ವಿಶ್ವನಾಥ ಶೆಟ್ಟಿ ಅವರಿಗೆ ರಾಜ್ಯಪಾಲರಿಂದ ಗೌರವ
Team Udayavani, Aug 29, 2018, 12:38 PM IST
ಪುಣೆ: ಪುಣೆಯ ಬಹು ಭಾಷಾ ಸಾಹಿತಿ, ಕವಿ ಪಾಂಗಾಳ ವಿಶ್ವ ನಾಥ ಶೆಟ್ಟಿ ಅವರು ಆ. 15 ರಂದು 72 ನೇ ಸ್ವಾತಂತ್ರೊÂàತ್ಸವದಂದು ಮಹಾರಾಷ್ಟ್ರದ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ಅವರಿಂದ ಕನ್ನಡ ಭಾಷೆಯ ಸಾಹಿತಿಯ ನಿಟ್ಟಿನಲ್ಲಿ ಗೌರವವನ್ನು ಸ್ವೀಕರಿಸಿದರು.
ಭಾರತೀಯ ವಿಚಾರ ಸಾಧನಾ ಪುಣೆ ಇವರ ಪ್ರಕಾಶನದಲ್ಲಿ ವಿಶ್ವನಾಥ ದಿನಕರ ನರವಣೆ ಅವರು ಸಂಪಾದಿಸಿದ 16 ಭಾಷೆಗಳ ಶಬ್ದಕೋಶದ ಮೂರನೇ ಸಂಸ್ಕರಣದ ಪ್ರಕಾಶನವು ಆ. 15 ರಂದು ಪುಣೆ ರಾಜಭವನದಲ್ಲಿ ನೆರವೇರಿತು. ಮಹಾರಾಷ್ಟ್ರದ ಘನವೆತ್ತ ರಾಜ್ಯಪಾಲರಾದ ವಿದ್ಯಾಸಾಗರ ರಾವ್ ರವರ ಅಮೃತ ಹಸ್ತದಿಂದ ಶಬ್ದಕೋಶದ ಬಿಡುಗಡೆ ನೆರವೇರಿತು.
ಈ ಸಂದರ್ಭ ವಿವಿಧ ಭಾಷೆಗಳ ಉತ್ತಮ ಸಾಹಿತಿ, ಕವಿ, ಲೇಖಕರನ್ನು ಆಮಂತ್ರಿಸಿದ್ದು ರಾಜ್ಯಪಾಲರಿಂದ ಗೌರವ ನೀಡಲಾಯಿತು. ಪುಣೆಯ ಹಿರಿಯ ಸಾಹಿತಿ, ಕವಿ, ಕಥೆಗಾರ ಪಾಂಗಾಳ ವಿಶ್ವನಾಥ ಶೆಟ್ಟಿ ಅವರನ್ನು ಕನ್ನಡ ಭಾಷೆಯ ಪ್ರತಿನಿಧಿಯಾಗಿ ಆಮಂತ್ರಿಸಿದ್ದು ಪುಷ್ಪಗುತ್ಛ ಹಾಗೂ ಗ್ರಂಥವೊಂದನ್ನು ನೀಡಿ ಗೌರವಿಸಿದರು.
ವಿಶ್ವನಾಥ ಶೆಟ್ಟಿ ಅವರು ಕನ್ನಡ, ತುಳು, ಮರಾಠಿ ಭಾಷೆಗಳಲ್ಲಿ ಕಥೆ, ಕವನ, ನಾಟಕ, ವೈಚಾರಿಕ ಲೇಖನಗಳನ್ನೂ ಬರೆದಿರುವುದಲ್ಲದೆ ಇತ್ತೀಚಿಗೆ ಸಂತ ಜ್ಞಾನೇಶ್ವರ ಮಹಾರಾಜರ ಜೀವನ ಚರಿತ್ರೆಯನ್ನು ಕನ್ನಡದಲ್ಲಿ ಬರೆದಿರುತ್ತಾರೆ. ಯಕ್ಷಗಾನ ಕಲಾವಿದರೂ ಆಗಿರುವ ಅವರು ಶ್ರೀ ಅಯ್ಯಪ್ಪ ಯಕ್ಷಗಾನ ಮಂಡಳಿಯ ಅಧ್ಯಕ್ಷರಾಗಿಯೂ ಕಲಾ ಸೇವೆ ಸಲ್ಲಿಸುತ್ತಿ¨ªಾರೆ. ಮರಾಠಿ ಭಾಷೆಯಲ್ಲಿ ಪಹಾಟ… ಎಂಬ ಕವನಸಂಕಲವನ್ನೂ ಪ್ರಕಟಿಸಿದ್ದಾರೆ.
ವರದಿ: ಕಿರಣ್ ಬಿ. ರೈ ಕರ್ನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು
MUST WATCH
ಹೊಸ ಸೇರ್ಪಡೆ
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ
Ban in Singapore; ಎವರೆಸ್ಟ್ ಮಸಾಲಾದಲ್ಲಿ ಕ್ರಿಮಿನಾಶಕ ಅಂಶ?