ಸಿಎ ಎನ್. ಬಿ. ಶೆಟ್ಟಿ ಅವರಿಗೆ 2020ನೇ ಸಾಲಿನ “ಟೈಮ್ಸ್ ಮೆನ್ ಆಫ್ ದ ಈಯರ್ ಪುರಸ್ಕಾರ’
Team Udayavani, Feb 8, 2021, 9:08 PM IST
ಮುಂಬಯಿ: ನಗರದ ಲೆಕ್ಕ ಪರಿಶೋಧಕ, ಫೈನಾನ್ಶಿಯಲ್ ಕನ್ಸಲ್ಟೆಂಟ್ ಸಿಎ ಎನ್. ಬಿ. ಶೆಟ್ಟಿ ಅವರು ಪ್ರತಿಷ್ಠಿತ 2020ನೇ ಸಾಲಿನ “ಟೈಮ್ಸ್ ಮೆನ್ ಆಫ್ ದ ಈಯರ್ ಪುರಸ್ಕಾರ’ ಕ್ಕೆ ಭಾಜನರಾಗಿದ್ದಾರೆ.
ಮಹಾನಗರದಲ್ಲಿ ಜರಗಿದ ಸಮಾರಂಭದಲ್ಲಿ ಬಾಲಿವುಡ್ ಪ್ರಸಿದ್ಧ ಗಾಯಕಿ ಇಲಾ ಅರುಣ್ ಪುರಸ್ಕಾರ ಫಲಕವನ್ನು ಸಿಎ ಎನ್. ಬಿ. ಶೆಟ್ಟಿ ಅವರಿಗೆ ಪ್ರದಾನ ಮಾಡಿ, ಗೌರವಿಸಿ ಅಭಿನಂದಿಸಿದರು. ಆರ್ಥಿಕ ರಾಜಧಾನಿ ಮುಂಬಯಿಯ ಬಾಂದ್ರಾ ಪಶ್ಚಿಮದ ವಿಲ್ರೋಡ್ನಲ್ಲಿ ಲೆಕ್ಕ ಪರಿಶೋಧಕ
ರಾಗಿ ಮತ್ತು ಫೈನಾನ್ಶಿಯಲ್ ಕನ್ಸಲ್ಟೆಂಟ್ ಸಂಸ್ಥೆ ಹೊಂದಿರುವ ಅವರು ಸುಮಾರು 5 ದಶಕಗಳ ಅಗಾಧ ಜ್ಞಾನ, ಸುದೀರ್ಘ ಅನುಭವಸ್ಥವುಳ್ಳ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆಂಟ್ ಆಗಿ ಹೆಸರುವಾಸಿಯಾಗಿದ್ದಾರೆ. ತ್ರಿವೇಣಿ ಗ್ರೂಫ್ ಹಾಸ್ಪಿಟಾಲಿಟಿ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಅವರು ಉದ್ಯಮಿ ಯಾಗಿ, ಮಚೆìಂಟ್, ಬ್ಯಾಂಕಿಂಗ್, ಮ್ಯಾನೇಜ್ಮೆಂಟ್ ಕನ್ಸಲ್ಟೆನ್ಸಿ ಸರ್ವಿಸಸ್ ಮತ್ತು ಇನ್ಫೋಟೆಕ್ನಲ್ಲಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆ ಹೊಂದಿದ್ದಾರೆ.
ಉಡುಪಿ ಬೊಮ್ಮಾರಬೆಟ್ಟು ನಿವಾಸಿ, ಕೃಷಿಕರಾದ ಕರಿಯ ಶೆಟ್ಟಿ ಮತ್ತು ಜಲಜಾ ಶೆಟ್ಟಿ ಹಿರಿಯಡ್ಕ ದಂಪತಿ ಪುತ್ರರಾಗಿರುವ ಇವರು ಸರಳ, ಸಜ್ಜನ ವ್ಯಕ್ತಿತ್ವದ ಮಿತಭಾಷಿಯಾಗಿ, ತೆರೆಮರೆಯ ಸಮಾಜ ಸೇವಕರಾಗಿ ಹೆಸರು ಗಳಿಸಿದ್ದಾರೆ. ಜಾತಿ, ಮತ, ಧರ್ಮವನ್ನು ಮರೆತು ಆರ್ಥಿಕವಾಗಿ ಹಿಂದುಳಿದ ಸಮಾಜ ಬಾಂಧವರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ.
ಒಳನಾಡ ಮತ್ತು ಹೊರನಾಡ ಆರೋಗ್ಯ, ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಹಾಗೂ ಇನ್ನಿತರ ಸೇವಾ ಸಂಸ್ಥೆಗಳ ಪ್ರೋತ್ಸಾಹಕರಾಗಿದ್ದಾರೆ. 1970ರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಪದೋನ್ನತಿಯಾಗಿ ರಾಷ್ಟ್ರದಲ್ಲೇ ಹನ್ನೊಂದನೇ ರ್ಯಾಂಕ್ ಪಡೆದ ಅವರಿಗೆ ವಿವಿಧ ಕ್ಷೇತ್ರಗಳ ಸಾಧನೆಗಳಿಗೆ ಅನೇಕ ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ. 2020ರಲ್ಲಿ ಎಸ್ಎಂಇ ಎಂಟರ್ಪ್ರಿನರ್ಶಿಪ್ ಎಕ್ಸ್ಲೆನ್ಸ್ ಪುರಸ್ಕಾರಕ್ಕೂ ಭಾಜನರಾಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ