ಗೋರೆಗಾಂವ್ ಕರ್ಣಾಟಕ ಸಂಘದ ರಂಗಸ್ಥಳ ವಿಭಾಗ: ನಾಟಕ ಪ್ರದರ್ಶನ
Team Udayavani, Aug 28, 2018, 4:50 PM IST
ಮುಂಬಯಿ: ಗೋರೆಗಾಂವ್ ಕರ್ಣಾಟಕ ಸಂಘದ ಉಪ ಸಮಿತಿಯಾದ ರಂಗಸ್ಥಳದ ಸದಸ್ಯರು ಪರ್ವತವಾಣಿ ವಿರಚಿತ ಪ್ರತ್ಯಕ್ಷ ಪ್ರಮಾಣ ಎಂಬ ನಾಟಕವನ್ನು ಸಂಘದ ಸಭಾಗೃಹದಲ್ಲಿ ಆ. 18 ರಂದು ಪ್ರದರ್ಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್. ಎಂ. ಶೆಟ್ಟಿ ಅವರು ವಹಿಸಿದ್ದರು. ಮಮತಾ ಭಟ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಪಾತ್ರ ಪರಿಚಯವನ್ನು ರಂಗಸ್ಥಳದ ನಿರ್ದೇಶಕರಾದ ಹಾಗೂ ನಾಟಕದ ನಿರ್ದೇಶಕರಾದ ಸುರೇಶ್ ಪೂಜಾರಿ ಅವರು ಮಾಡಿದರು. ನಾಟಕದ ಬಗ್ಗೆ ಮಾತನಾಡಿದ ಪದ್ಮಜಾ ಮಣ್ಣೂರು ಅವರು ನಾಟಕ ಹೇಗೆ 40 ನಿಮಿಷಗಳ ಕಾಲ ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ ಎಂದರು. ಇನ್ನು ಇಂತಹ ನಾಟಕಗಳು ರಂಗಸ್ಥಳದಿಂದ ಮೂಡಿ ಬರಲಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಅಂದಿನ ಕಾರ್ಯಕ್ರಮದ ಅಧ್ಯಕ್ಷರಾಗಿದ್ದ ಎಸ್. ಎಂ. ಶೆಟ್ಟಿ ಅವರು ನಾಟಕ ಸುಂದರ ಹಾಗೂ ಮನೋರಂಜಕವಾಗಿತ್ತು ಎನ್ನುತ್ತಾ ಹೇಗೆ ನಮ್ಮ ದೇಹವನ್ನು ಇಂದಿನ ಯಾಂತ್ರಿಕ ಯುಗದಲ್ಲಿ ಆರೋಗ್ಯವಾಗಿರಿಸಬೇಕು ಎಂದು ತಿಳಿಸಿದರು. ಕೊನೆಗೆ ರಂಗಸ್ಥಳದ ಸಂಚಾಲಕಿ ಸುಜಾತಾ ಉಮೇಶ್ ಶೆಟ್ಟಿ ಅವರು ವಂದಿಸಿದರು. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ