ನುಚ್ಚಿಮಣಿಯಂಡ, ಪುಚ್ಚಿಮಂಡಕ್ಕೆ ಮುನ್ನಡೆ
Team Udayavani, Apr 25, 2018, 6:00 AM IST
ಮಡಿಕೇರಿ: ಕೊಡವ ಕುಟುಂಬಗಳ ನಡುವೆ ಇಲ್ಲಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 22ನೇ ವರ್ಷದ ಕೊಡವ ಕುಟುಂಬಗಳ ಕುಲ್ಲೇಟಿರ ಹಾಕಿ ಹಬ್ಬದಲ್ಲಿ ನುಚ್ಚಿಮಣಿಯಂಡ, ಪುಚ್ಚಿಮಂಡ, ಪಾಡೆಯಂಡ, ಪಟ್ರಪಂಡ, ಕುಂಡೊಳಂಡ, ಪಾಲೆ
ಯಂಡ, ಮದ್ರಿರ, ನಾಗಂಡ, ಪೊರ್ಕೊವಂಡ, ಮುರುವಂಡ, ಕೀತಿಯಂಡ, ತಂಡಗಳು ಮುಂದಿನ ಹಂತಕ್ಕೆ ಪ್ರವೇಶ
ಪಡೆದುಕೊಂಡಿವೆ.
ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಪಾಲೆಯಂಡ ತಂಡವು ಮೂವೇರ ತಂಡವನ್ನು 3-0 ಗೋಲುಗಳಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದು ಕೊಂಡಿತು. ಪಾಲೇಯಂಡ ಪರ ಸುರಿ ಸುಬ್ಬಯ್ಯ, ರಾಬಿನ್ ದೇವಯ್ಯ ಒಂದೊಂದು ಗೋಲು
ಬಾರಿಸಿ ತಂಡದ ಗೆಲುವಿಗೆ ಕಾರಣರಾದರು. ನಂತರದ ಪಂದ್ಯದಲ್ಲಿ ಮದ್ರೀರ ತಂಡವು ಬಡ್ಡೀರ ತಂಡವನ್ನು 1-0 ಗೋಲುಗಳಿಂದ
ಮಣಿಸಿತು. ಮದ್ರೀರ ಪರ ಹರೀನ್ ಅಯ್ಯಪ್ಪ ಗೆಲುವಿನ ಗೋಲು ಗಳಿಸಿದರು. ಮೂರನೇ ಪಂದ್ಯವು ಪೋಕೂìವಂಡ ಮತ್ತು ಚಂದೂರ ತಂಡಗಳ ನಡುವೆ ನಡೆದು ಚಂದೂರ ತಂಡವು 3-0 ಗೋಲಿನಿಂದ ವಿಜಯ ಸಾಧಿಸಿತು. ಚಂದುರ ತಂಡದ ಪರ ಪ್ರಧಾನ್ ಪೂವಣ್ಣ ಹ್ಯಾಟ್ರಿಕ್ ಗೋಲು ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.
ಮುರುವಂಡ ತಂಡವು ಮುಂಡಚಾಡೀರ ತಂಡವನ್ನು 5-0 ಗೋಲಿನಿಂದ ಮಣಿಸಿತು. ಏಕಪಕ್ಷೀಯವಾಗಿದ್ದ ಈ ಪಂದ್ಯದಲ್ಲಿ ಮುರುವಂಡ ತಂಡದ ಅಣ್ಣಯ್ಯ 3, ತನುಶ್ 1, ಶಶಾಂಕ್ 1 ಗೋಲು ಗಳಿಸಿ ಭರ್ಜರಿ ಗೆಲುವಿಗೆ ಕಾರಣರಾದರು. ಕೀತಿಯಂಡ ತಂಡವು ಮಂದೆಯಂಡ ತಂಡದ ವಿರುದ್ಧ 1-0 ಗೋಲಿನಿಂದ ಜಯ ಸಾಧಿಸಿತು. ಕೀತಿಯಂಡ ಪರ ದೇವಯ್ಯ 1 ಗೋಲು ಹೊಡೆದರು. ನಾಗಂಡ ತಂಡವು ಚೇಮೆರ ತಂಡವನ್ನು 3-0 ಗೋಲಿನಿಂದ ಸೋಲಿಸಿತು. ನಾಗಂಡ ಪರ ರೋಶನ್ 2, ದಿವಿನ್ 1 ಗೋಲು ಬಾರಿಸಿದರು.
ಇನ್ನೊಂದು ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ನುಚ್ಚಿಮಣಿಯಂಡ ತಂಡ ಕಂಬೇಯಂಡ ತಂಡಗಳ ನಡುವೆ ನಡೆದು ನಿಗದಿತ ಅವಧಿಯಲ್ಲಿ ಯಾವುದೇ ಗೋಲು ಬಾರದ ಕಾರಣ ಟೈಬ್ರೇಕರ್ ವ್ಯವಸ್ಥೆಯನ್ನು ಅಳವಡಿಸಲಾಯಿತು. ಇದರಲ್ಲಿ ನುಚ್ಚಿಮಣಿಯಂಡ ತಂಡವು 5-4 ಗೋಲಿನಿಂದ ಜಯ ಸಾಧಿಸಿತು. ನಂತರದ ಪಂದ್ಯದಲ್ಲಿ ಪುಚ್ಚಿಮಂಡ ತಂಡವು ಚಂಗೇಟಿರ ತಂಡವನ್ನು 1-0
ಗೋಲಿನಿಂದ ಮಣಿಸಿತು. ಕುತೂಹಲದಿಂದ ಕೂಡಿದ್ದ ಈ ಕದನದಲ್ಲಿ ಸುಬ್ಬಯ್ಯ ನವರು ಗೋಲು ಹೊಡೆಯುವುದರ ಮೂಲಕ ಪುಚ್ಚಿಮಂಡಕ್ಕೆ ಜಯ ತಂದುಕೊಟ್ಟರು. ನಂತರದ ಪಂದ್ಯದಲ್ಲಿ ಪಾಡೇಯಂಡ ತಂಡವು ಮಂಡಂಗಡ ತಂಡವನ್ನು 4-1 ಗೋಲಿನಿಂದ
ಸೋಲಿಸಿತು. ಪಾಡೇಯಂಡ ತಂಡದ ಪರ ಸಂತೋಷ್ ಅಯ್ಯಪ್ಪ 2, ಮಂದಣ್ಣ 1, ವರುಣ್ 1 ಗೋಲು ಗಳಿಸಿದರೆ, ಮಂಡಂಗಡ ಪರ ವಿಕ್ಕಿ ಮಂದಣ್ಣ 1 ಗೋಲು ಬಾರಿಸಿದರು. ಐದನೇ ಪಂದ್ಯಾಟದಲ್ಲಿ ಪಟ್ರಪಂಡ ತಂಡವು ಅಪ್ಪಚಟ್ಟೋಳಂಡ ತಂಡವನ್ನು 2-1
ಗೋಲಿನಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದುಕೊಂಡಿತು. ಪಟ್ರಪಂಡ ಪರ ವಿತಾ ಗಣಪತಿ 2 ಗೋಲು ಬಾರಿಸಿದರೆ,
ಅಪ್ಪಚಟ್ಟೋಳಂಡ ಪರ ಯಾನ್ ಬೋಪಣ್ಣ 1 ಗೋಲು ಬಾರಿಸಿದರು.
● ಎಸ್.ಕೆ ಲಕ್ಷ್ಮೀಶ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL; ಲಕ್ನೋ ಸೂಪರ್ ಜೈಂಟ್ಸ್ ಎದುರಾಳಿ:ಚೆನ್ನೈಗೆ ಇದು ಸೇಡಿನ ಪಂದ್ಯ
IPL; ಆಸ್ಟ್ರೇಲಿಯನ್ ಆಲ್ರೌಂಡರ್ ಮಾರ್ಷ್ ಔಟ್
IPL ನಾಯಕರಿಗೆ ದಂಡ, ಕೊಹ್ಲಿಗೂ ದಂಡ ; 29 ಸಲ 200 ರನ್ ನೀಡಿದ ಆರ್ಸಿಬಿ!
IPL; ಮುಂಬೈ ಎದುರು ರಾಜಸ್ಥಾನ್ ಯಶಸ್ವಿ ಗೆಲುವಿನ ಓಟ: ಜೈಸ್ವಾಲ್ ಅಮೋಘ ಶತಕ
IPL 2024; ಏಳು ಪಂದ್ಯ ಸೋತರೂ ಇನ್ನೂ ಆರ್ ಸಿಬಿಗೆ ಇದೆ ಪ್ಲೇ ಆಫ್ ಅವಕಾಶ: ಇಲ್ಲಿದೆ ವಿವರ
MUST WATCH
ಹೊಸ ಸೇರ್ಪಡೆ
Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Lok Sabha Election: ಕಾಂಗ್ರೆಸ್ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ