ತುಳುಕೂಟ ಐರೋಲಿ : ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ
Team Udayavani, Jul 17, 2018, 12:08 PM IST
ನವಿಮುಂಬಯಿ: ತುಳುಕೂಟ ಐರೋಲಿ ಇದರ ಆಶ್ರಯದಲ್ಲಿ ಜು. 8 ರಂದು ಐರೋಲಿಯ ಹೆಗ್ಗಡೆ ಭವನದಲ್ಲಿ ಜರಗಿದ ವಿದ್ಯಾನಿಧಿ ವಿತರಣೆ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಸಂಸ್ಥೆಯ ದಶಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಗೊಳಿಸಲಾಯಿತು. ಅಲ್ಲದೆ ಐರೋಲಿ ಹಾಗೂ ನವಿಮುಂಬಯಿ ಪರಿಸರದ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಪುಲಿ-ಮುಂಚಿ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ತುಳುಕೂಟ ಐರೋಲಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಅಧ್ಯಕ್ಷ, ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಇವರು ದಶಮಾನೋತ್ಸವ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿ ಶುಭಹಾರೈಸಿದರು.
ವಿಶೇಷ ಆಮಂತ್ರಿತ ಅತಿಥಿ ಬರೋಡಾ ತುಳುಕೂಟದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ, ಗೌರವ ಅತಿಥಿಗಳಾಗಿ ಪಾಲ್ಗೊಂಡ ಶ್ರೀ ಶನೀಶ್ವರ ಮಂದಿರದ ಅಧ್ಯಕ್ಷ ಧರ್ಮದರ್ಶಿ ರಮೇಶ್ ಎಂ. ಪೂಜಾರಿ, ನೆರೂಲ್ ಶ್ರೀ ಶನೀಶ್ವರ ಮಂದಿರದ ಕಾರ್ಯದರ್ಶಿ, ರಂಗಕರ್ಮಿ ವಿ. ಕೆ. ಸುವರ್ಣ, ಬಂಟರ ಸಂಘ ಮುಂಬಯಿ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ತಾಳಿಪಾಡಿಗುತ್ತು ಭಾಸ್ಕರ ಶೆಟ್ಟಿ, ಬಂಟರ ಸಂಘ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಗದೀಶ್ ಶೆಟ್ಟಿ ನಂದಿಕೂರು, ಹೆಗ್ಗಡೆ ಸೇವಾ ಸಂಘ ಮುಂಬಯಿ ಅಧ್ಯಕ್ಷ ವಿಜಯ ಬಿ. ಹೆಗ್ಡೆ, ಸಂಸ್ಥೆಯ ಕಾರ್ಯದರ್ಶಿ ರಾಜೇಶ್ ಬಿ. ಶೆಟ್ಟಿ, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಅಮರ್ನಾಥ್ ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರುಗಳಾದ ಕೆ. ಕೆ. ಹೆಬ್ಟಾರ್, ನಾಗೇಶ್ ಶೆಟ್ಟಿ, ಕೋಶಾಧಿಕಾರಿ ಗಂಗಾಧರ ಅಮೀನ್, ಶಿಕ್ಷಣ ಸಮಿತಿಯ ಕಾರ್ಯಾಧ್ಯಕ್ಷ ರಮೇಶ್ ದೇವಾಡಿಗ, ಮಾಜಿ ಅಧ್ಯಕ್ಷ ಪ್ರಕಾಶ್ ಆಳ್ವ, ಸಂಘದ ಪದಾಧಿಕಾರಿಗಳಾದ ಜಗದೀಶ್ ಶೆಟ್ಟಿ ಮುಲ್ಕಿ, ಜಗದೀಶ್ ಶೆಟ್ಟಿ ನಾಡಾಜೆಗುತ್ತು, ಅಮರ್ನಾಥ್ ಶೆಟ್ಟಿ, ವಿಜಯ, ರೂಪಾ, ಜಗನ್ನಾಥ ಸ್ವಾಮಿ, ಕೃಷ್ಣ ಶೆಟ್ಟಿ, ಲ್ಯಾನ್ಸಿ ಡಿಕುನ್ಹಾ, ಜಯಪ್ರಕಾಶ್ ಶೆಟ್ಟಿ, ಸದಸ್ಯೆಯರುಗಳಾದ ಗೀತಾ, ಕೃಷಿ¡ ಶೆಟ್ಟಿ, ಉದಯಾ ಶೆಟ್ಟಿ, ರೂಪಾ, ಅಶ್ವಿನಿ ಗೌಡ, ಪುಷ್ಪಾ ಶೆಟ್ಟಿ, ಗೀತಾ ಪೂಜಾರಿ, ರಾಜೇಶ್, ಗಣೇಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ಐರೋಲಿ ಮತ್ತು ನವಿಮುಂಬಯಿ ಪರಿಸರದ ಮಹಿಳೆಯರಿಗಾಗಿ ತುಳುನಾಡಿನ ಖಾದ್ಯ ತಿಂಡಿ-ತಿನಸುಗಳಿಂದ ಕೂಡಿದ ಅಡುಗೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಗಳು ಮನೆಯಿಂದಲೇ ತಯಾರಿಸಿದ ವಿವಿಧ ಖಾದ್ಯಗಳನ್ನು ಪ್ರದರ್ಶಿಸಿದರು.
ಅತಿಥಿ-ಗಣ್ಯರು ಸ್ಪರ್ಧೆಯಲ್ಲಿ ವಿಜೇತರಾದ ಸ್ಪರ್ಧಿಗಳಿಗೆ
ಬಹುಮಾನ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ನಾಡಾಜೆಗುತ್ತು ಜಗದೀಶ್ ಶೆಟ್ಟಿ ಅವರು ನಿರ್ವಹಿಸಿದರು.
ಅಡುಗೆ ಸ್ಪರ್ಧೆಯ ವಿಜೇತರು
ಬಟಾಟೆ-ವಠಾಣ ಗಸಿ : ಪ್ರಥಮ ಸತ್ಯವತಿ ನಾಯಕ್ ಘನ್ಸೋಲಿ, ದ್ವಿತೀಯ ಭಾರತಿ ಶೆಟ್ಟಿ ಘನ್ಸೋಲಿ, ತೃತೀಯ ವಿಯೋಲಾ ಡಿಕುನ್ಹಾ, ಸಮಾಧಾನಕರ ಬಹುಮಾನವನ್ನು ಪ್ರೇಮಾ ಮನೋಜ್ ಶೆಟ್ಟಿ ಮತ್ತು ಶಾಂತಿ ಎನ್. ಗೌಡ ಇವರು ಪಡೆದರು.
ಕಪ್ಪರೊಟ್ಟಿ…ಪ್ರಥಮ ತುಳಸಿ ಕರ್ಕೇರ ದಿಘಾ, ದ್ವಿತೀಯ ಅಶ್ವಿನಿ ದೇವಾಡಿಗ, ತೃತೀಯ ಮಲ್ಲಿಕಾ ಶೆಟ್ಟಿ ಐರೋಲಿ, ಸಮಾಧಾನಕರ ಬಹುಮಾನವನ್ನು ಪ್ರತಿಭಾ ಶೆಟ್ಟಿ ಐರೋಲಿ, ರಾಧಾ ಪೂಜಾರಿ ವಾಶಿ ಅವರು ಪಡೆದರು.
ಪೆಲಕಾಯಿಗಟ್ಟಿ…ಪ್ರಥಮ ರಾಧಾ ಪೂಜಾರಿ ವಾಶಿ, ದ್ವಿತೀಯ ದಾಕ್ಷಾಯಣಿ ಬಂಗೇರ, ತೃತೀಯ ನಯನಾ ಮಡಿವಾಳ ಕೋಪರ್ಖರ್ಣೇ, ಸಮಾಧಾನಕರ ಬಹುಮಾ ನವನ್ನು ಸುಮಿತ್ರಾ ಶೆಟ್ಟಿ ಘನ್ಸೋಲಿ, ಸುಜಾತಾ ವಿ. ಶೆಟ್ಟಿ ಐರೋಲಿ ಇವರು ಪಡೆದರು.
ಎಟ್ಟಿಗಸಿ…ಪ್ರಥಮ ರಾಧಾ ಪೂಜಾರಿ ವಾಶಿ, ದ್ವಿತೀಯ ಮೀನಾಕ್ಷೀ ಗೌಡ, ತೃತೀಯ ಪ್ರೇಮಾ ಸಾಲ್ಯಾನ್, ಸಮಾಧಾನಕರ ಬಹುಮಾನವನ್ನು ಶಾಂತಿ ಶೇರಿಗಾರ್ ಐರೋಲಿ, ರಾಜೇಶ್ವರಿ ಶೆಟ್ಟಿ ಕೋಪರ್ಖರ್ಣೇ ಪಡೆದರು.
ಕೋರಿ ಪುಲಿಮುಂಚಿ-ನೀರ್ದೋಸೆ…ಪ್ರಥಮ ಪ್ರೇಮಾ ರವಿ ಶೆಟ್ಟಿ ನೆರೂಲ್, ದ್ವಿತೀಯ ಮೋಹಿನಿ ಭೋಜ ಶೆಟ್ಟಿ, ತೃತೀಯ ಶೋಭಾ ಪೂಜಾರಿ ಸೀವುಡ್, ಸಮಾಧಾಕರ ಬಹುಮಾನ – ಸುಲೋಚನಾ ಶೆಟ್ಟಿ , ಅಶ್ವಿನಿ ದೇವಾಡಿಗ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Kasaragod ವಿವಿಪ್ಯಾಟ್ಗಳಲ್ಲಿ ದೋಷಗಳಿಲ್ಲ: ಚುನಾವಣಾಧಿಕಾರಿ
ರಾಜ್ಯದಲ್ಲಿ ಐದೂವರೆ ಸಿಎಂಗಳು: ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ವ್ಯಂಗ್ಯ
ರಾಜ್ಯಕ್ಕೆ ಅನ್ಯಾಯವಾದಾಗ ಸ್ಪಂದಿಸದ ಕೇಂದ್ರ ಸರಕಾರ: ಇಂಧನ ಸಚಿವ ಜಾರ್ಜ್
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
ದೇಶದ ಅಭಿವೃದ್ಧಿಗೆ ಮೋದಿ ಗ್ಯಾರಂಟಿಯೇ ಶಾಶ್ವತ: ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ