ತುಳು-ಕನ್ನಡ ವೆಲ್ಫೇರ್ ಅಸೋಸಿ ಯೇಶನ್ :ಕವಿ ಸಂಭ್ರಮ
Team Udayavani, Nov 11, 2018, 5:29 PM IST
ಮುಂಬಯಿ:ತುಳು-ಕನ್ನಡ ವೆಲ್ಫೆàರ್ ಅಸೋಸಿ ಯೇಶನ್ ಮೀರಾ-ಭಾಯಂದರ್ ಇದರ ವತಿಯಿಂದ ಕವಿ ಸಂಭ್ರಮ ಮತ್ತು ವಿಚಾರಗೋಷ್ಠಿ ಮೀರಾರೋಡ್ ಪೂರ್ವದ ಜಹಾಂಗೀರ್ ವೃತ್ತ ಸಮೀಪದ ಶ್ರೀ ಗುರುನಾರಾಯಣ ಸಭಾಗೃಹದಲ್ಲಿ ಜರಗಿತು.
ಪಲಿಮಾರು ಮಠ ಮೀರಾ ರೋಡ್ ಇದರ ವಿಶ್ವಸ್ತ ರಾಧಾಕೃಷ್ಣ ಭಟ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿದ್ದರು. ಕವಿಗೋಷ್ಠಿಯಲ್ಲಿ ಮುಂಬಯಿ ಕವಿ ಡಾ| ಕರುಣಾಕರ ಶೆಟ್ಟಿ ಪಣಿಯೂರು ಅವರು ಬಗ್ಗರ ಗುತ್ತುದ ಜಲಮಲಕ್, ಕವಿ, ರಂಗನಿರ್ದೇಶಕ ಸಾದಯಾ ಅವರು ಪೊನ್ನಕ್ಕ, ಅಪರ್ಣಾ ರಾವ್ ಅವರು ಪ್ರಸ್ಥಾನ, ಗಣೇಶ್ ಕುಮಾರ್ ಆಚಾರ್ಯ ಅವರು ಜೋಡೆತ್ತಿಸ ಬಂಡಿ, ರಮೇಶ್ ಪುತ್ರನ್ ಅವರು ಶಿವ ವಚನ ಎಂಬ ಸ್ವರಚಿತ ಕವನ ವಾಚಿಸಿದರು.
ವಿಚಾರಗೋಷ್ಠಿಯಲ್ಲಿ ಲೇಖಕಿ ಲತಾ ಸಂತೋಷ್ ಶೆಟ್ಟಿ ಕೋಪ ದುರ್ಬಲತೆಯ ಲಕ್ಷಣ ವಿಷಯದಲ್ಲಿ ಮಾತನಾಡಿ, ಕೋಪವನ್ನು ನಿಯಂತ್ರಣ ಮಾಡಿ ಶಾಂತಿಯಿಂದ ಬದುಕನ್ನು ರೂಪಿಸಬೇಕು ಎಂದರು. ಹಿರಿಯ ರಂಗತಜ್ಞ ಗುಣಪಾಲ್ ಉಡುಪಿ ಅವರು ಸಂಸ್ಕೃತಿಯ ಅಳಿವು – ಉಳಿವುಗಳ ವಿಷಯದಲ್ಲಿ ವಿಚಾರ ಮಂಡಿಸಿ, ಆಚರಣೆಗಳು ಕಾಯ್ದುಕೊಂಡು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕಾದ ಜವಾಬ್ದಾರಿ ನಮಗಿದೆ ಎಂದು ನುಡಿದರು.
ಅಸೋಸಿಯೇಶನ್ ಅಧ್ಯಕ್ಷ ಎ.ಕೆ. ಹರೀಶ್ ಕವಿ ಮತ್ತು ಸಾಹಿತಿಗಳನ್ನು ಗೌರವಿಸಿದರು. ಹಿರಿಯ ನಾಟಕಕಾರ ದೇವದಾಸ್ ಪಿ. ಸಾಲ್ಯಾನ್ ಕಾರ್ಯ ಕ್ರಮ ನಿರೂಪಿಸಿದರು. ಕವಿ ತನ್ನ ಕಲ್ಪನೆಗೆ ಮೂರ್ತ ರೂಪಕೊಟ್ಟು ಕಾವ್ಯವನ್ನು ರಚಿಸುತ್ತಾನೆ. ರವಿಗೆ ಕಾಣದ್ದನ್ನು ಕವಿ ತನ್ನ ಕಲ್ಪನೆಯಲ್ಲಿ ಕಂಡು ನಮಗೆ ಪ್ರಸ್ತುತ ಪಡಿಸುತ್ತಾನೆ ಎಂದು ರಾಧಾಕೃಷ್ಣ ಭಟ್ ಅಭಿ ಪ್ರಾಯಪಟ್ಟರು. ಅಸೋ. ಸಾಂಸ್ಕೃತಿಕ ಸಮಿತಿ ಕಾರ್ಯದರ್ಶಿ ಅಶೋಕ್ ವಳದೂರು ವಂದಿಸಿದರು.
ಪದಾಧಿಕಾರಿಗಳಾದ ಹೇಮ್ ಪ್ರಕಾಶ್ ಅಮೀನ್, ವಸಂತಿ ಶೆಟ್ಟಿ, ಉಪಸ್ಥಿತರಿದ್ದರು. ದಾಮೋದರ ಗುಜರನ್, ನಾಗೇಶ್ ಸಾಫಲ್ಯ, ಉಮೇಶ್ ಬರಗೂರು, ಅರುಣ್ ಸಾಲ್ಯಾನ್, ಅಶೋಕ್ ವಳದೂರು, ಆಶಾ ಪಿ. ಶೆಟ್ಟಿ, ಮೀನಾಕ್ಷೀ ಪೂಜಾರಿ, ಸುಜಯಾ ಎ. ಶೆಟ್ಟಿ, ಗೀತಾ ಶೆಟ್ಟಿ, ಸುಜಾತಾ ಕೋಟ್ಯಾನ್ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
Scrap mafia ದರೋಡೆಕೋರ ರವಿ ಕಾನಾ ಮತ್ತು ಪ್ರೇಯಸಿ ಕಾಜಲ್ ಥಾಯ್ಲೆಂಡ್ ನಲ್ಲಿ ಬಂಧನ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Dakshina Kannada; ಕ್ಯಾಪ್ಟನ್ ಬ್ರಿಜೇಶ್ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ
Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್ ಗೆಲುವು ಕಾಣುವಾಸೆ..