ಎಬಿಡಿ ಸ್ಫೋಟದ ಹಿಂದೆ ಯಾರಿದ್ದಾರೆ?


Team Udayavani, Apr 12, 2017, 3:06 PM IST

ABSD.jpg

ಇಂದೋರ್‌: ಹತ್ತನೇ ಐಪಿಎಲ್‌ಗೆ ಎಬಿ ಡಿ ವಿಲಿಯರ್ ಆಗಮನವಾಗಿದೆ. ಬಂದವರೇ ಪಂಜಾಬ್‌ ವಿರುದ್ಧ ಗುಡುಗು-ಸಿಡಿಲಿನಂತೆ ಆರ್ಭಟಿಸಿದ್ದಾರೆ. 

ಸೋಮವಾರ ರಾತ್ರಿಯ ಮುಖಾಮುಖೀಯಲ್ಲಿ ಆರ್‌ಸಿಬಿ ಸೋತರೂ ಏಕಾಂಗಿಯಾಗಿ ಹೋರಾಡಿ ಅಭಿಮಾನಿಗಳ ಮನಸೂರೆಗೊಂಡಿದ್ದಾರೆ. 360 ಡಿಗ್ರಿ ಬ್ಯಾಟಿಂಗ್‌ ಮೂಲಕ ಐಪಿಎಲ್‌ಗೆ ಎಂದಿನ “ಎಬಿಡಿ ಸ್ಪರ್ಶ’ವನ್ನಿತ್ತಿದ್ದಾರೆ. 

ಪಂದ್ಯದ ನಡುವಿನ ಬ್ರೇಕ್‌ ವೇಳೆ ವೀಕ್ಷಕ ವಿವರಣಕಾರ ಸಂಜಯ್‌ ಮಾಂಜ್ರೆàಕರ್‌ ಜತೆ ಮಾತಾಡಿದ ಡಿ ವಿಲಿಯರ್, ಪತ್ನಿಯ ಸಲಹೆಗಳೇ ತನ್ನ ಈ ಆಟಕ್ಕೆ ಸ್ಫೂರ್ತಿ ಎಂದರು. “ಕೀಳರಿಮೆ ಹಾಗೂ ಅವಿಶ್ವಾಸದಿಂದ ಹೊರಬರಲು ನನಗೆ ಪತ್ನಿ ಡೇನಿಯಲ್‌ ನೀಡಿದ ಸಲಹೆಗಳೇ ಸ್ಫೂರ್ತಿಯಾದವು. ಹೀಗಾಗಿ ಮೊದಲ ಪಂದ್ಯದಲ್ಲೇ ಎಂದಿನ ಲಯದೊಂದಿಗೆ ನನ್ನ ಸಹಜ ಶೈಲಿಯ ಆಟವಾಡಲು ಸಾಧ್ಯವಾಯಿತು. ಮಾನಸಿಕವಾಗಿ ನಾನು ನಿರಾಳನಾಗಿದ್ದೆ. ನಿಜಕ್ಕೂ ನನ್ನ ಈ ಆಟ ನನಗೇ ಅಚ್ಚರಿ ಉಂಟುಮಾಡಿದೆ’ ಎಂದರು. 

“ರಾತ್ರಿ ಕಳೆಯುವುದರೊಳಗಾಗಿ ಕೆಟ್ಟ ಆಟಗಾರನಾಗಿ ಮೂಡಿಬರುವುದು ಕಷ್ಟವಲ್ಲ. ಆದರೆ ಸುದೀರ್ಘ‌ ವಿರಾಮದ ಬಳಿಕ ನೈಜ ಶೈಲಿಯ ಆಟವನ್ನು ಪ್ರದರ್ಶಿಸುವುದು ಸುಲಭವಲ್ಲ. ಇದಕ್ಕೆ ಮಾನಸಿಕವಾಗಿ ನಾವು ಹೆಚ್ಚು ಗಟ್ಟಿಗರಾಗಬೇಕಾಗುತ್ತದೆ. ಹಾಗೆಯೇ ಕೀಳರಿಮೆಯನ್ನು ಹೊಡೆದೋಡಿಸಬೇಕಾಗುತ್ತದೆ. ಇದೆಲ್ಲ ನನ್ನ ಹೆಂಡತಿಯ ಹಿತವಚನದಿಂದ ಸಾಧ್ಯವಾಯಿತು…’ ಎಂದರು ಡಿ ವಿಲಿಯರ್. 

ಆಕೆ ಏನು ಹೇಳಿದರು ಎಂಬ ಮಾಂಜ್ರೆàಕರ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಎಬಿಡಿ, “ಕೆಲವು ದಿನಗಳಿಂದ ನಾನು ಒಂಥರ ಸೋಮಾರಿಯಾಗಿದ್ದೆ. ಪಂದ್ಯಕ್ಕೂ ಮುನ್ನ ಪತ್ನಿಗೆ ಫೋನ್‌ ಮಾಡಿ ನನ್ನ ಮನಸ್ಥಿತಿಯನ್ನು ತಿಳಿಸಿದೆ. ಆಗ ಅವಳು ತನ್ನ ಮಗನ ಪಕ್ಕ ನಿದ್ರಿಸುತ್ತಿದ್ದಳು. ಕೆಲವು ನಿಮಿಷಗಳ ಬಳಿಕ ಅವಳೇ ಮರು ಕರೆ ಮಾಡಿದಳು. ನಿರಾಳವಾಗಿರಿ, ಯಾವುದನ್ನೂ ಮನಸ್ಸಿಗೆ ಹಚ್ಚಿಕೊಳ್ಳಬೇಡಿ. ಗಮನವೆಲ್ಲ ಕ್ರಿಕೆಟ್‌ ಮೇಲೆಯೇ ಇರಲಿ. ನಿಮ್ಮ ಆಟಕ್ಕೆ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ನಿಮ್ಮ ಬೆಂಬಲಕ್ಕೆ ನಾನಿದ್ದೇನೆ. ನಾನು ಭಾರತದತ್ತ ಪ್ರಯಾಣ ಬೆಳೆಸಿ ನಾಳೆ ನಿಮ್ಮನ್ನು ಸೇರಿಕೊಳ್ಳುತ್ತೇನೆ ಎಂದಳು. ಇದೇ ನನ್ನ ಆಟಕ್ಕೆ ಪ್ರೇರಣೆಯಾಯಿತು…’ ಎಂದರು. ಬೆನ್ನು ನೋವಿನ ಸಮಸ್ಯೆಯಿಂದಾಗಿ ಡಿ ವಿಲಿಯರ್ ಮೊದಲೆರಡು ಪಂದ್ಯಗಳಲ್ಲಿ ಆಡಿರಲಿಲ್ಲ.

ನಾಯಕತ್ವ  ವಹಿಸದ  ಡಿ ವಿಲಿಯರ್
ಇಂದೋರ್‌:
ವಿರಾಟ್‌ ಕೊಹ್ಲಿ ಗೈರಲ್ಲಿ ಎಬಿ ಡಿ ವಿಲಿಯರ್ ಅವರನ್ನು ಆರ್‌ಸಿಬಿ ತಂಡದ ಹಂಗಾಮಿ ನಾಯಕನೆಂದು ಘೋಷಿಸಲಾಗಿತ್ತು. ಆದರೆ ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ಎಬಿಡಿ ನಾಯಕನ ಪಾತ್ರ ನಿಭಾಯಿಸಲಿಲ್ಲ. ಬದಲಾಗಿ ಶೇನ್‌ ವಾಟ್ಸನ್‌ ಅವರೇ ಕ್ಯಾಪ್ಟನ್‌ ಆಗಿ ಮುಂದುವರಿದರು. 

ಇದಕ್ಕೆ ಸಂಬಂಧಿಸಿದಂತೆ ಬೆಂಗಳೂರುಬ ಫ್ರಾಂಚೈಸಿ ಯಾವುದೇ ಅಧಿಕೃತ ಪ್ರಕಟನೆ ನೀಡಿಲ್ಲ. ಕೊಹ್ಲಿ ಬರುವ ತನಕ ವಾಟ್ಸನ್‌ ಅವರೇ ಈ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ಇದೆ.
 

ಟಾಪ್ ನ್ಯೂಸ್

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌

Lok Sabha Election ಕಾಂಗ್ರೆಸ್‌ಗೆ 20ಕ್ಕೂ ಅಧಿಕ ಸ್ಥಾನ: ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

Rajastan Royals; ಪ್ಲೇ ಆಫ್ ಮೊದಲ ಗುರಿ: ಸಂಜು ಸ್ಯಾಮ್ಸನ್‌

IPL 2024; ಫಿಟ್‌ ಆಗಿದ್ದೇ ನಿನ್ನೆ: ಸಂದೀಪ್‌ ಶರ್ಮ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Northamptonshire: ಕೌಂಟಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ದ್ವಿಶತಕ

Pakistan cricket team military training wasted

PCB; ಪಾಕ್‌ ಕ್ರಿಕೆಟ್‌ ತಂಡದ ಸೇನಾ ತರಬೇತಿ ವ್ಯರ್ಥ: ಹಾಸ್ಯ

Shotgun

Shotgun ಶೂಟಿಂಗ್‌ ಅರ್ಹತಾ ಸುತ್ತಿನಲ್ಲಿ ಕರಣ್‌: ವಿವಾದ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Congress ಗೆದ್ದರೆ ದಲಿತರ ಮೀಸಲು ಮುಸ್ಲಿಂ ಪಾಲು: ಮೋದಿ ಮತ್ತೆ ವಾಗ್ಬಾಣ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Dakshina Kannada: 5 ಸಿಎಪಿಎಫ್‌/ಕೆಎಸ್‌ಆರ್‌ಪಿ ತುಕಡಿ, 3,100 ಸಿಬಂದಿ ನಿಯೋಜನೆ

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Election: ಮಂಗಳೂರು-ಶೋರ್ನೂರು-ಬೆಂಗಳೂರು ಮಧ್ಯೆ ವಿಶೇಷ ರೈಲು

Udupi-Chikmagalur Lok Sabha constituency: ಯುವ ಮತದಾರರ ಚುನಾವಣೆ ಉತ್ಸಾಹ

Udupi-Chikmagalur: ಯುವ ಮತದಾರರ ಚುನಾವಣೆ ಉತ್ಸಾಹ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

ಪರಿಹಾರ ತಾರತಮ್ಯ ಕಾಂಗ್ರೆಸ್‌ನ ನರೇಟಿವ್‌: ಅಣ್ಣಾಮಲೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.