VPM ಕನ್ನಡ ಶಾಲಾ ಹಳೆ ವಿದ್ಯಾರ್ಥಿ ಸಂಘ:KKL ಟ್ರೋಫಿ ಕಬಡ್ಡಿ
Team Udayavani, Feb 2, 2018, 12:13 PM IST
ಮುಂಬಯಿ: ವಿಪಿಎಂ ಕನ್ನಡ ಶಾಲಾ ಹಳೆ ವಿದ್ಯಾರ್ಥಿಗಳ ಸಂಘ ಮುಲುಂಡ್ ಮುಂಬಯಿ ಇವರ ಆಶ್ರಯದಲ್ಲಿ ಕನ್ನಡ ಕಬಡ್ಡಿ ಲೀಗ್ ಕೆಕೆಎಲ್ ಟ್ರೋಫಿ-2018 ಪಂದ್ಯಾಟವು ಮುಲುಂಡ್ನ ಕವಿರತ್ನ ಕಾಳಿದಾಸ ಹಾಲ್ ಸಮೀಪದ ಒಳಾಂಗಣ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು.
ತುಳು-ಕನ್ನಡಿಗರಿಗಾಗಿ ಆಯೋಜಿಸಲಾಗಿದ್ದ ಈ ಪಂದ್ಯಾಟದಲ್ಲಿ ಸುಮಾರು 15 ಕನ್ನಡಪರ ತಂಡಗಳು ಭಾಗವಹಿಸಿದ್ದು, ಸೆಮಿಫೈನಲ್ನಲ್ಲಿ ಸುರೇಶ್ ಶೆಟ್ಟಿ ಯೆಯ್ನಾಡಿ ಅವರ ನೇತೃತ್ವದ ಮುಲುಂಡ್ ಫ್ರೆಂಡ್ಸ್ ನ ಎ ತಂಡವು ಕ್ರೀಡಾ ಪೋಷಕ ಗಿರೀಶ್ ಶೆಟ್ಟಿ ತೆಳ್ಳಾರ್ ನೇತೃತ್ವದ ಬಂಟರ ಸಂಘ ಮೀರಾ-ಭಾಯಂದರ್ ಪ್ರಾದೇಶಿಕ ಸಮಿತಿಯ ಬಿ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿತ್ತು.ಬಿ ವಿಭಾಗದ ಸೆಮಿಫೈನಲ್ನಲ್ಲಿ ಮುಲುಂಡ್ ಬಂಟ್ಸ್ ತಂಡವನ್ನು ಮುಲುಂಡ್ ಫ್ರೆಂಡ್ಸ್ ಬಿ ತಂಡವು ಪರಾಭವಗೊಳಿಸಿ ಫೈನಲ್ಗೆ ಲಗ್ಗೆ ಇಟ್ಟಿತು. ಫೈನಲ್ನಲ್ಲಿ ಮುಲುಂಡ್ ಫ್ರೆಂಡ್ಸ್ ಎ ಮತ್ತು ಮುಲುಂಡ್ ಫ್ರೆಂಡ್ಸ್ ಬಿ ತಂಡಗಳು ಸೆಣಸಾಡಿ ಕೊನೆಯಲ್ಲಿ ಮುಲುಂಡ್ ಫ್ರೆಂಡ್ಸ್ ಎ ತಂಡವು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು 1 ಲಕ್ಷ ರೂ. ನಗದು ಮತ್ತು ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಮುಲುಂಡ್ ಫ್ರೆಂಡ್ಸ್ ಬಿ ತಂಡವು 50 ಸಾವಿರ ರೂ. ನಗದು ಮತ್ತು ಟ್ರೋಫಿಯೊಂದಿಗೆ ದ್ವಿತೀಯ ಪ್ರಶಸ್ತಿಗೆ ಭಾಜನವಾಯಿತು.
ಉತ್ತಮ ಹಿಡಿತಗಾರನಾಗಿ ಆನಂದ್, ಉತ್ತಮ ದಾಳಿಗಾರನಾಗಿ ಆಕಾಶ್ ಶೆಟ್ಟಿ, ಉತ್ತಮ ಸರ್ವ ಸಾಚಿಯಾಗಿ ರತನ್ ಗೌಡ ಈ ಮೂವರು ಮುಲುಂಡ್ ಫ್ರೆಂಡ್ಸ್ ತಂಡದ ಸದಸ್ಯರು ಪಾರಿತೋಷಕವನ್ನು ಪಡೆದುಕೊಂಡರು. ಈ ಸಂದರ್ಭದಲ್ಲಿ ಆಯೋಜಕ ಸುರೇಶ್ ಶೆಟ್ಟಿ ಮರವೂರು, ಕಬಡ್ಡಿ ಆಟಗಾರ ಜಯ ಶೆಟ್ಟಿ, ಪ್ರೊ| ಕಬಡ್ಡಿ ತರಬೇತುದಾರ ಪ್ರತಾಪ್ ಶೆಟ್ಟಿ, ಮುಲುಂಡ್ ಫ್ರೆಂಡ್ಸ್ ಅಧ್ಯಕ್ಷ ಸುರೇಶ್ ಶೆಟ್ಟಿ ಯೆಯ್ನಾಡಿ, ಸುಂದರ ಶೆಟ್ಟಿ ವಾಮದಪದವು, ವೇಣುಗೋಪಾಲ್ ಶೆಟ್ಟಿ ಇರಾ, ಪ್ರದೀಪ್ ಶೆಟ್ಟಿ, ಅಣ್ಣಪ್ಪ ಕಾಂಚನ್, ಹರೀಶ್ ಶೆಟ್ಟಿ, ಸುಭಾಶ್ ಆಳ್ವ, ಮಧುಕರ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ