ತಿಲಕ್ ನಗರ ಪೆಸ್ತಮ್ ಸಾಗರ್ ಕರ್ನಾಟಕ ಸಂಘ: 12ನೇ ವಾರ್ಷಿಕ ಮಹಾಸಭೆ
Team Udayavani, Jul 20, 2018, 5:46 PM IST
ಮುಂಬಯಿ: ಮಾನವೀಯ ನೆಲೆಯಲ್ಲಿ ಸ್ಥಾಪಿಸಲ್ಪಟ್ಟಿರುವ ನಮ್ಮ ಸಂಸ್ಥೆಯು ಇಂದು ಪರಿಸರದ ತುಳು- ಕನ್ನಡಿಗರ ಆಶೋತ್ತರಗಳಿಗೆ ಸ್ಪಂದಿಸಿ, ಅವರ ಸುಖ-ದು:ಖಗಳಲ್ಲಿ ಭಾಗಿಯಾಗುತ್ತ ಬಲಾಡ್ಯವಾಗಿ ಬೆಳೆದು ನಿಂತಿದೆ. ಐಕ್ಯ ಮತದಿಂದ ಯಾವುದೇ ಜಾತಿ, ಮತ- ಭೇದವಿಲ್ಲದೆ ಇಂದು ಸಂಘಟನೆಯು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ತುಳು- ಕನ್ನಡಿಗರು ಸಂಘಟಿತರಾದಾಗ ಸಮಾಜ ಬಲಿಷ್ಠವಾಗುತ್ತದೆ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸದಿಂದ ಸಂಸ್ಥೆಯ ಸ್ವಂತ ಕಚೇರಿಯನ್ನು ಶೀಘ್ರದಲ್ಲಿ ಪಡೆಯುವಂತಾಗಲಿ. ಈಗಾಗಲೇ ನೂತನ ಕಚೇರಿಯ ಮನವಿ ಪತ್ರವನ್ನು ಬಿಡುಗಡೆಗೊಳಿಸಲಾಗಿದ್ದು, ಸಂಸ್ಥೆಯ ಯೋಜನೆಗೆ ಎಲ್ಲರ ಸಹಾಯ, ಅಗತ್ಯ ಇದೆ ಎಂದು ತಿಲಕ್ ನಗರ ಪೆಸ್ತಮ್ ಸಾಗರ್ ಕರ್ನಾಟಕ ಸಂಘದ ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ ಅವರು ನುಡಿದರು.
ತಿಲಕ್ ನಗರ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ಇದರ 12 ನೇ ವಾರ್ಷಿಕ ಮಹಾಸಭೆಯು ತಿಲಕ್ ನಗರದ ಆಮಿc ಶಾಲಾ ಮತ್ತು ಸಹಕಾರ್ ಸಿನೆಮಾ ಹತ್ತಿರದ ರಘುವಂಶಿ ಸಭಾಗೃಹದಲ್ಲಿ ಜರಗಿದ್ದು, ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾರ್ಷಿಕ ವರದಿಯ ಬಗ್ಗೆ ಕೆಲವು ತಿದ್ದುಪಡಿಗಳನ್ನು ಗುಣಕರ ಹೆಗ್ಡೆ ಇವರು ನೀಡಿದರು. ಜಯ ಎ. ಶೆಟ್ಟಿ ಹಾಗೂ ಶ್ರೀಧರ ಶೆಟ್ಟಿ ಅವರು ಸೂಚಿಸಿ ಅನುಮೋದಿಸಿದರು. ವಾರ್ಷಿಕ ವರದಿಯನ್ನು ಗೌರವ ಕಾರ್ಯದರ್ಶಿ ಟಿ. ಆರ್. ಶೆಟ್ಟಿ ಅವರು ಮಂಡಿಸಿದರು. ಶರತ್ ವಿ. ಶೆಟ್ಟಿ ಮತ್ತು ಸ್ಥಾಪಕಾಧ್ಯಕ್ಷ ಶೇಖರ್ ಶೆಟ್ಟಿ ಅವರು ಸೂಚಿಸಿ, ಅನುಮೋದಿಸಿದರು. ವಾರ್ಷಿಕ ಲೆಕ್ಕಪತ್ರಗಳನ್ನು ಗೌರವ ಕೋಶಾಧಿಕಾರಿ ಅರುಣ್ಕುಮಾರ್ ಶೆಟ್ಟಿ ಮಂಡಿಸಿದರು. ರಘು ಮೊಲಿ ಮತ್ತು ದಿನೇಶ್ ಸಾಲ್ಯಾನ್ ಅವರು ಸೂಚಿಸಿ ಅನುಮೋದಿಸಿದರು.
2018-2019 ನೇ ಸಾಲಿಗೆ ಬಾಹ್ಯ ಲೆಕ್ಕಪರಿಶೋಧಕರಾಗಿ ಸಿಎ ವಿಶ್ವನಾಥ್ ಶೆಟ್ಟಿ ಹಾಗೂ ಆಂತರಿಕ ಲೆಕ್ಕಪರಿಶೋಧಕರಾಗಿ ದಯಾನಂದ ದೇವಾಡಿಗ ಇವರನ್ನು ಆಯ್ಕೆಮಾಡಲಾಯಿತು. ಸ್ವಂತ ಕಚೇರಿಯ ಬಗ್ಗೆ ಮನವಿ ಪತ್ರವನ್ನು ಕಟ್ಟಡ ಸಮಿತಿಯ ಗೌರವ ಕಾರ್ಯಾಧ್ಯಕ್ಷ ಜಯ ಎ. ಶೆಟ್ಟಿ, ಸ್ಮರಣ ಸಂಚಿಕೆ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ಕೆ. ಶೆಟ್ಟಿ, ಗೌರವ ಕಾರ್ಯಾಧ್ಯಕ್ಷ ಸತೀಶ್ ಶೆಟ್ಟಿ, ಅಧ್ಯಕ್ಷ ರಾಮಣ್ಣ ಬಿ. ದೇವಾಡಿಗ, ನಿಕಟಪೂರ್ವ ಅಧ್ಯಕ್ಷ ನ್ಯಾಯವಾದಿ ನಿತ್ಯಾನಂದ ಕೆ. ಶೆಟ್ಟಿ, ಗೌರವ ಕಾರ್ಯದರ್ಶಿ ಟಿ. ಆರ್. ಶೆಟ್ಟಿ, ಹಿರಿಯ ಸಲಹೆಗಾರ ಹರಿಶ್ಚಂದ್ರ ಶೆಟ್ಟಿ, ಮಾಜಿ ಅಧ್ಯಕ್ಷ ಶೇಖರ್ ಶೆಟ್ಟಿ ಹಾಗೂ ಇತರ ಪದಾಧಿಕಾರಿಗಳ ಸಮ್ಮುಖದಲ್ಲಿ ಬಿಡುಗಡೆಗೊಳಿಸಿದರು.
ನ್ಯಾಯವಾದಿ ನಿತ್ಯಾನಂದ ಶೆಟ್ಟಿ ಅವರು ಮಾತನಾಡಿ, ನಮಗೆ ಸ್ವಂತ ಕಚೇರಿ ಅತೀ ಮುಖ್ಯವಾಗಿದೆ. ಈಗಾಗಲೇ ಸಂಘದ ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಎಲ್ಲರು ಒಂದಾಗಿ ಇದರ ಬಗ್ಗೆ ಚರ್ಚಿಸುವ ಅನಿವಾರ್ಯತೆ ಇದೆ ಎಂದರು.
ನಿಕಟಪೂರ್ವ ಅಧ್ಯಕ್ಷ ಉದ್ಯಮಿ ಸತೀಶ್ ಶೆಟ್ಟಿ ಇವರು ಮಾತನಾಡಿ, ನಾವೆಲ್ಲರು ಒಂದು ಕುಟುಂಬವಿದ್ದಂತೆ. ಸದಸ್ಯ ಬಾಂಧವರ ಸುಖ- ದುಃಖಗಳಲ್ಲಿ ನಾವೆಲ್ಲರು ಒಗ್ಗಟ್ಟಿನಿಂದ ಪಾಲ್ಗೊಳ್ಳಬೇಕು. ಪ್ರೀತಿ, ವಿಶ್ವಾಸದಿಂದ ಕೈಗೊಂಡ ಯೋಜನೆಯ ಯಶಸ್ಸಿಗೆ ಮುಂದಾಗೋಣ. ಅಲ್ಲದೆ ನೂತನ ಕಚೇರಿಗಾಗಿ ತಾನು 1 ಲಕ್ಷ ರೂ. ಗಳನ್ನು ನೀಡುತ್ತಿದ್ದೇನೆ. ಎಲ್ಲರು ಸೇರಿ ಆದಷ್ಟು ಬೇಗ ಸ್ವಂತ ಕಚೇರಿ ಸ್ಥಾಪಿಸೋಣ ಎಂದರು.
ರಾಧಾ ಭಂಡಾರಿ, ಸುಗಂಧಿ ಶೆಟ್ಟಿ, ಜಯಂತಿ ಆರ್. ಮೊಲಿ, ಹೀಮಾ ಸಂಪತ್ ಶೆಟ್ಟಿ, ಅನಿತಾ ಶೆಟ್ಟಿ, ಶಿಲ್ಪಾ ಶರತ್ ಶೆಟ್ಟಿ, ದಯಾನಂದ ಎಂ. ದೇವಾಡಿಗ, ಅಮರೇಶ್ ಶೆಟ್ಟಿ, ಜಯಂತಿ ಎಂ. ದೇವಾಡಿಗ, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆ ಮಾಲತಿ ಜೆ. ಮೊಲಿ, ಕೋಶಾಧಿಕಾರಿ ಸಂಗೀತಾ ಸಿ. ಶೆಟ್ಟಿ ಅವರು ನೂತನ ಕಚೇರಿ ಸ್ಥಾಪನೆಗೆ ತಲಾ 50 ಸಾವಿರ ರೂ. ಗಳಿಗಿಂತ ಅಧಿಕ ದೇಣಿಗೆ ನೀಡುವುದಾಗಿ ಘೋಷಿಸಿದರು.
ಸಂಸ್ಥಾಪಕಾಧ್ಯಕ್ಷ ಶೇಖರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ನಾಗವೇಣಿ ಶ್ರೀಧರ ಶೆಟ್ಟಿ, ಶಾಲಿನಿ ಶೆಟ್ಟಿ, ಜಯಂತಿ ಮೊಲಿ, ಜಯಂತಿ ದೇವಾಡಿಗ, ಗುಣಕರ ಹೆಗ್ಡೆ, ದಯಾನಂದ ದೇವಾಡಿಗ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕೌಡೂರು ಸುಶೀರ್ ಶೆಟ್ಟಿ, ವೈದ್ಯಕೀಯ ವಿಭಾಗದ ಕಾರ್ಯಾಧ್ಯಕ್ಷ ಸುಧಾಕರ ಸಫಲಿಗ, ಸಂಘದ ಉಪಾಧ್ಯಕ್ಷ ಚಂದ್ರಹಾಸ್ ಎನ್. ಶೆಟ್ಟಿ ಅವರು ಮಾತನಾಡಿ ಸಲಹೆ ಸೂಚನೆಗಳನ್ನು ನೀಡಿದರು.
ಸೇನೆಯಿಂದ ನಿವೃತ್ತಗೊಂಡ ಸಂಪತ್ ಶೆಟ್ಟಿ ದಂಪತಿಯನ್ನು ಸಂಸ್ಥೆಯ ವತಿಯಿಂದ ಸಮ್ಮಾನಿಸಿ ಗೌರವಿಸಲಾಯಿತು. ಗೌರವ ಕಾರ್ಯದರ್ಶಿ ಟಿ. ಆರ್. ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ಜತೆ ಕಾರ್ಯದರ್ಶಿ ಸಂಪತ್ ಶೆಟ್ಟಿ ವಂದಿಸಿದರು. ಸುದೇಶ್ ಶೆಟ್ಟಿ ಪ್ರಾರ್ಥನೆಗೈದರು. ಸಂಪತ್ ಶೆಟ್ಟಿ ಅವರ ಪ್ರಾಯೋಜಕತ್ವದಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಸಂಘವು ಎಲ್ಲ ಸಮಾಜದ ಹಾಗೂ ಇನ್ನಿತರರೊಂದಿಗೆ ಸಹಬಾಳ್ವೆಯನ್ನು ಹೊಂದಿದ್ದು, ನಮ್ಮ ಸ್ವಂತ ಕಚೇರಿಯ ಜವಾಬ್ದಾರಿಯನ್ನು ನನ್ನ ಹೆಗಲ ಮೇಲೆ ಹಾಕಿದ್ದೀರಿ. ಖಂಡಿತವಾಗಿಯೂ ನಾನು ಹಿಂದೆ ನೋಡದೆ, ದಿಟ್ಟತನದಿಂದ ಯೋಜನೆಯ ಸಫಲತೆಗೆ ಮುಂದಾಗುತ್ತೇನೆ. ನಾವೆಲ್ಲರೂ ಒಮ್ಮತದಿಂದ ಸ್ವಂತ ಕಚೇರಿಯ ಬಗ್ಗೆ ಕಾರ್ಯನಿರ್ವಹಿಸಬೇಕು. ನಮ್ಮ 13ನೇ ವಾರ್ಷಿಕೋತ್ಸವವನ್ನು 2019 ನೇ, ಫೆ. 23ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಆಯೋಜಿಸಲಾಗಿದೆ. ಅದಕ್ಕಿಂತ ಮೊದಲು ನಮ್ಮ ಯೋಜನೆ ಕೈಗೂಡಬೇಕು. ಎಲ್ಲರೂ ಸಹಾಯ, ಸಹಕಾರ ನೀಡಿ ಯೋಜನೆಯ ಕನಸನ್ನು ನನಸಾಗಿಸಬೇಕು
– ಜಯ ಎ. ಶೆಟ್ಟಿ (ಕಾರ್ಯಾಧ್ಯಕ್ಷರು, ಕಟ್ಟಡ ಸಮಿತಿ ಪೆಸ್ತಮ್ ಸಾಗರ್ ಕರ್ನಾಟಕ ಸಂಘ ತಿಲಕ್ನಗರ).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
T20 World Cup; ರೋಹಿತ್, ವಿರಾಟ್ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?
The Very Best Payment Techniques for Online Casinos
Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
Russia War: ಉಕ್ರೇನ್ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ