ಧಾರಾವಿಯಲ್ಲಿ  ಕೋವಿಡ್‌ ವ್ಯಾಕ್ಸಿನೇಶನ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ಇಲ್ಲ


Team Udayavani, Jun 29, 2021, 11:32 AM IST

ಧಾರಾವಿಯಲ್ಲಿ  ಕೋವಿಡ್‌ ವ್ಯಾಕ್ಸಿನೇಶನ್‌ಗೆ ನಿರೀಕ್ಷಿತ ಪ್ರತಿಕ್ರಿಯೆ ಇಲ್ಲ

ಮುಂಬಯಿ: ಕೊಳೆಗೇರಿ ಧಾರಾವಿ ಎರಡು ಕೋವಿಡ್‌ ಅಲೆಗಳನ್ನು  ಪರಿಣಾಮಕಾರಿಯಾಗಿ ನಿಯಂತ್ರಿಸಿದರೂ ಈ ಪ್ರದೇಶದಲ್ಲಿ  ಮಾ. 1 ರಂದು ಪ್ರಾರಂಭ ಗೊಂಡ ವ್ಯಾಕ್ಸಿನೇಶನ್‌ ಬಗ್ಗೆ ಪ್ರತಿಕ್ರಿಯೆ ನಿರಸವಾಗಿದೆ. ಅಂದಿನಿಂದ 20,504 ಡೋಸ್‌ಗಳನ್ನು ಮಾತ್ರ ನೀಡಲಾಗಿರುವುದರಿಂದ ವ್ಯಾಕ್ಸಿನೇಶನ್‌ ಅನ್ನು ಹೆಚ್ಚಿಸುವ ಸಲುವಾಗಿ ಮುಂಬಯಿ ಮಹಾನಗರ ಪಾಲಿಕೆಯು ಮನೆ ಮನೆಗೆ ತೆರಳಿ ಅಭಿಯಾನವನ್ನು ಪ್ರಾರಂಭಿಸಿದೆ.

ಪ್ರದೇಶದ ಜನಸಂಖ್ಯೆ ಮತ್ತು ಸಾಂಕ್ರಾಮಿಕದ ಭಯವನ್ನು ಗಮನಿಸಿದರೆ ವ್ಯಾಕ್ಸಿ ನೇಶನ್‌ ಕೇಂದ್ರಗಳಲ್ಲಿ ಭಾರೀ ಜನಸಂದಣಿ ಇರುತ್ತದೆ ಎಂದು ಮುಂಬಯಿ ಮಹಾನಗರ ಪಾಲಿಕೆಯು ಪ್ರಾರಂಭದಲ್ಲಿ ಭಾವಿಸಿತ್ತು. ಆದರೆ ವಾಸ್ತವವಾಗಿ ಆರಂಭ ದಲ್ಲಿ ಸ್ವಲ್ಪ ಜನಸಂದಣಿ ಇತ್ತು. ಬಳಿಕ ಅದು ಕೆಲವೇ ದಿನ ಗಳವರೆಗೆ ಮಾತ್ರ ಗೋಚರಿಸಿದೆ. ಧಾರಾವಿ ಮೂರು ವ್ಯಾಕ್ಸಿ ನೇಶನ್‌ ಕೇಂದ್ರಗಳನ್ನು ಹೊಂದಿದ್ದು, ಪ್ರತಿಯೊಂದು ಕೇಂದ್ರಗಳೂ 100 ಪ್ರಮಾಣವನ್ನು ಪಡೆದರೂ ನಾಗರಿಕರು ಸಹಕಾರ ಉತ್ತೇಜನಕಾರಿಯಾಗಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಿಧ ಉಪಕ್ರಮ:

ಉತ್ಸಾಹವಿಲ್ಲದ ಪ್ರತಿಕ್ರಿಯೆಯನ್ನು ಪರಿ ಗಣಿಸಿ ಬಿಎಂಸಿ ಅಧಿಕಾರಿಗಳು ಎಪ್ರಿಲ್‌ ಮತ್ತು ಮೇ ತಿಂಗಳಲ್ಲಿ ಈ ಪ್ರದೇಶದಲ್ಲಿ ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದರು. ವ್ಯಾಕ್ಸಿ ನೇಶನ್‌ಗೆ ಸಂಬಂಧಿಸಿದ ಪ್ರಕಟನೆಗಳನ್ನು ಮಾಡ ಲಾಯಿತು. ಕೇಂದ್ರಗಳಿಗೆ ಉಚಿತ ಬಸ್‌ ವ್ಯವಸ್ಥೆಯನ್ನು  ಕಲ್ಪಿಸಲಾಯಿತು. ವ್ಯಾಕ್ಸಿ ನೇಶನ್‌ಗೆ ಬರುವ ನಾಗರಿಕರಿಗೆ ವಿಶೇಷ ಉಡುಗೊರೆಗಳನ್ನು ವಿತರಿಸಲಾಯಿತು. ಆದರೆ ಇವುಗಳು ನಾಗರಿಕರ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡಲಿಲ್ಲ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯೆ ನೀರಸ:

ಪ್ರತಿ ಕೇಂದ್ರವು ಪ್ರತೀದಿನ 100 ಡೋಸ್‌ಗಳನ್ನು ಪಡೆಯುತ್ತಿದ್ದರೂ ಜೂನ್‌ ಮೊದಲ ಏಳು ದಿನಗಳಲ್ಲಿ ಮೂರು ಕೇಂದ್ರಗಳಲ್ಲಿ 866 ಡೋಸ್‌ಗಳನ್ನು ಮಾತ್ರ ನೀಡಲಾಗಿದೆ. ಸಯಾನ್‌ ಯುಎಚ್‌ಸಿ 406 ಡೋಸ್‌ಗಳನ್ನು ನೀಡಿದರೆ, ಟ್ರಾನ್ಸಿಟ್‌ ಕ್ಯಾಂಪ್‌ ಸೆಂಟರ್‌ 248 ಮತ್ತು ಎಸ್‌ಡಬುÉ éಸಿ ಸೆಂಟರ್‌ನಲ್ಲಿ 212 ಡೋಸ್‌ ನೀಡಲಾಗಿದೆ.

ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆ ಯಿದ್ದು, ಪ್ರಸ್ತುತ ಲಸಿಕೆಗಳ ಕಡಿಮೆ ಪೂರೈಕೆ ಯೊಂದಿಗೆ ಒಂದು ನಿರ್ದಿಷ್ಟ ದಿನಕ್ಕೆ ನಿಗದಿ ಪಡಿಸಿದ ಎಲ್ಲ ಪ್ರಮಾಣಗಳನ್ನು ನಾವು ಬಳಸಿಕೊಳ್ಳುವುದಿಲ್ಲ ಎಂದು ಜಿ-ನಾರ್ತ್‌ ವಾರ್ಡ್‌ನ ಸಹಾಯಕ ಆಯುಕ್ತ ಕಿರಣ್‌ ದಿಘವ್ಕರ್‌ ತಿಳಿಸಿದ್ದಾರೆ.

ದೊಡ್ಡ ಅಭಿಯಾನದ ಅಗತ್ಯ:

ಪ್ರದೇಶದ ಜನರಲ್ಲಿ ಲಸಿಕೆಯ ಬಗ್ಗೆ ಹಿಂಜರಿಕೆ ಇದೆ. ಸ್ಥಳೀಯ ಸರಕಾರೇತರ ಸಂಸ್ಥೆಗಳ ಮೂಲಕ ಜನರನ್ನು ತಲುಪಿ, ಲಸಿಕೆ ಹಾಕುವಂತೆ  ಒತ್ತಾಯಿಸುತ್ತೇವೆ. ಲಸಿಕೆಗಳನ್ನು ತೆಗೆದುಕೊಂಡರೂ ಸಾವಿನ ಸಾಧ್ಯತೆಯಿದೆ ಎಂಬ ಸಾಮಾನ್ಯ ತಪ್ಪು ಕಲ್ಪನೆ ಇದೆ. ಲಸಿಕೆಗಳು ಸಾವಿಗೆ ಕಾರಣವಾಗಬಹುದು ಎಂದೂ ಹಲವರು ನಂಬುತ್ತಾರೆ. ಲಸಿಕೆ ಹಾಕಲು ಜನರನ್ನು ಪ್ರೋತ್ಸಾಹಿಸಲು ನಮಗೆ ದೊಡ್ಡ ಅಭಿಯಾನದ ಅಗತ್ಯವಿದೆ ಎಂದು ಧಾರಾವಿ ನಾಗರಿಕ ಸೇವಾ ಸಮಿತಿಯ ಅಧ್ಯಕ್ಷ ಸಿದ್ಧಾರ್ಥ್ ಮೇಧೆ ತಿಳಿಸಿದ್ದಾರೆ.

ಜಿ-ನಾರ್ತ್‌ನಲ್ಲಿ  ಧಾರಾವಿಗೆ ಎರಡನೇ ಸ್ಥಾನ:

ಜಿ-ನಾರ್ತ್‌ ವಾರ್ಡ್‌ ವ್ಯಾಪ್ತಿಯಲ್ಲಿ ಧಾರಾವಿ, ದಾದರ್‌ ಮತ್ತು ಮಹೀಮ್‌ ಅನ್ನು ಹೊಂದಿದೆ. ವಾರ್ಡ್‌ನಲ್ಲಿ ವ್ಯಾಕ್ಸಿನೇಶನ್‌ ಅಂಕಿಅಂಶಗಳ ವಿಷಯದಲ್ಲಿ ಧಾರಾವಿ ಎರಡನೇ ಸ್ಥಾನದಲ್ಲಿದೆ. ಮಾ. 1ರಿಂದ ಮಹೀಮ್‌ ಅನ್ನು ಮೂರು ವ್ಯಾಕ್ಸಿನೇಶನ್‌ ಕೇಂದ್ರಗಳು 40,681 ಡೋಸ್‌ಗಳನ್ನು ನೀಡಿದರೆ, ಧಾರಾವಿಯಲ್ಲಿ 20,504 ಡೋಸ್‌ಗಳನ್ನು ನೀಡಲಾಗಿದೆ. ದಾದರ್‌ 13,355 ಡೋಸ್‌ಗಳೊಂದಿಗೆ ಕೊನೆಯ ಸ್ಥಾನದಲ್ಲಿದೆ. ಧಾರಾವಿ 20 ಸಕ್ರಿಯ ಪ್ರಕರಣಗಳನ್ನು ಹೊಂದಿದ್ದು, ಚೇತರಿಕೆ ಪ್ರಮಾಣವು ಶೇ. 94.46ರಷ್ಟಿದೆ. ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಈ ಪ್ರದೇಶದಲ್ಲಿ ಒಟ್ಟು 6,844 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ 6,464 ಮಂದಿ ಚೇತರಿಸಿಕೊಂಡಿದ್ದು, 359 ಮಂದಿ ಸಾವನ್ನಪ್ಪಿದ್ದಾರೆ.

ಧಾರಾವಿಯಲ್ಲಿ ಲಸಿಕೆ ಅಭಿಯಾನದ ನಿಧಾನಗತಿ ಆತಂಕಕ್ಕೆ ಕಾರಣವಾಗಿದೆ. ಎಪ್ರಿಲ್‌ನಲ್ಲಿ ನಾವು ಜನರನ್ನು ಪ್ರೋತ್ಸಾಹಿಸಲು ವಿಭಿನ್ನ ರೀತಿಯಲ್ಲಿ ಪ್ರಯತ್ನಿಸಿದ್ದೇವೆ. ಅದು ನಮಗೆ ಉತ್ತಮ ಫಲಿತಾಂಶಗಳನ್ನು ನೀಡಿತು. ಆದರೆ ಈಗ ಮತ್ತೆ ಪ್ರತಿಕ್ರಿಯೆ ಕಳಪೆಯಾಗಿದೆ. ಮನೆ ಮನೆ ಅಭಿಯಾನವನ್ನು ಪ್ರಾರಂಭಿಸಿದ್ದೇವೆ. ಇದು ಲಸಿಕೆ ಪಡೆಯಲು ನಾಗರಿಕರನ್ನು ಪ್ರೇರೇಪಿಸಲಿದೆ.ಕಿರಣ್‌ ದಿಘವ್ಕರ್‌ ಸಹಾಯಕ ಆಯುಕ್ತರು, ಜಿ-ನಾರ್ತ್‌ ವಾರ್ಡ್‌

ಧಾರಾವಿಯಲ್ಲಿ ವ್ಯಾಕ್ಸಿನೇಶನ್‌ ಬಗ್ಗೆ ಕೆಲವು ತಪ್ಪು ಕಲ್ಪನೆಗಳಿವೆ. ಲಸಿಕೆ ಪ್ರಮಾಣಗಳಿಲ್ಲ ಎಂದು ಹಲವರ ಊಹನೆ. ಆದರೆ ವಾಸ್ತವದಲ್ಲಿ ಒದಗಿಸಲಾಗುತ್ತಿರುವ ಪ್ರಮಾಣಗಳೇ ಬಳಕೆಯಾಗುತ್ತಿಲ್ಲ.ಬಬ್ಬು  ಖಾನ್‌ ನಗರ ಸೇವಕರು, ವಾರ್ಡ್‌ ನಂಬರ್‌ 184

ಟಾಪ್ ನ್ಯೂಸ್

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌

Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.