾಧ್ಯವಿದೆ. ಶರೀರ ಶ್ರಮವು ಆಗುರುವುದರಿಂದ ಆರೋಗ್ಯವಂತರಾಗಿಲು ನೃತ್ಯ ಪೂರಕವಾಗಲಿದೆ ಎಂದು ಹೇಳಿದರು. ಕೇಂದ್ರದ ಹಿರಿಯ ಕನ್ನಡ ಶಿಕ್ಷಣ ಪ್ರತಿಭಾ ವೈದ್ಯ ಅವರು ಮಾತನಾಡಿ, ನೃತ್ಯ ಶಿಬಿರವು ಕೇವಲ ಮಕ್ಕಳಿಗೆ ಮಾತ್ರವಲ್ಲದೆ ಹಿರಿಯರಿಗೂ ಕಲಿಸುವಂತಾಗಲಿ. ಹಿರಿಯ ತುಳು-ಕನ್ನಡಿಗರಿಗೆ ತಾನು ನೃತ್ಯ ಕಲಿಸಲು ಸಂಪೂರ್ಣವಾಗಿ ಸಹಕರಿಸುತ್ತೇನೆ ಎಂದರು.
ಇನ್ನೋರ್ವ ಅತಿಥಿ ಹೇಮಾ ನಿತಿನ್ ಅವರು, ಕೇಂದ್ರದ ಚಟುವಟಿಕೆಗಳನ್ನು ಶ್ಲಾಘಿಸಿ, ಕೇಂದ್ರವು ಇನ್ನಷ್ಟು ಬೆಳೆಯಲಿ. ನಮ್ಮೆಲ್ಲರ ಸಹಕಾರ, ಪ್ರೋತ್ಸಾಹ, ಯಾವಾಗಲು ಕೇಂದ್ರಕ್ಕಿದೆ ಎಂದು ಹೇಳಿದರು. ಕುಂದಾಪುರದ ಫ್ಯಾಶನ್ ಡಿಸೈನರ್ ಭಾರತಿ ಅವರು ಸ್ವಾವಲಂಬನ ಕೇಂದ್ರದ ನೃತ್ಯ ಶಿಬಿರ ಹಾಗೂ ಸುಗಮ ಸಂಗೀತ ಮೊದಲಾದವುಗಳನ್ನು ಪ್ರಾರಂಭಿಸಿರುವುದು ಉತ್ತಮ ಕಾರ್ಯವಾಗಿದೆ. ಕೇಂದ್ರವು ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.
ಹೋಮಿಯೋಪತಿ ತಜ್ಞರಾದ ತಜ್ಞ ಡಾ| ಕೃಷ್ಣ ಶೆಟ್ಟಿ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದು ಕೇಂದ್ರಕ್ಕೆ ಶುಭ ಹಾರೈಸಿದರು. ನೃತ್ಯ ಶಿಬಿರದ ಶಿಕ್ಷಕಿಯರಾದ ಕು| ಸ್ಮೃತಿ ವಿನಾಯಕ ಪೈ, ಕು| ನೇಹಾ ನಿತಿನ್ ಹೆಗಡೆ ಅವರು ಗಣಪತಿಸ್ತುತಿ ನೃತ್ಯಗೈದರು. ಪ್ರೊ| ವೆಂಕಟೇಶ್ ಪೈ ಅವರು ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ