ವಸಾಯಿರೋಡ್ ಜಿಎಸ್ಬಿ ಶಾಂತಿಧಾಮ: ಶ್ರೀ ವೆಂಕಟೇಶ್ವರ ವ್ರತಾಚರಣೆ
Team Udayavani, Jan 1, 2019, 11:54 AM IST
ಮುಂಬಯಿ: ವಸಾಯಿರೋಡ್ ಪಶ್ಚಿಮದ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಶ್ರೀ ವೆಂಕಟೇಶ್ವರ ವ್ರತಾಚರಣೆಯು ಡಿ. 29ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಪ್ರಾತಃಕಾಲದಿಂದ ಶ್ರೀ ವೆಂಕಟೇಶ ದೇವರಿಗೆ ಭೂದೇವಿ, ಶ್ರೀದೇವಿ ಸಹಿತ ಸುಪ್ರಭಾತ ಸೇವೆ, ಚೆಂಡೆ ಸೇವೆ, ವಾದ್ಯ ಸೇವೆ, ಸೀಯಾಳ ಅಭಿಷೇಕ, ಪಂಚಾಮೃತ ಅಭಿಷೇಕ, ಸಹಸ್ರ ತುಳಸಿ ಅರ್ಚನೆ ಹಾಗೂ ಇಪ್ಪತ್ತೂಂದು ಬಗೆಯ ಮಹಾನೈವೇದ್ಯ ಅರ್ಪಿಸಲಾಯಿತು. ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ಥರಾದ ಶ್ರೀಮತಿ ಲಕ್ಷ್ಮೀ ನರಸಿಂಹ ಪ್ರಭು, ನರಸಿಂಹ ಅನಂತ ಪ್ರಭು ಮತ್ತು ಅಭಿಜಿತ್ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ ವೆಂಕಟರಮಣ ಭಜನಾ ಮಂಡಳಿ ಮೂಡಬಿದ್ರೆ ಇದರ ಸಕ್ರಿಯ ಸದಸ್ಯರಾದ ಮನೋಹರ ಮಲ್ಯ, ತುಕಾರಾಮ ಮಲ್ಯ, ಸುಧೀರ್ ಮಲ್ಯ ಮತ್ತು ಅವರ ಮಕ್ಕಳಾದ ರಾಮ್ಪ್ರಸಾದ್ ಮಲ್ಯ, ವೆಂಕಟೇಶ್ ಮಲ್ಯ ಇವರಿಂದ ಭಜನಾ ಸೇವೆಯನ್ನು ಆಯೋಜಿಸಲಾಗಿತ್ತು. ಇವರು ಕೊಂಕಣಿ, ಕನ್ನಡ, ಹಿಂದಿ, ಮರಾಠಿ ಭಜನೆಗಳನ್ನು ಹಾಡಿ ಭಕ್ತಾದಿಗಳನ್ನು ರಂಜಿಸಿದರು.
ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ವಿನಯ ದಳ್ವಿ, ತಬಲಾದಲ್ಲಿ ಶಂತನು ಶುಕ್ಲ, ಪಖ್ವಾಜ್ನಲ್ಲಿ ರಾಘವೇಂದ್ರ ಮಲ್ಯ ಇವರು ಸಹಕರಿಸಿದರು. ಲಕ್ಷ್ಮೀ ನರಸಿಂಹ ಪ್ರಭು ಅವರು ವೆಂಕಟೇಶ್ವರ ವ್ರತದ ಮಹತ್ವ ಮತ್ತು ಇದರ ಆಚರಣೆಯ ಉದ್ದೇಶವನ್ನು ವಿವರಿಸಿದರು. ಕೊನೆಯಲ್ಲಿ ಶ್ರೀ ವೆಂಕಟೇಶ ಮತ್ತು ಪರಿವಾರ ದೇವರಿಗೆ ಮಹಾಮಂಗಳಾರತಿ ನಡೆಯಿತು. ಭಜನಾ ಮಂಡಳಿಯವರಿಂದ ಪ್ರಸಾದ ವಿತರಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸುಮಾರು ಇಪ್ಪತ್ತೂಂದು ದಂಪತಿಗಳಿಗೆ ಪೂಜೆಗೈದು ಭಕ್ತರಿಗೆ ಸಮವಸ್ತ್ರ ವಿತರಿಸಲಾಯಿತು. ಸಮಿತಿಯ ವತಿಯಿಂದ ಬೆಳಗ್ಗೆ ಫಲಾಹಾರ ಮತ್ತು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯನ್ನು ಆಯೋಜಿಸಲಾಗಿತ್ತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು ಪ್ರಸಾದ ಸ್ವೀಕರಿಸಿದರು. ಅಭಿಜಿತ್ ಪ್ರಭು ಅವರ ನೇತೃತ್ವದಲ್ಲಿ ಅಲಂಕರಿಸಲಾಗಿದ್ದ ದೇವರ ಮಂಟಪ ಭಕ್ತರ ಗಮನ ಸೆಳೆಯಿತು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
Box office: ಈ ವಾರ ಬಾಲಿವುಡ್ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?
Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ
Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್
Congress: ಉತ್ಸಾಹದ ಉತ್ತುಂಗದಲ್ಲಿ ಕಾಂಗ್ರೆಸ್; ಕಾರ್ಕಳದಲ್ಲಿ ಜೆಪಿ ಪಡೆ ದಿಟ್ಟ ನಡೆ
Fraud: ರೈಸ್ ಪುಲ್ಲಿಂಗ್ ಹೆಸರಿನಲ್ಲಿ ವಂಚನೆಗೆ ಯತ್ನ; 3 ಸೆರೆ, 69.79 ಲಕ್ಷ ವಶ