ಪ್ರೊ ಕಬಡ್ಡಿ: ಯು ಮುಂಬಾಗೆ ಭರ್ಜರಿ ಗೆಲುವು
Team Udayavani, Sep 10, 2019, 10:41 PM IST
ಕೋಲ್ಕತಾ: ಯು ಮುಂಬಾ ತಂಡವು ಪ್ರೊ ಕಬಡ್ಡಿ 7ನೇ ಆವೃತ್ತಿ ಕೋಲ್ಕತ ಚರಣದ ಮಂಗಳವಾರದ ಪಂದ್ಯದಲ್ಲಿ ತೆಲುಗು ಟೈಟಾನ್ಸ್ ವಿರುದ್ಧ 41-27 ಅಂಕಗಳ ಭಾರೀ ಅಂತರದಲ್ಲಿ ಜಯ ಸಾಧಿಸಿತು. ಈ ಮೂಲಕ ಮುಂಬಾ ಕೂಟದಲ್ಲಿ ಒಟ್ಟು 42 ಅಂಕಗಳಿಸಿ ಮೇಲಕ್ಕೇರಿತು. ಪರಾಜಿತ ತೆಲುಗು ಟೈಟಾನ್ಸ್ ತಂಡದ ಪರಿಸ್ಥಿತಿ ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿದ್ದು, ಪ್ಲೇ-ಆಫ್ ಸಾಧ್ಯತೆ ಕ್ಷೀಣಿಸಿದೆ.
ಇಲ್ಲಿನ ನೇತಾಜಿ ಸುಭಾಷ್ ಚಂದ್ರಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಯು ಮುಂಬಾ ತೆಲುಗು ಟೈಟಾನ್ಸ್ ತಂಡವನ್ನು ಮೂರು ಬಾರಿ ಆಲೌಟ್ ಮಾಡಿತು. ಪಂದ್ಯದ ಆರಂಭದಲ್ಲಿ ಉಭಯ ತಂಡಗಳ ಅಭಿಮಾನಿಗಳು ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಪಂದ್ಯ ನೀರಸವಾಗಿ ಸಾಗಿತು. ಟೈಟಾನ್ಸ್ ವಿರುದ್ಧ ಮುಂಬೈ ಸವಾರಿ ಮಾಡುತ್ತಲೇ ಸಾಗಿತು. ಅರ್ಜುನ್ ದೆಶ್ವಾಲ್ (9 ಅಂಕ) ಉತ್ತಮ ದಾಳಿ ಮಾಡಿದರು. ಇವರಿಗೆ ರೋಹಿತ್ ಬಲಿಯಾನ್ ಸಾಥ್ ನೀಡಿದರು. ಮುಂಬಾ ಪರ ಫಜಲ್ ಅಟ್ರಾಚೆಲಿ ರಕ್ಷಣೆಯಲ್ಲಿ 6 ಅಂಕಗಳಿಸಿ ತಂಡದ ಗೆಲುವಿಗೆ ನೆರವಾದರು. ತಾರಾ ಆಟಗಾರ ರಾಹುಲ್ ಚೌಧರಿ ತಮಿಳ್ ತಲೈವಾಸ್ಗೆ ವಲಸೆ ಹೋಗಿರುವುದರಿಂದ, ತೆಲುಗು ಟೈಟಾನ್ಸ್ಗೆ ಅದರಿಂದ ಇನ್ನೂ ಸುಧಾರಿಸಿಕೊಳ್ಳಲು ಸಾಧ್ಯವಾಗಿಲ್ಲ. ಆದ್ದರಿಂದ ಸತತ ಸೋಲನು ಅನುಭವಿಸುತ್ತ ಕೂಟದಲ್ಲಿ 9ನೆ ಸ್ಥಾನದಲ್ಲಿದೆ. ತೆಲುಗು ಪರ ಇದ್ದಿದ್ದರಲ್ಲಿ ರಾಕೇಶ್ ಗೌಡ (7 ಅಂಕ) ಹಾಗೂ ಸಿದ್ಧಾರ್ಥ್ ದೇಸಾಯಿ ( 4 ಅಂಕ) ಪರವಾಗಿಲ್ಲ ಎನ್ನುವಂತಹ ಆಟವಾಡಿದರು.
ಸಮಬಲದ ಹೋರಾಟ:
ಮೊದಲ ಅವಧಿಯ ಅಂತ್ಯದಲ್ಲಿ ಉಭಯ ತಂಡಗಳು 15-15 ಅಂಕಗಳಿಂದ ಸಮಬಲ ಸಾಧಿಸಿದ್ದವು. ಆದರೆ, ಎರಡನೆ ಅವಧಿಯ ಆಟ ಆರಂಭವಾಗಿ ಎರಡೇ ನಿಮಿಷದಲ್ಲಿ ಯು ಮುಂಬಾ ತಂಡ ಟೈಟಾನ್ಸ್ ತಂಡವನ್ನು ಆಲೌಟ್ ಮಾಡಿತು. ಈ ಹಂತದಲ್ಲಿ ಯು ಮುಂಬಾ 19-16ರಿಂದ ಮುನ್ನಡೆ ಪಡೆದಿತ್ತು.
ನಂತರದ ಹಂತದಲ್ಲಿಯೂ ಯು ಮುಂಬಾ ತಂಡ ತನ್ನ ಆಕ್ರಮಣದ ಆಟವನ್ನು ಮುಂದುವರಿಸಿತು. ಟೈಟಾನ್ಸ್ ಕೋಟೆಯಲ್ಲಿದ್ದ ಒಬ್ಬೊಬ್ಬರೇ ಆಟಗಾರರು ಅಂಕಣದಿಂದ ಹೊರ ಹೋಗುತ್ತಿದ್ದರು. ಇದರ ಫಲವಾಗಿ ಪಂದ್ಯ ಮುಗಿಯಲು ಇನ್ನೂ 9 ನಿಮಿಷ ಬಾಕಿ ಇರುವಂತೆಯೇ ಟೈಟಾನ್ಸ್ ತಂಡ ಮತ್ತೂಮ್ಮೆ ಆಲೌಟ್ ಆಯಿತು. ಈ ಹಂತದಲ್ಲಿ ಮುಂಬಾ ತಂಡ 30-22ರಿಂದ ಭಾರೀ ಮುನ್ನಡೆ ಪಡೆಯುವಲ್ಲಿ ಯಶಸ್ವಿಯಾಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Congress ನಿಂದ ಬದುಕು; ಬಿಜೆಪಿಯದ್ದು ಭಾವನೆಗಳ ಚೆಲ್ಲಾಟ: ಡಾ| ಭಂಡಾರಿ
ರಾಹುಲ್ ಗಾಂಧಿ ಹೋದಲ್ಲೆಲ್ಲಾ ನಾವು ಗೆದ್ದಿದೀವಿ: ಬಳ್ಳಾರಿಯಲ್ಲಿ ನಮ್ಮ ಗೆಲುವು ನಿಶ್ಚಿತ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ