ಪುಣೆ ಗುರುದೇವ  ಸೇವಾ ಬಳಗದಿಂದ ವಿಶ್ವ ಮಹಿಳಾ ದಿನಾಚರಣೆ


Team Udayavani, Mar 11, 2019, 1:57 AM IST

2556.jpg

ಪುಣೆ: ಶ್ರೀ ಗುರುದೇವ ಸೇವಾ ಬಳಗ ಮತ್ತು ಶ್ರೀ ವಜ್ರಮಾತ ಮಹಿಳಾ ವಿಕಾಸ ಕೇಂದ್ರ ಪುಣೆ ಇದರ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಮಾ. 8 ರಂದು  ಸ್ವಾರ್‌ಗೆàಟ್‌ನಲ್ಲಿರುವ ಮಾಹಾರಾಷ್ಟ್ರ ಚೇಂಬರ್‌ ಆಫ್‌ ಕಾಮರ್ಸ್‌ನ ಲಕಾಕಿ ಹಾಲ್‌ನಲ್ಲಿ ಆಚರಿಸಲಾಯಿತು.

ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಉಪಾಧ್ಯಕ್ಷೆ ಜಯಲಕ್ಷ್ಮೀಪಿ. ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭೆಯಲ್ಲಿ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರದ ಪ್ರಮುಖರಾದ ಶೋಭಾ ಯು. ಶೆಟ್ಟಿ, ಸುಧಾ ಎನ್‌. ಶೆಟ್ಟಿ,  ಕೋಶಾಧಿಕಾರಿ ವೀಣಾ ಪಿ. ಶೆಟ್ಟಿ, ಕಾರ್ಯದರ್ಶಿ ವೀಣಾ ಡಿ. ಶೆಟ್ಟಿ ಹಾಗೂ ಸುಮನಾ ಎಸ್‌. ಹೆಗ್ಡೆ ಅವರು ಉಪಸ್ಥಿತರಿದ್ದರು. ಪುಣೆ ಶ್ರೀ ಗುರುದೇವ ಸೇವಾ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಮತ್ತು ಮಹಿಳಾ ವಿಭಾಗದ ಪ್ರಮುಖರು, ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೀಣಾ ಪಿ. ಶೆಟ್ಟಿ,  ಸುಮನಾ ಎಸ್‌. ಹೆಗ್ಡೆ ಪ್ರಾರ್ಥನೆಗೈದರು.

ಶೋಭಾ ಯು. ಶೆಟ್ಟಿ ಮಾತನಾಡಿ,  ಹೆಣ್ಣು ಎಂದರೆ ಭಗವಂತನ ಸುಂದರ ರಚನೆಯಾಗಿದೆ.  ಅಲ್ಲದೆ ಹೆಣ್ಣು ಜನ ಮಾನಸದ,   ಸಂಸಾರದ ಕಣ್ಣು ಕೂಡ ಹೌದು. ಹೆಣ್ಣಿಗೆ ತಾಯಿತನದ  ಅದ್ಭುತ ಪದವಿ ಕೂಡಾ ಸಿಕ್ಕಿದೆ. ತಾಯಿ
ಯಂತೆಯೇ  ಸ್ತ್ರೀಯಾದವಳು ಅನೇಕ ರೂಪದಲ್ಲಿ ಸಂಸಾರ ವನ್ನು ಸಲಹುವ ಒಂದು ವಿಶಿಷ್ಟ ಗೌರವವನ್ನು ಪಡೆಯುತ್ತಾಳೆ. ಜಗತ್ತಿನ ಎಲ್ಲ ಕ್ಷೇತ್ರದಲ್ಲೂ ಸ್ತ್ರೀಗೆ ಮೊದಲ ಸ್ಥಾನವಿದೆ. ನಮ್ಮಲ್ಲಿ  ಮನೋಧರ್ಮ, ಛಲವಿದ್ದರೆ  ಸಮಾಜದಲ್ಲಿ ಮುಂದೆ  ಹೋಗಬಹುದು.  ಹೆದರಿಕೆ, ಅಂಜಿಕೆ, ನಾಚಿಕೆಯನ್ನು  ಮನಸ್ಸಿನಲ್ಲಿ ಇಟ್ಟುಕೊಳ್ಳಬಾರದು. ಸ್ತ್ರೀಗೆ ನಡವಳಿಕೆಯೇ ಬಹುಮುಖ್ಯ. ವಿದ್ಯಾವಂತರಾಗಿ ಸ್ವಂತಿಕೆಯಿಂದ ಸ್ವಾವಲಂಬಿ ಗಳಾಗಿ, ಹಿರಿಯರ, ಮಾರ್ಗದರ್ಶನದಲ್ಲಿ ಸಮಾಜದಲ್ಲಿ ಬದುಕಿ ತೊರುವಂತಹ ಮನಸ್ಸು ನಮ್ಮಲಿರಬೇಕು  ಹಾಗೂ ಬೇರೆಯವರಿಗೆ ಪ್ರೇರಣೆಯಾಗಬೇಕು ಎಂದರು.

ಸುಮನಾ ಎಸ್‌. ಹೆಗ್ಡೆ ಅವರು ಮಾತನಾಡಿ, ಜಗತ್ತಿನ ಯಾವುದೇ ಜೀವಿಗೆ ತಾಯಿಯಿಲ್ಲದೆ ಜನ್ಮ ಸಾಧ್ಯವಿಲ್ಲ. ತಾಯಿಯೇ ಪೂಜನೀಯಳು. ನಾರಿ ಎÇÉಾ ವಿಧದಲ್ಲೂ ಆಕರ್ಷಣೆಯ ಮತ್ತು ವಾತ್ಸಲ್ಯ ಪ್ರೇಮಿಯಾಗಿರುತ್ತಾಳೆ. ಹೆಣ್ಣಿಗೆ ಕೆಲವು ಕಡೆ ಸಾತಂತ್ರÂವಿದೆ, ಕೆಲವು ಕಡೆ ಹಿಂಸೆಯು ಇದೆ. ಈ ಎರಡನ್ನು  ಸಮಾನಾಂತರವಾಗಿ ಸ್ವೀಕರಿಸಿ ಸಮಾಜದ ದೇವತೆಯಾಗಿ ಮೆರೆಯುತ್ತಾಳೆ ಎಂದು ನುಡಿದರು.

ವೀಣಾ ಪಿ. ಶೆಟ್ಟಿ ಅವರು ಮಾತನಾಡಿ, ಜವಾಬ್ದಾರಿ ಯುತವಾಗಿ ಜಾಗರೂಕಳಾಗಿ ಸಮಾಜವನ್ನು ಮುನ್ನಡೆಸುವ ಹೆಣ್ಣು ಸಮಾಜದ ಕಣ್ಣು ಎಂದರೆ ತಪ್ಪಾಗಲಾರದು. ಸಮಾಜವನ್ನು, ಸಂಸ್ಕೃತಿಯನ್ನು ಅರಿತು ಮಾನಸಿಕವಾಗಿ ಧೈರ್ಯವನ್ನು ತಂದುಕೊಂಡು  ಸಮೃದ್ಧಳಾಗಿ ಕಾರ್ಯ ನಿರ್ವಹಿಸುವ ಸ್ತ್ರೀಗೆ  ಸಿಕ್ಕಿದ ಗೌರವವೇ ಶ್ರೇಷ್ಠ ಎಂದು ಅರಿತು ಬಾಳುತ್ತಾಳೆ. ಇತಿಮಿತಿಯಲ್ಲಿ ವೈಜ್ಞಾನಿಕವಾಗಿ ಮುಂದೆ ಹೋಗಿ ಕಾರ್ಯ ಮಾಡುವ ಕ್ಷಮತೆಯನ್ನು  ಹೆಣ್ಣು ಇಂದು ಪಡೆದಿರುತ್ತಾಳೆ ಎಂದರು.

ಈ ಸಂದರ್ಭದಲ್ಲಿ ಪುಣೆ ಬಳಗದ ಅಧ್ಯಕ್ಷರಾದ ಸದಾನಂದ ಕೆ. ಶೆಟ್ಟಿ ಅವರು ಮಾತನಾಡಿ,  ಪ್ರಕೃತಿಯ ನಿಯಮದಂತೆ ಸ್ತ್ರೀ ಎಂದರೆ ಉತ್ಪತ್ತಿ. ಸ್ತ್ರೀಯಿಂದಲೇ ಅರಂಭ ಎಂಬ ವೇದ ವಾಕ್ಯವಿದೆ. ಪ್ರಾಥಮಿಕ ನಡವಳಿಕೆಯನ್ನು ತಿಳಿಸಿಕೊಡುವ ತಾಯಿ ದೇವರಿಗೆ ಸಮಾನ. ಸ್ತ್ರೀಯರನ್ನು ಗೌರವಿಸುವುದು ನಮ್ಮ ಕರ್ತವ್ಯ. ಸ್ತ್ರಿಯನ್ನು ನಾವು ತಾಯಿಯಾಗಿ, ಸಹೋದರಿಯಾಗಿ, ಮಡದಿಯಾಗಿ, ಮಗಳಾಗಿ ಗೌರವಿಸುತ್ತೇವೆಯೋ ಅಂತಹ ಭಯ ಭಕ್ತಿ ಸ್ತ್ರೀಯರಲ್ಲೂ ಇರಬೇಕು. ಭಯಭಕ್ತಿ ಗೌರವ ಇದ್ದರೆ ಸಮಾಜದಲ್ಲಿ ಅನಾಚಾರಗಳು ನಡೆಯಲು ಸಾಧ್ಯವಿಲ್ಲ ಎಂದು ನುಡಿದು ಶುಭ ಹಾರೈಸಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಂದ ವಿಶ್ವ ಮಹಿಳಾ ದಿನಾಚರಣೆಯ ಗೀತೆಯೊಂದಿಗೆ ನೃತ್ಯ ಕಾರ್ಯಕ್ರಮ, ಶ್ವೇತಾ ಎಚ್‌. ಮೂಡಬಿದ್ರಿ ಇವರಿಂದ ಸ್ತ್ರೀಯ ಬಗ್ಗೆ ಬರೆದ ಭಾವಗೀತೆ ಹಾಡಿದರು. ಈ ಕಾರ್ಯಕ್ರಮದಲ್ಲಿ ಪುಣೆ ಶ್ರೀ  ಗುರುದೇವ ಸೇವಾ ಬಳಗದ ಪ್ರಮುಖರಾದ ಉಷಾಕುಮಾರ್‌ ಶೆಟ್ಟಿ, ನಾರಾಯಣ ಶೆಟ್ಟಿ, ಕಾರ್ಯದರ್ಶಿ ರೋಹಿತ್‌ ಶೆಟ್ಟಿ ನಗ್ರಿಗುತ್ತು,ಕೊಶಾಧಿಕಾರಿ ರಂಜಿತ್‌ ಶೆಟ್ಟಿ, ದಾಮೋದರ ಬಂಗೇರ, ಸುಧಾಕರ್‌ ಶೆಟ್ಟಿ, ಉಮೇಶ್‌ ಶೆಟ್ಟಿ ದಿನೇಶ್‌ ಶೆಟ್ಟಿ ಬಜಗೋಳಿ, ವಿಟ್ಟಲ್‌ ಶೆಟ್ಟಿ, ದಿನೇಶ್‌ ಶೆಟ್ಟಿ  ನಿಟ್ಟೆ, ಸುರೇಶ್‌ ಶೆಟ್ಟಿ, ನಾಗರಾಜ್‌ ಶೆಟ್ಟಿ ಹಾಗೂ ಉಮಾ ಶೆಟ್ಟಿ, ಉಷಾ ಯು. ಶೆಟ್ಟಿ, ನಯನಾ  ಶೆಟ್ಟಿ, ಸರೋಜಿನಿ ಬಂಗೇರ, ಶಾರದಾ ಹೆಗ್ಡೆ, ಸ್ನೇಹಾ ಅರ್‌. ಶೆಟ್ಟಿ, ಸುಜಾತಾ  ಶೆಟ್ಟಿ, ಲಲಿತಾ ಪೂಜಾರಿ, ವನಿತಾ ಕರ್ಕೇರ, ಸುಶೀಲಾ ಮೂಲ್ಯ  ಮತ್ತಿತರರು ಉಪಸ್ಥಿತರಿದ್ದರು.  ವೀಣಾ ಪಿ.  ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವೀಣಾ ಡಿ. ಶೆಟ್ಟಿ ವಂದಿಸಿದರು.

ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ ಪುಣೆ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ

Desi Swara: ಶಿಶಿರದ ಸಂಗೀತ ಯಾನ: “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್‌’

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

ಎದುರಾರೈ ನಿನಗೆ ಸಮನಾರೈ ?: ಸಾಮ್ಯತೆ ಹಾಗೂ ವ್ಯತ್ಯಾಸದೊಳಗಿನ ಅರಿವು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.