ವಸಾಯಿರೋಡ್ ಜಿಎಸ್ಬಿ ಶಾಂತಿಧಾಮ ಶ್ರೀ ವೆಂಕಟೇಶ್ವರ ವ್ರತ
Team Udayavani, Nov 8, 2017, 4:06 PM IST
ಮುಂಬಯಿ: ವಸಾಯಿರೋಡ್ ಗೌಡ ಸಾರಸ್ವತ ಬ್ರಾಹ್ಮಣ ಜಿಎಸ್ಬಿ ಸಮಾಜದವರ ಶಾಂತಿಧಾಮ ಸೇವಾ ಸಮಿತಿಯಲ್ಲಿ ಶ್ರೀ ವೆಂಕಟೇಶ್ವರ ವೃತಾಚರಣೆಯು ನ. 4ರಂದು ನಡೆಯಿತು. ಸಮಿತಿಯ ವಿಶ್ವಸ್ಥರಾದ ಅಭಿಜಿತ್ ನರಸಿಂಹ ಪ್ರಭು ಅವರು ಕಾರ್ತಿಕ ಮಾಸದಲ್ಲಿ 21 ದಿವಸ ವ್ರತವನ್ನು ಆಚರಿಸಿ ಇದರ ಉದ್ಯಾಪನವನ್ನು ಕೈಗೊಂಡರು.
ಧಾರ್ಮಿಕ ಕಾರ್ಯಕ್ರಮವಾಗಿ ಪ್ರಾತಃಕಾಲ ಶ್ರೀ ವೆಂಕಟೇಶ ದೇವರಿಗೆ ಸುಪ್ರಭಾತಂ ಸೇವೆ, ಚೆಂಡೆ ಸೇವೆ, ವಾದ್ಯ ಸೇವೆ, ಸೀಯಾಳ, ಪಂಚಾಮೃತ ಅಭಿಷೇಕ, ಸಹಸ್ರ ತುಳಸಿ ಅರ್ಚನೆ, 21 ಬಗೆಯ ಮಹಾನೈವೇದ್ಯ ಹರಕೆ ಅರ್ಪಿಸಲಾಯಿತು. ವೇದಮೂರ್ತಿ ಗಿರಿಧರ ಭಟ್ ಅವರ ಮಾರ್ಗದರ್ಶನದಲ್ಲಿ ಸಮಿತಿಯ ವಿಶ್ವಸ್ತರಾದ ಲಕ್ಷ್ಮೀ ನರಸಿಂಹ ಪ್ರಭು, ನರಸಿಂಹ ಅನಂತ ಪ್ರಭು, ಅಭಿಜಿತ್ ನರಸಿಂಹ ಪ್ರಭು ಅವರ ನೇತೃತ್ವದಲ್ಲಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಗಾಯಕರಾದ ಧಾರವಾಡದ ಪ್ರಸಾದ್ ಪ್ರಭು ಇವರಿಂದ ಭಜನ ಸೇವೆ ಜರಗಿತು. ಈ ಗಾಯಕರು ಕನ್ನಡ ಮತ್ತು ಕೊಂಕಣಿಯಲ್ಲಿ ಭಜನೆಗಳನ್ನು ಹಾಡಿ ನೆರೆದ ಭಕ್ತಾದಿಗಳನ್ನು ರಂಜಿಸಿದರು. ಹಿಮ್ಮೇಳದಲ್ಲಿ ಹಾರ್ಮೋನಿಯಂನಲ್ಲಿ ಮುಲ್ಕಿಯ ಹೇಮಂತ್ ದಾಮೋದರ ಭಾಗವತ್, ತಬಲಾದಲ್ಲಿ ಮುಲ್ಕಿ ದಾಮೋದರ ಭಾಗವತ್, ಪಖ್ವಾಜ್ನಲ್ಲಿ ರಾಘವೇಂದ್ರ ಮಲ್ಯ ಮತ್ತು ತಾಳದಲ್ಲಿ ಪ್ರಸಾದ್ ಪ್ರಭು ಅವರು ಸಹಕರಿಸಿದರು. ಕಲಾವಿದರನ್ನು ಸಮಿತಿಯ ವತಿಯಿಂದ ಸಮ್ಮಾನಿಸಲಾಯಿತು.
ಲಕ್ಷ್ಮೀ ನರಸಿಂಹ ಪ್ರಭು ವೆಂಕಟೇಶ್ವರ ವ್ರತದ ಮಹತ್ವವನ್ನು ವಿವರಿಸಿದರು. ಕೊನೆಯಲ್ಲಿ ಶ್ರೀ ವೆಂಕಟೇಶ್ವರ ದೇವರಿಗೆ ಮತ್ತು ಇತರ ಪರಿವಾರ ದೇವರಿಗೆ ಆರತಿ ಬೆಳಗಿಸಲಾಯಿತು. ನೆರೆದ ಎಲ್ಲಾ ಭಕ್ತರಿಗೆ ಸಮವಸ್ತ್ರವನ್ನು ವಿತರಿಸಲಾಯಿತು. ಸಮಿತಿಯವರು ಬೆಳಗ್ಗೆ ಫಲಾಹಾರ ಮತ್ತು ಪ್ರಸಾದ ರೂಪದಲ್ಲಿ ಅನ್ನಸಂತರ್ಪಣೆಯ ವ್ಯವಸ್ಥೆಯನ್ನು ಆಯೋಜಿಸಿದ್ದರು. ಜಿಎಸ್ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಭಿಜಿತ್ ಪ್ರಭು ಅವರ ನೇತೃತ್ವದಲ್ಲಿ ಅಲಂಕೃತಗೊಂಡ ದೇವರ ಮಂಟಪ ಎಲ್ಲರನ್ನು ಆಕರ್ಷಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು