ಸಾಹಿತಿ, ಪತ್ರಕರ್ತ ಎಂ. ಎಸ್. ರಾವ್ ಅವರ ಕೃತಿಗಳ ಬಿಡುಗಡೆ
Team Udayavani, Aug 26, 2018, 2:43 PM IST
ಮುಂಬಯಿ: ಅಹ್ಮ ದಾಬಾದ್ನಲ್ಲಿ ತುಳು-ಕನ್ನಡದ ಕಾಯಕದಲ್ಲಿ ತೊಡಗಿಸಿ ಕೊಂಡಿ ರುವ ಹಿರಿಯ ಲೇಖಕ, ಸಾಹಿತಿ, ಕಾದಂಬರಿಕಾರ, ಪತ್ರಕರ್ತ, ಗುಜರಾತ್ ವಿದ್ಯಾಪೀಠ ವಿಶ್ವವಿದ್ಯಾಲ ಯದ ಗೌರವ ಪ್ರಾಧ್ಯಾಪಕ ಎಂ. ಎಸ್. ರಾವ್ ಅವರ ಹದಿಮೂರನೇ ಕೃತಿ “ಗುಜರಾತ್ ಚುನಾವಣೆ-ಲೈವ್ ಕಾಮೆಂಟರಿ’ಯನ್ನು ಗುಜರಾತ್ನ ಯುವೋದ್ಯಮಿ, ತುಳು ಸಂಘ ಬರೋಡದ ಅಧ್ಯಕ್ಷ ಶಶಿಧರ ಬಿ. ಶೆಟ್ಟಿ ಹಾಗೂ ಹದಿನಾಲ್ಕನೆ ಕೃತಿ `Live Commentary Of Gujarat Election” ಇಂಗ್ಲೀಷ್ ಕೃತಿಯನ್ನು ಜನಪ್ರಿಯ ಸಮಾಜ ಸೇವಕಿ, ಶಶಿ ಕೇಟರಿಂಗ್ ಸರ್ವಿಸ್ನ ನಿರ್ದೇಶಕಿ ಪ್ರಮೀಳಾ ಎಸ್. ಶೆಟ್ಟಿ ಅನಾವರಣ ಗೊಳಿಸಿ ಶುಭಹಾರೈಸಿದರು.
ಇತ್ತೀಚೆಗೆ ಗುಜರಾತ್ನ ಬರೋಡಾ ಅಲ್ಕಾಪುರಾ ಇಲ್ಲಿನ ತುಳು ಸಂಘ ಬರೋಡ ಇದರ “ತುಳುಚಾವಡಿ’ ಸಭಾಂಗಣದಲ್ಲಿ ಆಯೋಜಿಸಿದ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ವಾಸು ಪಿ. ಪೂಜಾರಿ, ಸತೀಶ್ ಶೆಟ್ಟಿ, ಡಾ| ಶರ್ಮಿಳಾ ಜೈನ್ ಮತ್ತು ಬರೋಡದ ಗಣ್ಯರು ಉಪಸ್ಥಿತರಿದ್ದು, ಏಕಕಾಲಕ್ಕೆ ಅವಳಿ ಕೃತಿಗಳನ್ನು ಬಿಡುಗಡೆಗೊಳಿಸಿದರು.
“ಸಾಹಿತ್ಯ ನಿರ್ಮಾಣದಿಂದ ನಮ್ಮ ಇತಿಹಾಸಗಳು ಪ್ರಕಾಶಮಾನವಾಗಿ ಉಳಿಯುವುದು. ಕೃತಿಗಳು ಭವಿಷ್ಯತ್ತಿನ ಪೀಳಿಗೆಗೆ ವರದಾನ ಆಗಲಿವೆ. ಯಾವುದೇ ಕೃತಿಗಳು ಆಗುಹೋಗುಗಳ ಸಂದೇಶ ಸಾರುವ ಶಕ್ತಿಯಾಗಿವೆ. ಆದುದರಿಂದ ನಾವು ಬರಹಗಾರರಿಗೆ ಪ್ರೋತ್ಸಾಹಿಸಿ ಮುಂದಿನ ಪೀಳಿಗೆಗೆ ಇದನ್ನು ವಿಸ್ತರಿಸಬೇಕು.
ಗುಜರಾತಿನಲ್ಲಿ ಮೊದಲ ಕನ್ನಡ ಕಾದಂಬರಿಯನ್ನು ಬರೆದು, ಮುದ್ರಿಸಿ, ಬಿಡುಗಡೆ ಮಾಡಿ ದಾಖಲೆ ಸೃಷ್ಟಿಸಿದ ಎಂ. ಎಸ್. ರಾವ್ ಈವರೆಗೆ 14 ಕೃತಿ ಹಾಗೂ 3000 ಕ್ಕೂ ಮಿಕ್ಕಿದ ಲೇಖನಗಳನ್ನು ಬರೆದ ಗುಜರಾತಿನ ಏಕೈಕ ಲೇಖಕ, ನರೇಂದ್ರ ಮೋದಿ ಅವರ ಬಗ್ಗೆ ಐದು ಪುಸ್ತಕ ಬರೆದ ಸಾರ್ಥಕತೆ ರಾವ್ ಅವರು ಮೋದಿ ಮುಖ್ಯಮಂತ್ರಿ ಆದ ಹೊಸದರಲ್ಲಿ ಪ್ರಥಮ ಕನ್ನಡ ಸಂದರ್ಶನ ನೀಡಿದ್ದು, ಪ್ರಧಾನ ಮಂತ್ರಿ ಬಳಿಕವೂ ಮೊದಲ ಸಂದರ್ಶನ ನೀಡಿದ್ದರು. ಎಂ. ಎಸ್. ರಾವ್ ಸಾಧನೆಗಳ ಪಟ್ಟಿ ದೊಡ್ಡದಿದೆ. ಅದು ಇನ್ನೂ ಬೆಳೆಯುತ್ತಾ ಹೋಗಲಿ. ಅವರ ಪ್ರತಿಭೆಯ ಲಾಭ ಕನ್ನಡಿಗರಿಗೆ ನಿರಂತರವಾಗಿ ಲಭಿಸಲಿ ಎಂದು ಆಶಿಸುತ್ತೇನೆ’ ಎಂದು ಶಶಿಧರ್ ಶೆಟ್ಟಿ ಅವರು ನುಡಿದರು.
ಕೃತಿಕರ್ತ ಎಂ. ಎಸ್. ರಾವ್ ತಮ್ಮ ಸಾಹಿತ್ಯಕ ಜೀವನವನ್ನು ಮೆಲುಕು ಹಾಕಿ ನನ್ನ ಎಲ್ಲಾ ಕೃತಿಗಳ ರಚನೆಗೆ ಬೆನ್ನೆಲುಬುವಾಗಿ ನಿಂತ ಸಾಹಿತ್ಯಾಭಿಮಾನಿಗಳಿಗೆ ಮತ್ತು ನನ್ನ ಸರಸ್ವತಿ ಸೇವಾ ಯಶಸ್ವಿಗೆ ಪ್ರೇರಣೆ ನೀಡಿದವರನ್ನು ಸ್ಮರಿಸಿದರು. ಹಾಗೂ ಸಾಹಿತ್ಯ ಲೋಕದ ಅನನ್ಯ ಸೇವೆಗೈಯಲು ಪ್ರೇರಕರಾದ ಎಲ್ಲರನ್ನೂ ಅಭಿವಂದಿಸಿ ತನ್ನ ಕಕೃತಿಗಳ ಬಗ್ಗೆ ಬಣ್ಣಿಸಿದರು.
ದಯಾನಂದ್ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು. ಸರಿತಾ ಪೂಜಾರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
Desi Swara: ಕನ್ನಡ ಕಲಾವಿದನ ಅಪ್ರತಿಮ ಕಲೆ :ಕುಂಚದಲ್ಲಿ ಅರಳಿದ ಅದ್ಭುತ ಚಿತ್ತಾರ
Desi Swara-ಜಗದೋದ್ಧಾರಕ ವಸುದೇವ ಸುತ…..: ಅವತಾರ ಪುರುಷನ ಜನ್ಮ ವೃತ್ತಾಂತ
Desi Swara: ಶಿಶಿರದ ಸಂಗೀತ ಯಾನ- “ಗಮಭನ’ ಸಂಸ್ಥೆಯ “ಸ್ವರ ಆನಂದ್’
ವಿಂಶತಿಯ ವಿಜೃಂಭಣೆಯಲ್ಲಿ ಯುಎಇ ಬ್ರಾಹ್ಮಣ ಸಮಾಜ: 20ನೇ ವರ್ಷದಲ್ಲಿ 20 ಕಾರ್ಯಕ್ರಮಗಳ ದಾಖಲೆ
MUST WATCH
ಹೊಸ ಸೇರ್ಪಡೆ
Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ
ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್
ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
Exam; ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ-2ಕ್ಕೆ 1.49 ಲಕ್ಷ ವಿದ್ಯಾರ್ಥಿಗಳ ನೋಂದಣಿ