ತುಳು ಪಾತೆರ್ಗ-ತುಳು ಒರಿಪಾಗ ಸಂಸ್ಥೆ: ವಾರ್ಷಿಕೋತ್ಸವ ಸಂಭ್ರಮ
Team Udayavani, Mar 22, 2019, 2:42 PM IST
ಮುಂಬಯಿ: ತುಳು ಪಾತೆರ್ಗ ತುಳು ಒರಿಪಾಗ ದುಬಾೖ ಸಂಸ್ಥೆಯ 7ನೇ ವಾರ್ಷಿಕೋತ್ಸವದ ಅಂಗವಾಗಿ ತುಳುನಾಡ ಗೊಬ್ಬುಲೆದ ಲೇಸ್ ಕಾರ್ಯಕ್ರಮವು ದುಬಾೖ ಯ ಝಬೀಲ್ ಪಾರ್ಕ್ ನಲ್ಲಿ ನಡೆಯಿತು.
ಮುಖ್ಯ ಅತಿಥಿಗಳನ್ನು ಶೋಭಿತಾ ಪ್ರೇಮ್ ಜೀತ್ ಅವರು ಬೆಲ್ಲ ನೀರು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ದುಬಾೖಯ ಖ್ಯಾತ ಉದ್ಯಮಿ, ಹಿರಿಯ ಸದಸ್ಯರಾದ ಪ್ರಭಾಕರ ಶೆಟ್ಟಿ ಅವರು ತುಳುನಾಡಿನ ಅಪ್ಪೆ ಭಾಷೆ ತುಳು ಲಿಪಿಯಿಂದ ತುಳು ಪಾರ್ತೆಗ ತುಳು ಒರಿಪಾಗ-ಗೌಜಿ ಗಮ್ಮತ್ತ್- 2019 ಎಂದು ಬರೆಯುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ತುಳುನಾಡಿನ ಕ್ರೀಡೆಗಳಿಗೆ ಚಾಲನೆ ನೀಡಿ, ಮಾತನಾಡಿ, ಅಪ್ಪೆ ಭಾಷೆ ತುಳು ಲಿಪಿಯನ್ನು ಕಲಿತು ಬೆಳೆಸಿ ಉಳಿಸಬೇಕು ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾಗಿ ನಮ ತುಳುವೆರ್ ದುಬೈ ಇದರ ಅಜ್ಮಲ್ ದುಬೈ, ಬಾಲಕೃಷ್ಣ ಸಾಲ್ಯಾನ್ ದುಬೈ, ತುಳುನಾಡ ರಕ್ಷಣಾ ವೇದಿಕೆಯ ದುಬೈಯ ಅಧ್ಯಕ್ಷರಾದ ಅಶೋಕ್ ಬೈಲೂರು, ಬಿಲ್ಲವಾಸ್ ದುಬಾೖಯ ಸತೀಶ್ ಪೂಜಾರಿ, ಕರ್ನಾಟಕ ಸಂಘ ದುಬಾೖಯ ಅಧ್ಯಕ್ಷರಾದ ಆನಂದ್ ಬೈಲೂರು, ಬಿರುವೆರ್ ಕುಡ್ಲ ದುಬಾೖಯ ಸುರೇಶ್ ಪೂಜಾರಿ, ತುಳು ಚಲನಚಿತ್ರ ನಟಿ ನವ್ಯತಾ ರೈ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಶುಭಕೋರಿದರು.
ನಂತರ ತುಳುನಾಡಿನ ಕ್ರೀಡೆಗಳಾದ ಕಬಡ್ಡಿ, ಲಗೋರಿ, ಹಗ್ಗ ಜಗ್ಗಾಟ, ಸೈಕಲ್ ಚಕ್ರ ಓಟ, ರಸ ಪ್ರಶ್ನೆ ಚಿತ್ರದ ಆಟ, ಅಭಿನಯದ ಆಟ ಹೀಗೆ ಹಲವಾರು ಕ್ರೀಡೆಗಳನ್ನು ಕುಡ್ಲ, ಉಡುಪಿ, ಬಾಕೂìರು, ಕಾಸರಗೋಡು ಎಂಬ ನಾಲ್ಕು ತಂಡಗಳಾಗಿ ವಿಂಗಡಿಸಿ ನೊವೆಲ್ ಅಲ್ಮೇಡಾ ಮತ್ತು ಅಮರ್ ನಂತೂರ್ ಅವರು ನಡೆಸಿಕೊಟ್ಟರು. ವಿಶೇಷವಾಗಿ ನಾಲ್ಕು ತಂಡಗಳಿಗೆ ನೀಡಿದ ವಿಷಯಗಳಾದ ಮದುವೆ, ಶಾಲೆ, ಕೃಷಿ, ಜಾತ್ರೆ ವಿಷಯದ ಬಗ್ಗೆ ತಂಡದ ಅಭಿನಯ ಎಲ್ಲರ ಮನ ಮೆಚ್ಚುಗೆಗೆ ಪಾತ್ರವಾಯಿತು.
ಮಹಿಳೆಯರಿಗೆ ಮತ್ತು ಮಕ್ಕಳಿಗೆ ಹಮ್ಮಿಕೊಳ್ಳಲಾದ ಕ್ರೀಡೆಗಳನ್ನು ಸುಪ್ರಿಯಾ ಶೆಟ್ಟಿ ಅವರು ನಿರ್ವಹಿಸಿದರು. 300 ಕ್ಕಿಂತಲೂ ಹಿಚ್ಚಿನ ತುಳುವರು ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು.
ದುಬಾೖಯ ಧಾರ್ಮಿಕ ಮುಂದಾಳು, ಸಮಾಜ ಸೇವಕರಾದ ಆನಂದ್ ಸಾಲ್ಯಾನ್, ಉಷಾ ಆನಂದ್ ಸಾಲ್ಯಾನ್ ದಂಪತಿ ಮತ್ತು ದುಬಾೖಯ ಸಮಾಜ ಸೇವಕರಾದ ನೋವೆಲ್ ಅಲ್ಮೇಡಾವರನ್ನು ಅಪ್ಪೆ ಭಾಷೆ ತುಳುವ ತುಡರ್ ಎಂಬ ಬಿರುದನ್ನು ನೀಡಿ ಸಮ್ಮಾನಿಸಲಾಯಿತು. ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು. ಸಂಜೆ ಚಾಹದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಬಂದು ಸಹಕಾರ ನೀಡಿದ ಎÇÉಾ ಮಹನೀಯರಿಗೆ ನೆನಪಿನ ಕಾಣಿಕೆ, ವಿಜೇತ ತಂಡಗಳಿಗೆ ಪ್ರಶಸ್ತಿ ಪತ್ರ ಮತ್ತು ಪದಕಗಳನ್ನು ನೀಡಿ ಅಭಿನಂದಿಸಲಾಯಿತು.
ತಂಡದ ಸಕ್ರಿಯ ಕಾರ್ಯಕರ್ತರಾದ ಸತೀಶ್ ಉಳ್ಳಾಲ್, ಸತೀಶ್ ಪೂಜಾರಿ, ಕವಿರಾಜ್ ಕುಂದರ್, ಮನೋಜ್ ಕುಲಾಲ್, ಶೋಬಿತಾ ಪ್ರೇಮಜೀತ್, ಆಶ್ವಿನಿ ಸತೀಶ್, ದೀಪಕ್ ಸನಿಲ್, ಪ್ರೇಮಶ್ರೀ ಸುವರ್ಣ ಮಾರ್ನಾಡ್, ಭಾಸ್ಕರ್ ಅಂಚನ್, ಪುರಂದರ ಕುಲಾಲ್, ಪವನ್ ಪೂಜಾರಿ, ನವೀನ್ ಸರಪಾಡಿ, ರವೀಂದ್ರ ಪೂಜಾರಿ, ಸೂರಜ್, ಪ್ರತಿಕ್ ಉಳ್ಳಾಲ್, ಗುರುದತ್ತ್ ಬೆಲ್ಚಡ ಇವರುಗಳು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಲು ಸಹಕರಿಸಿದರು.
ತಂಡದ ಪ್ರಧಾನ ಕಾರ್ಯದರ್ಶಿ ರೀತು ಅಂಚನ್ ಕುಲಶೇಖರ ತಂಡದ ಸಾಧನೆಯನ್ನು ವಿವರಿಸಿ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ
Neha Case: ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿ ಸಿಐಡಿ ವಶಕ್ಕೆ
JP Hegde; ಉತ್ತಮರನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಜನತೆಗಿದೆ: ತೇಜಸ್ವಿನಿ
Udupi: ಅನುಮತಿಯಿಲ್ಲದೆ ಪೋಸ್ಟರ್ ಅಭಿಯಾನ; ಬಿಜೆಪಿ ಯುವ ಮೋರ್ಚಾ ಮುಖಂಡರ ವಿರುದ್ಧ ಕೇಸ್
Gadaga: 28 ರಂದು ಯುವಚೈತನ್ಯ ಕಾರ್ಯಕ್ರಮ: ಜ್ಯೂ. ಕೆ.ಎಚ್. ಪಾಟೀಲ