ಲಂಕೆಯನ್ನು ಮಗುಚಿದ ಸ್ಪಿನ್‌-ಧವನ್‌


Team Udayavani, Aug 21, 2017, 12:43 PM IST

21-ASPORTS-3.jpg

ಡಂಬುಲ: ಟೆಸ್ಟ್‌ ಸರಣಿಯ ವೈಭವವನ್ನು ಏಕದಿನದಲ್ಲೂ ಮುಂದುವರಿಸಿದ ಟೀಮ್‌ ಇಂಡಿಯಾ ಡಂಬುದಲ್ಲಿ ರವಿವಾರ ನಡೆದ ಮೊದಲ ಪಂದ್ಯವನ್ನು 9 ವಿಕೆಟ್‌ಗಳಿಂದ ಭರ್ಜರಿಯಾಗಿ ಗೆದ್ದು ವಿಜೃಂಭಿಸಿದೆ. ಘಾತಕ ಸ್ಪಿನ್‌ ದಾಳಿ ಮತ್ತು ಆರಂಭಕಾರ ಶಿಖರ್‌ ಧವನ್‌ ಅವರ 11ನೇ ಶತಕ ಟೀಮ್‌ ಇಂಡಿಯಾದ ಗೆಲುವಿನ ಪ್ರಮುಖ ಆಕರ್ಷಣೆಯಾಗಿತ್ತು. ಈ ಪ್ರವಾಸದಲ್ಲಿ ಸತತ 4ನೇ ಸಲ ಟಾಸ್‌ ಗೆದ್ದ ವಿರಾಟ್‌ ಕೊಹ್ಲಿ ಮೊದಲು ಬೌಲಿಂಗನ್ನೇ ಆಯ್ದುಕೊಂಡರು. ಆರಂಭದಲ್ಲಿ ಲಂಕಾ ಬ್ಯಾಟಿಂಗ್‌ ಮೇಲುಗೈ ಸಾಧಿಸಿದಂತೆ ಕಂಡುಬಂದರೂ ಕೊನೆಯ 9 ವಿಕೆಟ್‌ಗಳನ್ನು ಪಟಪಟನೆ ಉರುಳಿಸಿಕೊಂಡು 43.2 ಓವರ್‌ಗಳಲ್ಲಿ 216 ರನ್ನಿಗೆ ಆಲೌಟ್‌ ಆಯಿತು. ಜವಾಬಿತ್ತ ಭಾರತ ಕೇವಲ 28.5 ಓವರ್‌ಗಳಲ್ಲಿ 1 ವಿಕೆಟಿಗೆ 220 ರನ್‌ ಬಾರಿಸಿ ಸುಲಭ ಜಯ ಸಾಧಿಸಿತು.

ಧವನ್‌ ಶತಕ ಪರಾಕ್ರಮ
ಟೆಸ್ಟ್‌ ಸರಣಿಯಲ್ಲಿ ಬದಲಿ ಆಟಗಾರನಾಗಿ ಬಂದು 2 ಶತಕ ಬಾರಿಸಿ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದ ಎಡಗೈ ಆರಂಭಕಾರ ಶಿಖರ್‌ ಧವನ್‌ ಏಕದಿನದಲ್ಲೂ ಸೆಂಚುರಿ ಸಂಭ್ರಮದಲ್ಲಿ ಮಿಂದೆದ್ದರು. ಕೇವಲ 90 ಎಸೆತ ಎದುರಿಸಿದ ಅವರು 132 ರನ್‌ ಗಳಿಸಿ ಅಜೇಯರಾಗಿ ಉಳಿದರಲ್ಲದೇ ಮುರಿಯದ ಎರಡನೇ ವಿಕೆಟಿಗೆ ನಾಯಕ ವಿರಾಟ್‌ ಕೊಹ್ಲಿ ಜತೆ 197 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. 20 ಆಕರ್ಷಕ ಬೌಂಡರಿ ಬಾರಿಸಿದ ಅವರು 3 ಸಿಕ್ಸರ್‌ ಸಿಡಿಸಿದ್ದರು. ಧವನ್‌ಗೆ ಉತ್ತಮ ಬೆಂಬಲ ನೀಡಿದ ಕೊಹ್ಲಿ 70 ಎಸೆತಗಳಿಂದ 10 ಬೌಂಡರಿ ಮತ್ತು 1 ಸಿಕ್ಸರ್‌ ನೆರವಿನಿಂದ 82 ರನ್‌ ಗಳಿಸಿ ಅಜೇಯರಾಗಿ ಉಳಿದರು. ಈ ಭರ್ಜರಿ ಗೆಲುವಿನಿಂದ  ಭಾರತ ಐದು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಅಜೇಯ ಶತಕ ಸಿಡಿಸಿದ ಧವನ್‌ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.

ಸ್ಪಿನ್‌ ಸುಳಿಗೆ ಸಿಲುಕಿದ ಲಂಕಾ
ಬ್ಯಾಟಿಂಗಿಗೆ ಇಳಿಸಲ್ಪಟ್ಟ ಶ್ರೀಲಂಕಾಕ್ಕೆ ನಿರೋಷನ್‌ ಡಿಕ್ವೆಲ್ಲ-ದನುಷ್ಕ ಗುಣತಿಲಕ ಉತ್ತಮ ಆರಂಭ ಒದಗಿಸಿದ್ದರು. ಭುವನೇಶ್ವರ್‌ ಕುಮಾರ್‌-ಹಾರ್ದಿಕ್‌ ಪಾಂಡ್ಯ ಅವರ ಬೌಲಿಂಗ್‌ ದಾಳಿಯನ್ನು ಇವರಿಬ್ಬರೂ ಯಾವುದೇ ತಾಪತ್ರಯವಿಲ್ಲದೆ ನಿಭಾಯಿಸಿದ್ದರು. ಮೊದಲ 10 ಓವರ್‌ಗಳಲ್ಲಿ 55 ರನ್‌ ಒಟ್ಟುಗೂಡಿತು. ಭರ್ತಿ 14 ಓವರ್‌ಗಳ ಬ್ಯಾಟಿಂಗ್‌ ನಡೆಸಿದ ಈ ಜೋಡಿ 74 ರನ್‌ ಪೇರಿಸಿತು. 139 ರನ್‌ ತನಕ ಲಂಕಾ ಒಂದೇ ವಿಕೆಟ್‌ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಆತಿಥೇಯರ ಮೊತ್ತ 270-280ರ ತನಕ ಬೆಳೆಯುವ ಎಲ್ಲ ಸೂಚನೆ ಇತ್ತು. ಟೆಸ್ಟ್‌ ಸರಣಿಯ ಹೀನಾಯ ಪ್ರದರ್ಶನವನ್ನು ಮರೆಸುವ ನಿಟ್ಟಿನಲ್ಲಿ ಆತಿಥೇಯರ ಹೋರಾಟ ಸಾಗಲಿದೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಭಾರತ ಯಾವಾಗ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿತೋ, ಲಂಕಾ ವಿಲವಿಲ ಒದ್ದಾಡತೊಡಗಿತು. 77 ರನ್‌ ಅಂತರದಲ್ಲಿ 9 ವಿಕೆಟ್‌ ಉರುಳಿಸಿಕೊಂಡು ನಾಟಕೀಯ ಕುಸಿತವೊಂದಕ್ಕೆ ಸಾಕ್ಷಿಯಾಯಿತು. ಕೇವಲ 216 ರನ್ನಿಗೆ ಶ್ರೀಲಂಕಾ ಇನ್ನಿಂಗ್ಸ್‌ ಮುಗಿದಿತ್ತು!

ಎಡಗೈ ಸ್ಪಿನ್ನರ್‌ ಅಕ್ಷರ್‌ ಪಟೇಲ್‌ 34ಕ್ಕೆ 3 ವಿಕೆಟ್‌ ಹಾರಿಸಿ ಹೆಚ್ಚಿನ ಯಶಸ್ಸು ಸಾಧಿಸಿದರು. ಇದು ಅವರ ಜೀವನಶ್ರೇಷ್ಠ ಬೌಲಿಂಗ್‌ ಆಗಿದೆ. ಪಟೇಲ್‌ ಕಳೆದ ಅಕ್ಟೋಬರ್‌ ಬಳಿಕ ಮೊದಲ ಏಕದಿನ ಪಂದ್ಯವಾಡಲು ಇಳಿದಿದ್ದರು. ಪಾರ್ಟ್‌ಟೈಮ್‌ ಬೌಲರ್‌ ಕೇದಾರ್‌ ಜಾಧವ್‌ 26ಕ್ಕೆ 2, ಲೆಗ್‌ಸ್ಪಿನ್ನರ್‌ ಯಜುವೇಂದ್ರ ಚಾಹಲ್‌ 60 ರನ್ನಿಗೆ 2 ವಿಕೆಟ್‌ ಕಿತ್ತರು. ಬುಮ್ರಾ ಸಾಧನೆ 22ಕ್ಕೆ 2 ವಿಕೆಟ್‌. ಗುಣತಿಲಕ ಅವರನ್ನು ರಾಹುಲ್‌ಗೆ ಕ್ಯಾಚ್‌ ಕೊಡಿಸುವ ಮೂಲಕ ಚಾಹಲ್‌ ಭಾರತಕ್ಕೆ ಮೊದಲ ಯಶಸ್ಸು ತಂದಿತ್ತರು. ಭುವಿ-ಪಾಂಡ್ಯ ಜೋಡಿಗೆ ವಿಕೆಟ್‌ ಲಭಿಸಲಿಲ್ಲ.

ಶ್ರೀಲಂಕಾ ಸರದಿಯಲ್ಲಿ ಮೊದಲ 5 ಮಂದಿ ಎರಡಂಕೆಯ ಮೊತ್ತ ದಾಖಲಿಸಿದರೆ, ಉಳಿದ 6 ಮಂದಿ ಒಂದಂಕೆಯ ಗಡಿ ದಾಟಲಿಲ್ಲ. 64 ರನ್‌ ಮಾಡಿದ ಆರಂಭಕಾರ ಡಿಕ್ವೆಲ್ಲ ಅವರದು ಸರ್ವಾಧಿಕ ಗಳಿಕೆ. ಇದು ಅವರ 5ನೇ ಅರ್ಧ ಶತಕ. 74 ಎಸೆತ ಎದುರಿಸಿದ ಡಿಕ್ವೆಲ್ಲ 8 ಬೌಂಡರಿ ಬಾರಿಸಿದರು. ಇವರ ಜತೆಗಾರ ಗುಣತಿಲಕ 44 ಎಸೆತಗಳಿಂದ 35 ರನ್‌ (4 ಬೌಂಡರಿ) ಮಾಡಿದರೆ, ಮೆಂಡಿಸ್‌ ಮತ್ತು ಮ್ಯಾಥ್ಯೂಸ್‌ ತಲಾ 36 ರನ್‌ ಹೊಡೆದರು. ಇವರಲ್ಲಿ ಮ್ಯಾಥ್ಯೂಸ್‌ ಅವರದು ಅಜೇಯ ಬ್ಯಾಟಿಂಗ್‌. ಆದರೆ ಇವರಿಗೆ ಇನ್ನೊಂದು ತುದಿಯಿಂದ ಯಾರೂ ಬೆಂಬಲ ನೀಡಲಿಲ್ಲ. ಕಪುಗೆಡರ (1), ಪೆರೆರ (0) ಬೇಗನೇ ಪೆವಿಲಿಯನ್‌ ಸೇರಿದ್ದು ಲಂಕೆಗೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು.

ಸ್ಕೋರ್‌ಪಟ್ಟಿ
ಶ್ರೀಲಂಕಾ
ನಿರೋಷನ್‌ ಡಿಕ್ವೆಲ್ಲ    ಎಲ್‌ಬಿಡಬ್ಲ್ಯು ಜಾಧವ್‌    64
ದನುಷ್ಕ ಗುಣತಿಲಕ    ಸಿ ರಾಹುಲ್‌ ಬಿ ಚಾಹಲ್‌    35
ಕುಸಲ್‌ ಮೆಂಡಿಸ್‌    ಬಿ ಪಟೇಲ್‌    36
ಉಪುಲ್‌ ತರಂಗ    ಸಿ ಧವನ್‌ ಬಿ ಜಾಧವ್‌    13
ಏಂಜೆಲೊ ಮ್ಯಾಥ್ಯೂಸ್‌    ಔಟಾಗದೆ    36
ಚಾಮರ ಕಪುಗೆಡರ    ರನೌಟ್‌    1
ವನಿಂದು ಹಸರಂಗ    ಸಿ ಜಾಧವ್‌ ಬಿ ಪಟೇಲ್‌    2
ತಿಸರ ಪೆರೆರ    ಬಿ ಬುಮ್ರಾ    0
ಲಕ್ಷಣ ಸಂದಕನ್‌    ಎಲ್‌ಬಿಡಬ್ಲ್ಯು ಪಟೇಲ್‌    5
ಲಸಿತ ಮಾಲಿಂಗ    ಸ್ಟಂಪ್ಡ್ ಧೋನಿ ಬಿ ಚಾಹಲ್‌    8
ವಿಶ್ವ ಫೆರ್ನಾಂಡೊ    ಬಿ ಬುಮ್ರಾ    0

ಇತರ        16
ಒಟ್ಟು  (43.2 ಓವರ್‌ಗಳಲ್ಲಿ ಆಲೌಟ್‌)    216
ವಿಕೆಟ್‌ ಪತನ: 1-74, 2-139, 3-150, 4-166, 5-169, 6-176, 7-178, 8-187, 9-209.

ಬೌಲಿಂಗ್‌:
ಭುವನೇಶ್ವರ್‌ ಕುಮಾರ್‌        6-0-33-0
ಹಾರ್ದಿಕ್‌ ಪಾಂಡ್ಯ        6-0-35-0
ಜಸ್‌ಪ್ರೀತ್‌ ಬುಮ್ರಾ        6.2-0-22-2
ಯಜುವೇಂದ್ರ ಚಾಹಲ್‌        10-0-60-2
ಕೇದಾರ್‌ ಜಾಧವ್‌        5-0-26-2
ಅಕ್ಷರ್‌ ಪಟೇಲ್‌        10-0-34-3

ಭಾರತ
ರೋಹಿತ್‌ ಶರ್ಮ    ರನೌಟ್‌    4
ಶಿಖರ್‌ ಧವನ್‌    ಔಟಾಗದೆ    132
ವಿರಾಟ್‌ ಕೊಹ್ಲಿ    ಔಟಾಗದೆ    82

ಇತರ        2
ಒಟ್ಟು  (28.5 ಓವರ್‌ಗಳಲ್ಲಿ 1 ವಿಕೆಟಿಗೆ)    220
ವಿಕೆಟ್‌ ಪತನ: 1-23

ಬೌಲಿಂಗ್‌:
ಲಸಿತ ಮಾಲಿಂಗ        8-0-52-0
ವಿಶ್ವ ಫೆರ್ನಾಂಡೊ        6-0-43-0
ಏಂಜೆಲೊ ಮ್ಯಾಥ್ಯೂಸ್‌        2-0-9-0
ತಿಸರ ಪೆರೆರ        2-0-18-0
ಲಕ್ಷಣ ಸಂದಕನ್‌        6-0-63-0
ವನಿಂದು ಹಸರಂಗ        4.5-0-36-0

ಪಂದ್ಯಶ್ರೇಷ್ಠ: ಶಿಖರ್‌ ಧವನ್‌ 

ದ್ವಿತೀಯ ಏಕದಿನ  ಆ. 24: ಪಲ್ಲೆಕಿಲೆ

 

ಟಾಪ್ ನ್ಯೂಸ್

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!

ಸೂಪರ್ ಸ್ಟಾರ್‌ ಮೋಹನ್‌ ಲಾಲ್‌ ಭೇಟಿಯಾದ ರಿಷಬ್‌: ʼಕಾಂತಾರʼ ಕ್ಕೆ ಸ್ವಾಗತ ಎಂದ ನೆಟ್ಟಿಗರು.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Cricket; ಪಾಕ್ ವಿರುದ್ಧದ ಟೆಸ್ಟ್ ಸರಣಿ ಆಡಲು ರೋಹಿತ್ ಇಂಗಿತ; ಕ್ಯಾಪ್ಟನ್ ಹೇಳಿದ್ದೇನು?

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

Devon Conway ruled out of IPL 2024

CSK; ಐಪಿಎಲ್ ನಿಂದ ಹೊರಬಿದ್ದ ಕಾನ್ವೆ; ಚೆನ್ನೈ ಪಾಳಯಕ್ಕೆ ಇಂಗ್ಲೆಂಡ್ ವೇಗಿ ಸೇರ್ಪಡೆ

IPL 2024; Suresh Raina made an important statement about Dhoni’s IPL future

IPL 2024; ಧೋನಿ ಐಪಿಎಲ್ ಭವಿಷ್ಯದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಸುರೇಶ್ ರೈನಾ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-wewewe

Congress;ಪ್ರತಾಪ್‌ಚಂದ್ರ ಶೆಟ್ಟಿ-ಜೆ.ಪಿ.ಹೆಗ್ಡೆ ಭೇಟಿ: ಕಾರ್ಯತಂತ್ರದ ಸಮಾಲೋಚನೆ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

1-qwqeqewq

Kunigal:ನವಮಿಯಂದು ಪಾನಕ ಕುಡಿದ 60 ಮಂದಿ ಅಸ್ವಸ್ಥ, ಮೂವರು ಗಂಭೀರ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.