ಶಿವಾಯ ಫೌಂಡೇಶನ್ ಸಾಯಿಧಾಮ್ ವೃದ್ಧಾಶ್ರಮದಲ್ಲಿ ಯುಗಾದಿ
Team Udayavani, Mar 20, 2018, 3:26 PM IST
ಮುಂಬಯಿ: ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ಅದರ್ಶವಾಗಿಟ್ಟುಕೊಂಡು, ಮಾನ ವೀಯತೆಯ ಸೇವೆಯನ್ನು ಉಸಿರಾಗಿಸಿಕೊಂಡು ಮುಂಬಯಿ ಮಹಾ ನಗರದಲ್ಲಿ ತುಳು ಕನ್ನಡಿಗರ ನೇತೃತ್ವದಲ್ಲಿ ಅಶಕ್ತ ಪರಿವಾರಗಳನ್ನು ಗುರುತಿಸಿ ವೈದ್ಯಕೀಯ ಮತ್ತು ಶೈಕ್ಷಣಿಕ ಸಹಾಯ ಮಾಡುವ ಉದ್ದೇಶದೊಂದಿಗೆ ಹೊಸದಾಗಿ ಜನ್ಮತಳೆದ ಶಿವಾಯ ಫೌಂಡೇಶನ್ ಎಂಬ ಸೇವಾ ಸಂಸ್ಥೆಯು ಮಾ. 18ರಂದು ಯುಗಾದಿ ಹಬ್ಬ ಮತ್ತು ಹಿಂದೂ ಹೊಸ ವರ್ಷವನ್ನು ಮಹಾರಾಷ್ಟ್ರ ದ ಖಡ್ಕಲಿ ಸಾಯಿದಾಮ್ ವೃದ್ಧಾಶ್ರಮದಲ್ಲಿ ವೈಶಿಷ್ಟéಪೂರ್ಣವಾಗಿ ಆಚರಿಸಿತು.
ಕೆಲವು ದಿನಗಳ ಹಿಂದೆ ಸಾಯಿಧಾಮ್ ವೃದ್ಧಾಶ್ರಮಕ್ಕೆ ಭೇಟಿ ನೀಡಿದ ಶಿವಾಯ ಫೌಂಡೇಶನ್ನ ಕಾರ್ಯಕಾರಿ ಸಮಿತಿಯ ಸದಸ್ಯರು ಆಶ್ರಮದ ಮೂಲಭೂತ ಭೇಡಿಕೆಗಳ ವಿವರ ಪಡೆದಿದ್ದರು. ಅನಂತರ ಶಿವಾಯ ಫೌಂಡೇಶನ್ನ ಸದಸ್ಯರು ದುಬಾೖ ಗ್ರಾಟಿಟ್ಯೂಡ್ ಗ್ರೂಪ್ನ ಸಹಯೋಗದೊಂದಿಗೆ ಯುಗಾದಿ ಹಬ್ಬದಂದು ಆಶ್ರಮಕ್ಕೆ ಅಗತ್ಯವಿರುವ ಒಂದು ತಿಂಗಳ ರೇಶನ್ ಮತ್ತು ಅಗತ್ಯವಾಗಿ ಬೇಕಾಗಿದ್ದ ಎರಡು ಸೀಲಿಂಗ್ ಫ್ಯಾನ್ಗಳನ್ನು ನೀಡಿದರು.
ಅನಂತರ ಹಬ್ಬದ ಪ್ರಯುಕ್ತ ಹಣ್ಣು ಹಂಪಲು ಸಿಹಿ-ತಿಂಡಿಗಳನ್ನು ವಿತರಿಸಿ ನೊಂದ ಹಿರಿಯ ಜೀವಗಳೊಂದಿಗೆ ಕೆಲವು ಆಟೋಟಗಳನ್ನು ಆಯೋಜಿಸಿ ಹಬ್ಬದ ದಿನವನ್ನು ಸ್ಮರಣಿಯ ವಾಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಿವಾಯ ಫೌಂಡೇಶನ್ನ ಅಧ್ಯಕ್ಷ ತಾರಾನಾಥ್ ರೈ ಪುತ್ತೂರು ವಹಿಸಿದ್ದರು. ಪ್ರಶಾಂತ್ ಪಂಜ ಇವರು ನಿರ್ವಹಿಸಿದರು.
ಫೌಂಡೇಶನ್ನ ಸದಸ್ಯರಾದ ಅವರಾಲು ಕಂಕಣಗುತ್ತು ಶ್ವೇತಾ ಆರ್. ಶೆಟ್ಟಿ, ಆರೂರು ಪ್ರಭಾಕರ್ ಶೆಟ್ಟಿ, ಡಾ| ಸ್ವರ್ಣಲತಾ ಶೆಟ್ಟಿ, ವರ್ಣಿತ್ ಶೆಟ್ಟಿ, ವಿನೋದ್ ದೇವಾಡಿಗ, ಕಿರಣ್ ಜೈನ್, ದಿವಾಕರ ಶೆಟ್ಟಿ, ರûಾ ಶೆಟ್ಟಿ, ನವೀನ್ ಪೂಜಾರಿ ಮೂಡಬಿದಿರೆ, ದೀಪಾ ಪೂಜಾರಿ, ಸಚಿನ್ ಶೆಟ್ಟಿ, ಸತೀಶ್ ರೈ ಪುತ್ತೂರು, ಸುಷ್ಮಾ ಪೂಜಾರಿ, ಅರ್ಚನಾ ಶೆಟ್ಟಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
B.S.Yediyurappa: ಶಾಸಕ ಪ್ರಭು ಚವ್ಹಾಣ ಹೆಸರು ಹೇಳುತ್ತಿದ್ದಂತೆ ಬಿಎಸ್ವೈ ಗರಂ
Shimoga: ಈಶ್ವರಪ್ಪ ಪರ ಪ್ರಚಾರ ನಡೆಸಿದ್ದ ಮಹಿಳೆ ಮೇಲೆ ಹಲ್ಲೆ- ದೂರು
Bramavara: “ನನ್ನನ್ನು ಕ್ಷಮಿಸಿ’ ಎಂದು ಹೇಳಿ ನಾಪತ್ತೆ