ಸ್ತ್ರೀಯಾಗಿ ಜನಿಸುವುದೇ ಆಶೀರ್ವಾದವಾಗಿದೆ: ಮೇಡಂ ಗ್ರೇಸ್‌ ಪಿಂಟೊ


Team Udayavani, Mar 8, 2020, 6:42 PM IST

mumbai-tdy-1

ಮುಂಬಯಿ, ಮಾ. 7: ಅಂತಾ ರಾಷ್ಟ್ರೀಯ ಮಹಿಳಾ ದಿನಾಚರಣೆಯು ವಿಶ್ವದ ಗಮನ ಸೆಳೆಯುತ್ತದೆ. ಇದೇ ಸ್ತ್ರೀಶಕ್ತಿಯ ಸರ್ವೋತ್ಕೃಷ್ಟತೆ ಎಂದರೂ ತಪ್ಪಾಗಲಾರದು. ಆದ್ದರಿಂದ ಸ್ತ್ರೀಯಾಗಿ ಜನಿಸುವುದೇ ಭಾಗ್ಯವಾಗಿದೆ ಎಂದು ರಾಯಾನ್‌ ಇಂಟರ್‌ನ್ಯಾಷಶನ್‌ ಶೈಕ್ಷಣಿಕ ಸಮೂಹದ ವ್ಯವಸ್ಥಾಪಕ ನಿರ್ದೇಶಕಿ ಮೇಡಂ ಡಾ| ಗ್ರೇಸ್‌ ಪಿಂಟೊ ಅವರು ಅಭಿಪ್ರಾಯಿಸಿದರು.

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಾ. 7ರಂದು ರಾಯನ್‌ ಇಂಟರ್‌ನ್ಯಾಷನಲ್‌ ಶೈಕ್ಷಣಿಕ ಸಮೂಹದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಮಾಜಕ್ಕೆ ಮಹಿಳೆಯರ ಶ್ಲಾಘನೀಯ ಕೊಡುಗೆ ಮನವರಿಸಿ ಆಚರಿಸುವ ಸುದಿನ ಇದಾಗಿದೆ.

ಮಹಿಳೆಯರು ದೌರ್ಜನ್ಯ ಮತ್ತು ತಾರತಮ್ಯವನ್ನು ಎದುರಿಸುತ್ತಿರುವ ಲಿಂಗ ಸಮಾನ ಜಗತ್ತನ್ನು ಸೃಷ್ಟಿಸಲು ಏಕತೆ ಮತ್ತು ಸಮಾನತೆಯನ್ನು ಪ್ರಚಾರ ಮಾಡುವುದರತ್ತ ಗಮನ ಹರಿಸಿ ಯಶಸ್ಸನ್ನು ಸಾಧಿಸಿದ್ದಾರೆ. ಆ ಹಾದಿಯಲ್ಲಿ ಅಪಾರ ಪ್ರಮಾಣದ ಒತ್ತಡ ಮತ್ತು ಅಡೆತಡೆಗಳನ್ನು ಎದುರಿಸುತ್ತಿದ್ದರೂ, ಮಹಿಳೆಯರು ಗಾಜಿನ ಸೀಲಿಂಗ್‌ನ್ನು ಮುರಿದು ವಿಜಯಶಾಲಿಗಳಾಗಿದ್ದಾರೆ. ಎಲ್ಲೆಡೆ ಮಹಿಳಾ ಉದ್ಯಮಿಗಳು ಅಭೂತ ಪೂರ್ವವಾಗಿ ವ್ಯವಹಾರ, ಸ್ವಉದ್ಯಮ ಗಳನ್ನು ಪ್ರಾರಂಭಿಸಿ ಸದೃಢ ರಾಗುತ್ತಿದ್ದಾರೆ ಎಂಬುವುದು ಗಮನ ಸೆಳೆಯುವ ಸಂಗತಿಯಾಗಿದೆ.

ಫೆಡರೇಶನ್‌ ಆಫ್‌ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರೀ ಇದರ ಮಹಿಳಾ ವಿಭಾಗವು ಸ್ತ್ರೀಯರಿಗೆ ತಮ್ಮ ಪ್ರತಿಭೆ, ಕೌಶಲ, ಅನುಭವಗಳು ಮತ್ತು ಶಕ್ತಿಗಳನ್ನು ಕ್ಷೇತ್ರಗಳಾದ್ಯಂತ ಪ್ರದರ್ಶಿಸಲು ಪ್ರೋತ್ಸಾಹಿಸುತ್ತದೆ ಮತ್ತು ಸುಗಮಗೊಳಿಸುತ್ತಿದೆ. ಸುಮಾರು 6800ಕ್ಕೂ ಅಧಿಕ ಮಹಿಳಾ ಉದ್ಯಮಿಗಳು ಮತ್ತು ವೃತ್ತಿಪರರನ್ನು ಈ ಸಂಸ್ಥೆ ಪ್ರತಿನಿಧಿಸುತ್ತಿದೆ. ನಾವು ಉದ್ಯಮಶೀಲತೆಯಲ್ಲಿ ಮಾತ್ರವಲ್ಲದೆ ಜೀವನದ ಎಲ್ಲಾ ಕ್ಷೇತ್ರಗಳಲ್ಲೂ ಧನಾತ್ಮಕ ಪ್ರವೃತ್ತಿಯನ್ನು ಕಾಣುತ್ತೇವೆ. ಆದಾಗ್ಯೂ ಮಹಿಳಾ ಸಬಲೀಕರಣ ಮತ್ತು ಅವರ ಉನ್ನತಿಗಾಗಿ ಇನ್ನೂ ದೊಡ್ಡ ಅವಕಾಶ ಸದ್ಯ ಮಹಿಳೆಯರಿಗಿದೆ ಎಂದರು.

ಎಲೀನರ್‌ ರೂಸ್ವೆಲ್ಟ್ ಒಬ್ಬ ಮಹಿಳೆ ಹೊಂದಿರುವ ಪ್ರಚಂಡ ಸಾಮರ್ಥ್ಯದ ಬಗ್ಗೆ ಸುಂದರವಾಗಿ ವರ್ಣಿಸಿದ ಅವರು, ಮಹಿಳೆ ಒಂದು ಚಹಾ ಚೀಲದಂತೆ. ನಾವು ಅವಳನ್ನು ಬಿಸಿನೀರಿನಲ್ಲಿ ಹಾಕುವವರೆಗೂ ಅವಳು ಎಷ್ಟು ಬಲಶಾಲಿ ಎಂದು ಹೇಳಲು ಸಾಧ್ಯವಿಲ್ಲ ಅಂದಿದ್ದಾರೆ. ವಾಸ್ತವವಾಗಿ, ಮಹಿಳೆಯರು ಜೀವನ ದಲ್ಲಿ ದೊಡ್ಡದನ್ನು ಸಾಧಿಸಲು ಸಮರ್ಥರಾಗಿದ್ದಾರೆ. ಏಕೆಂದರೆ ಅವರು ಅಂತಃಪ್ರಜ್ಞೆ, ಧೈರ್ಯ, ನಿರಂತರತೆ ಮತ್ತು ಆಲಿಸುವ ಕೌಶಲಗಳಂತಹ ವಿಶಿಷ್ಟ ಗುಣ ಲಕ್ಷಣಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ. ಮಹಿಳೆಯರು ನಿರಂತರವಾಗಿ ಅನೇಕ ಪಾತ್ರಗಳನ್ನು ಪೂರೈಸುತ್ತಿದ್ದು, ನಂಬಲಾಗದ ಬಹು ಕಾರ್ಯ ಮತ್ತು ನೆಟ್‌ವರ್ಕಿಂಗ್‌ ಸಾಮರ್ಥ್ಯ ಹೊಂದಿದ್ದಾರೆ. ಅವರು ಜನರೊಂದಿಗೆ ಹೆಚ್ಚು ಸುಲಭವಾಗಿ ಸಂಪರ್ಕ ಸಾಧಿಸಬಹುದು ಮತ್ತು ಹೆಚ್ಚು ಅನುಭೂತಿ ಹೊಂದಬಹುದು.

ಇಂತಹ ಉಡುಗೊರೆಗಳಿಂದ ಸ್ವತಃ ತಮ್ಮ ಕರಗಳಲ್ಲಿ ಮತ್ತು ಶಿಕ್ಷಣದಿಂದ ಅವರಿಗೆ ಹಲವಾರು ಹೊಸ ಹಾದಿಗಳನ್ನು ತೆರೆಯಲಾಗಿದೆ. ಮಹಿಳೆಯರು ಸಾಧಿಸಿದರೆ ಖಂಡಿತವಾಗಿಯೂ ಸಮಾಜದಲ್ಲಿನ ಸಾಮಾಜಿಕ, ಆರ್ಥಿಕ ವಾತಾವರಣದ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಮಹಿಳೆ ತನ್ನ ಕುಟುಂಬದಲ್ಲಿ ಮಾತ್ರವಲ್ಲದೆ ತನ್ನ ಸಮುದಾಯ ಮತ್ತು ಸಮಾಜದಲ್ಲೂ ಬೃಹತ್‌ ಬದಲಾವಣೆ ತರಬಹುದು.

ಆದ್ದರಿಂದ ಭೂಮಂಡಲದಲ್ಲಿ ಮಹಿಳೆಯಾಗಿ ಜನಿಸುವುದು ಆಶೀರ್ವಾದ ಎಂದು ನೆನಪಿಡುವುದೇ ಬಹುದೊಡ್ಡ ಅಂಶ. ದೊಡ್ಡ ಮತ್ತು ಪ್ರಬಲವಾದ ಕೆಲಸಗಳನ್ನು ಮಾಡಲು ದೇವರು ಮಹಿಳೆಯರಿಗೆ ಶಕ್ತಿ ಮತ್ತು ಘನತೆ, ಬುದ್ಧಿವಂತಿಕೆ ಮತ್ತುಜ್ಞಾನವನ್ನು ದಯಪಾಲಿಸಿದ್ದಾನೆ. ಸ್ತ್ರೀತ್ವದ ನಿಜವಾದ ಸಾರ ಮತ್ತು ಅವಳ ಸಕಾರಾತ್ಮಕ ಪ್ರಭಾವವು ಮುಂದಿನ ಪೀಳಿಗೆಗೆ ಪರಿಣಾಮ ಬೀರುತ್ತದೆ. ನಮ್ಮ ಸಮಾಜದ ಪ್ರತಿಯೊಂದು ವಿಭಾಗಗಳಲ್ಲೂ ನಾವು ಸಕಾರಾತ್ಮಕ ಬದಲಾವಣೆಯನ್ನು ತರಲು ನಮಗೆ ಎಲ್ಲಾ ಸಾಮರ್ಥ್ಯಗಳಿವೆ.

ಇದನ್ನು ಸಮರ್ಥ ನಾಯಕತ್ವದಲ್ಲಿ ಮುನ್ನಡೆಸುವ ಸ್ಥೈರ್ಯವನ್ನು ಮಹಿಳೆ ಹೊಂದಬೇಕು. ಪ್ರತಿಯೊಬ್ಬ ಮಹಿಳೆಯೂ ಇದನ್ನು ಪಾಲಿಸಬೇಕಾದ ಅಂಶ ಮನದಟ್ಟು ಮಾಡಬೇಕು ಎಂದು ನುಡಿದು, ಸಮಸ್ತ ಮಹಿಳೆಯರಿಗೂ ಮಹಿಳಾ ದಿನಾಚರಣೆಯ ಶುಭಾಶಯಗಳನ್ನು ಕೋರಿದರು.

ಟಾಪ್ ನ್ಯೂಸ್

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

banMysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Mysuru: ಮೋದಿ ಕುರಿತು ಹಾಡು ಬರೆದ ಯೂಟ್ಯೂಬರ್‌ಗೆ ಹಲ್ಲೆ

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್

Thirthahalli; ಬಿಜೆಪಿಯಿಂದ ಶ್ರೀಮಂತರ ಓಲೈಕೆ ; ಕಿಮ್ಮ‌ನೆ ರತ್ನಾಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Congresss ಚೊಂಬು ಜಾಹೀರಾತು ವಿರುದ್ಧ ಬಿಜೆಪಿ ಚಾರ್ಜ್‌ಶೀಟ್‌

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Lok Sabha Elections ಕೆಲಸ ಮಾಡದಿದ್ದರೆ ಮನೆಗೆ: ಸುರ್ಜೇವಾಲ

Shobha, Bharathi Shetty  ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Shobha, Bharathi Shetty ಹೊರತು ಬಿಎಸ್‌ವೈ ಬೇರೆ ಯಾರನ್ನೂ ಬೆಳೆಸುತ್ತಿಲ್ಲ: ಈಶ್ವರಪ್ಪ

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

Lok Sabha Elections; ಮುಗಿದ ವೀಣಾ ಮುನಿಸು; ಕಾಂಗ್ರೆಸ್‌ ಈಗ “ಸಂಯುಕ್ತ’

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

High Court ಎಚ್‌ಡಿಕೆಗೆ ಮಹಿಳಾ ಆಯೋಗ ನೀಡಿದ್ದ ನೋಟಿಸ್‌ಗೆ ಹೈಕೋರ್ಟ್‌ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.