ತುಳು ಸಂಘ ಬೊರಿವಲಿಯ ವತಿಯಿಂದ ವೃದ್ಧಾಶ್ರಮಕ್ಕೆ ಭೇಟಿ
Team Udayavani, Mar 20, 2019, 4:38 PM IST
ಮುಂಬಯಿ: ತುಳು ಸಂಘ ಬೊರಿವಲಿಯ ಇದರ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ವಸಾಯಿ ಪಶ್ಚಿಮದ ಗ್ರಾಮಾಂತರ ಪ್ರದೇಶದಲ್ಲಿರುವ ಶ್ರದ್ಧಾನಂದ ಮಹಿಳಾ ವೃದ್ದಾಶ್ರಮಕ್ಕೆ ಮಾ. 17ರಂದು ಭೇಟಿ ನೀಡಿದರು. ವೃದ್ಧಾಶ್ರಮದ ಸುಮಾರು 70 ಮಂದಿ ವೃದ್ಧರಿಗೆ ಮಧ್ಯಾಹ್ನದ ಭೋಜನ ಮತ್ತು ಹಣ್ಣು ಹಂಪಲುಗಳನ್ನು ವಿತರಿಸಿ ಅವರೊಡನೆ ಬೆರೆತು ಮಾತುಕತೆ ನಡೆಸಿದರು.
ತುಳು ಸಂಘ ಬೊರಿವಲಿಯ ಅಧ್ಯಕ್ಷ ವಾಸು ಪುತ್ರನ್, ಗೌರವ ಪ್ರಧಾನ ಕಾರ್ಯದರ್ಶಿ ಕೃಷ್ಣರಾಜ್ ಸುವರ್ಣ, ಜತೆ ಕಾರ್ಯದರ್ಶಿ ದಿವಾಕರ ಕರ್ಕೇರ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಸವಿತಾ ಸಿ. ಶೆಟ್ಟಿ ಹಾಗೂ ಸಂಘದ ಧನ ಸಂಗ್ರಹ ಸಮಿತಿಯ ಕಾರ್ಯಾಧ್ಯಕ್ಷ ಪ್ರಕಾಶ್ ಎ. ಶೆಟ್ಟಿ ಅವರ ಮುಂದಾಳತ್ವದಲ್ಲಿ ನಡೆದ ಈ ಜನಸೇವಾ ಕಾರ್ಯಕ್ರಮದಲ್ಲಿ ರಾಜೇಶ್ವರಿ ಜಿ. ಸುವರ್ಣ, ಕುಸುಮಾ ಬಿ. ಶೆಟ್ಟಿ, ವತ್ಸಲಾ ಕೆ. ಪೂಜಾರಿ, ಲಕ್ಷ್ಮೀ ಜಿ. ದೇವಾಡಿಗ, ಕಸ್ತೂರಿ ಶೆಟ್ಟಿ, ನಳಿನಿ ಅಶೋಕ್, ಶೋಭಾ ಪೂಜಾರಿ, ಸುನೀತಾ ಕೆ. ಶೆಟ್ಟಿ, ಸುನಂದಾ ಕೆ. ಶೆಟ್ಟಿ, ಅಶೋಕ್ ನಿಂಜೂರು, ವಿಜಯಕುಮಾರ್ ಮೂಲ್ಕಿ, ಶೇಖರ ಶೆಟ್ಟಿ, ಸುನಂದಾ ಎಸ್. ಶೆಟ್ಟಿ, ಅಶೋಕ್ ಸುವರ್ಣ ಅವರು ಉಪಸ್ಥಿತರಿದ್ದರು.
ಬೊರಿವಲಿ ಜಯರಾಜ್ ನಗರದಿಂದ ಬಸ್ನಲ್ಲಿ ಹೊರಟ ಈ ತಂಡವನ್ನು ಶ್ರದ್ಧಾನಂದ ಮಹಿಳಾ ವೃದ್ಧಾಶ್ರಮದ ಕಾರ್ಯದರ್ಶಿ ಜಗದೀಶ್ ಶೆಟ್ಟಿ ಅವರು ಸ್ವಾಗತಿಸಿ, ಆಶ್ರಮದ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಆಶ್ರಮದಲ್ಲಿದ್ದ ವೃದ್ಧರು ಜೀವನ ವೃತ್ತಾಂತ ಮತ್ತು ಅವರು ಎದುರಿಸಿದ ಅನಿರೀಕ್ಷಿತ ಸಮಸ್ಯೆ ಹಾಗೂ ಪ್ರಸ್ತುತ ಆಶ್ರಮದಲ್ಲಿ ಅವರಿಗೆ ಸಿಗುತ್ತಿರುವ ಆರೈಕೆ, ಸಾಂತ್ವನ ಹಾಗೂ ಪ್ರೀತಿ ಗೌರವದ ಬಗ್ಗೆ ವಿವರಿಸಿದರು. ತುಳು ಸಂಘದ ಮಹಿಳಾ ಕಾರ್ಯಕರ್ತೆಯರು ಬೆರೆತು ಭಜನೆ, ಕುಣಿತದಲ್ಲಿ ಭಾಗವಹಿಸಿ ವೃದ್ಧರಿಗೆ ಸ್ಫೂರ್ತಿ, ನೈತಿಕ ಬೆಂಬಲ ಹಾಗೂ ಆನಂದದ ಕ್ಷಣಗಳನ್ನು ನೀಡಿದರು. ಆಶ್ರಮವಾಸಿಗಳಿಗೆ ಸಂಘದ ಮಹಿಳೆಯರು ಭೋಜನವನ್ನು ಬಡಿಸಿ ಅವರ ಸೇವೆಗೈದರು.
ಸಂಘದ ಅಧ್ಯಕ್ಷ ವಾಸು ಪುತ್ರನ್ ಅವರು ಮಾತನಾಡಿ, ಸಂಘದ ಸಾಧನೆಗಳನ್ನು ವಿವರಿಸಿ, ಇಲ್ಲಿಗೆ ಭೇಟಿ ನೀಡುವುದರೊಂದಿಗೆ ಸಂಘದ ಕಾರ್ಯಕರ್ತರು ಹೊಸ ವಿಚಾರದಿಂದ ಸಮಾಜ ಸೇವೆಗೆ ಮತ್ತಷ್ಟು ಉತ್ತೇಜನ ದೊರೆತಂತಾಯಿತು ಎಂದು ಹೇಳಿದರು. ಈ ಅವಕಾಶ ನೀಡಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Polls: “ಮೋದಿ ಮತ್ತೂಮ್ಮೆ ಪ್ರಧಾನಿಯಾಗಿಸುವ ಪಣ ತೊಡಿ’ : ಬಿ.ವೈ. ರಾಘವೇಂದ್ರ
Lok Sabha Election: “ಅಭಿವೃದ್ಧಿಯೋ – ಅಕ್ರಮವೋ ಯೋಚಿಸಿ ಮತ ನೀಡಿ’: ಗಾಯತ್ರಿ ಸಿದ್ದೇಶ್ವರ್
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ