ಪಾಕಿಸ್ಥಾನದ ಮಾಜಿ ಲೆಗ್‌ಸ್ಪಿನ್ನರ್‌ ಅಬ್ದುಲ್‌ ಖಾದಿರ್‌ ನಿಧನ

ತೀವ್ರ ಹೃದಯಾಘಾತದಿಂದ ಲಾಹೋರ್‌ನಲ್ಲಿ ಕೊನೆಯುಸಿರು ; ಪಾಕ್‌ ಪರ 67 ಟೆಸ್ಟ್‌, 104 ಏಕದಿನ ಪಂದ್ಯಗಳನ್ನಾಡಿದ ಸಾಧಕ

Team Udayavani, Sep 8, 2019, 5:17 AM IST

Abdul-Qadir-passes-away

ಲಾಹೋರ್‌: ಪಾಕಿಸ್ಥಾನದ ಲೆಜೆಂಡ್ರಿ ಸ್ಪಿನ್ನರ್‌ ಅಬ್ದುಲ್‌ ಖಾದಿರ್‌ ತೀವ್ರ ಹೃದಯಾಘಾತದಿಂದ ಶುಕ್ರವಾರ ತಡರಾತ್ರಿ ನಿಧನರಾದರು. 1970-80ರ ದಶಕದಲ್ಲಿ ತಮ್ಮ ಲೆಗ್‌ಸ್ಪಿನ್‌ ಮೋಡಿ ಯಿಂದ ವಿಶ್ವದ ಖ್ಯಾತ ಬ್ಯಾಟ್ಸ್‌ಮನ್‌ಗಳನ್ನು ನಡುಗಿಸಿದ ಛಾತಿ ಖಾದಿರ್‌ ಅವರದಾಗಿತ್ತು.

ಸೆ. 15ಕ್ಕೆ 64ನೇ ವರ್ಷಕ್ಕೆ ಕಾಲಿಡಲಿದ್ದ ಅಬ್ದುಲ್‌ ಖಾದಿರ್‌, ಈ ಸಂಭ್ರಮದ ಕ್ಷಣಗಣನೆಯಲ್ಲಿರು ವಾಗಲೇ ಇಹಲೋಕದ ಇನ್ನಿಂಗ್ಸ್‌ ಮುಗಿಸಿದ್ದಾರೆ. “ನನ್ನ ತಂದೆಗೆ ಹೃದಯ ಸಂಬಂಧಿ ಯಾವುದೇ ಸಮಸ್ಯೆ ಇರಲಿಲ್ಲ. ರಾತ್ರಿ ಊಟದ ವೇಳೆ ದಿಢೀರನೇ ಎದೆನೋವು ಕಾಣಿಸಿಕೊಂಡಿತು. ಆಸ್ಪತ್ರೆಗೆ ಕೊಂಡೊಯ್ಯುವ ಮಾರ್ಗದಲ್ಲೇ ಕೊನೆಯುಸಿರೆಳೆದರು…’ ಎಂಬುದಾಗಿ ಪುತ್ರ ಸುಲೈಮಾನ್‌ ಮಾಧ್ಯಮಗಳಿಗೆ ತಿಳಿಸಿದರು.

ಅಬ್ದುಲ್‌ ಖಾದಿರ್‌ ನಿಧನಕ್ಕೆ ಅವರ ಸಮಕಾ ಲೀನ ಕ್ರಿಕೆಟಿಗ, ಪಾಕಿಸ್ಥಾನದ ಪ್ರಧಾನಿ ಇಮ್ರಾನ್‌ ಖಾನ್‌, ಸಚಿನ್‌ ತೆಂಡುಲ್ಕರ್‌ ಸಹಿತ ಕ್ರಿಕೆಟಿನ ಗಣ್ಯರೆಲ್ಲ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

368 ಅಂತಾರಾಷ್ಟ್ರೀಯ ವಿಕೆಟ್‌
1977ರಲ್ಲಿ ಇಂಗ್ಲೆಂಡ್‌ ವಿರುದ್ಧ ಲಾಹೋರ್‌ನಲ್ಲಿ ಟೆಸ್ಟ್‌ ಪದಾರ್ಪಣೆ ಮಾಡಿದ ಖಾದಿರ್‌, 1990ರಲ್ಲಿ ವಿಂಡೀಸ್‌ ವಿರುದ್ಧ ಇಲ್ಲಿಯೇ ಕೊನೆಯ ಟೆಸ್ಟ್‌ ಆಡಿದ್ದರು. 67 ಟೆಸ್ಟ್‌ಗಳಲ್ಲಿ 236 ವಿಕೆಟ್‌ ಉರುಳಿಸಿದ್ದು ಇವರ ಸಾಧನೆ. ಇಂಗ್ಲೆಂಡ್‌ ಎದುರು 1987ರಲ್ಲಿ ಲಾಹೋರ್‌ ಅಂಗಳದಲ್ಲೇ ಖಾದಿರ್‌ 56ಕ್ಕೆ 9 ವಿಕೆಟ್‌ ಉಡಾಯಿಸಿದ್ದು ಇಂದಿಗೂ ಪಾಕ್‌ ಇನ್ನಿಂಗ್ಸ್‌ ಒಂದರ ದಾಖಲೆಯಾಗಿ ಉಳಿದಿದೆ.

104 ಏಕದಿನಗಳಲ್ಲಿ 132 ವಿಕೆಟ್‌ ಉರುಳಿಸಿದ ಅಬ್ದುಲ್‌ ಖಾದಿರ್‌, ಪಾಕಿಸ್ಥಾನದ 1983 ಮತ್ತು 1987ರ ವಿಶ್ವಕಪ್‌ ತಂಡದ ಪ್ರಮುಖ ಬೌಲಿಂಗ್‌ ಅಸ್ತ್ರವಾಗಿದ್ದರು. ಡ್ಯಾನ್ಸಿಂಗ್‌ ಶೈಲಿಯ ರನ್‌-ಅಪ್‌ ಖಾದಿರ್‌ ಅವರ ಬೌಲಿಂಗ್‌ ಆಕರ್ಷಣೆಯಾಗಿತ್ತು.

ಖಾದಿರ್‌ ಅವರ 4 ಮಂದಿ ಮಕ್ಕಳಾದ ರೆಹಮಾನ್‌, ಇಮ್ರಾನ್‌, ಸುಲೈಮಾನ್‌ ಮತ್ತು ಉಸ್ಮಾನ್‌ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದ್ದಾರೆ. ಕಿರಿಯ ಮಗ ಉಸ್ಮಾನ್‌ ಲೆಗ್‌ಸ್ಪಿನ್ನರ್‌ ಆಗಿದ್ದು, ಕಳೆದ ಬಿಗ್‌ ಬಾಶ್‌ ಲೀಗ್‌ನಲ್ಲಿ ಆಡಿದ್ದರು.

ಖಾದಿರ್‌ಗೆ ಬಿಸಿ ಮುಟ್ಟಿಸಿದ್ದ 16ರ ಸಚಿನ್‌!
ಅಬ್ದುಲ್‌ ಖಾದಿರ್‌ ಜಾಗತಿಕ ಮಟ್ಟದಲ್ಲಿ ಮಿಂಚುತ್ತಿದ್ದಾಗ ಅವರಿಗೆ ಬಿಸಿ ಮುಟ್ಟಿಸಿದ ಹೆಗ್ಗಳಿಕೆ ಪುಟಾಣಿ ತೆಂಡುಲ್ಕರ್‌ಗೆ ಸಲ್ಲುತ್ತದೆ. ಪ್ರದರ್ಶನ ಪಂದ್ಯವೊಂದರಲ್ಲಿ ಖಾದಿರ್‌ ಎಸೆತಗಳಿಗೆ ಸತತ ಸಿಕ್ಸರ್‌ ಬಾರಿಸುವ ಮೂಲಕ ಸಚಿನ್‌ ವಿಶ್ವದ ಎಲ್ಲ ಬೌಲರ್‌ಗಳಿಗೂ ಎಚ್ಚರಿಕೆಯೊಂದನ್ನು ರವಾನಿಸಿದ್ದರು. ಅಂದಹಾಗೆ, ಸಚಿನ್‌ಗೆ ಆಗ ಕೇವಲ 16 ವರ್ಷವಷ್ಟೇ!

1989ರ ಪಾಕ್‌ ಪ್ರವಾಸದ ವೇಳೆ ಪೇಶಾವರ ಏಕದಿನ ಪಂದ್ಯ ಮಳೆಯಿಂದ ರದ್ದುಗೊಂಡಾಗ ಏರ್ಪಟ್ಟ ಪ್ರದರ್ಶನ ಪಂದ್ಯ ಅದಾಗಿತ್ತು. ಅದರಲ್ಲಿ ಸಚಿನ್‌ ಕೇವಲ 18 ಎಸೆತಗಳಿಂದ 53 ರನ್‌ ಸಿಡಿಸಿದ್ದರು. ಖಾದಿರ್‌ ಅವರ ಒಂದೇ ಓವರಿನಲ್ಲಿ 4 ಸಿಕ್ಸರ್‌ ಸಹಿತ 28 ರನ್‌ ಬಾರಿಸುವ ಮೂಲಕ ಅಬ್ಬರಿಸಿದ್ದರು (6, 4, 0, 6, 6, 6). ಬಳಿಕ ಮುಷ್ತಾಕ್‌ ಅಹ್ಮದ್‌ ಓವರಿನಲ್ಲೂ 4 ಸಿಕ್ಸರ್‌ ಬಿದ್ದಿತ್ತು.

ಅಂದು ಶ್ರೀಕಾಂತ್‌ಗೆ ಎಸೆದ ಮೊದಲ ಓವರನ್ನು ಖಾದಿರ್‌ ಮೇಡನ್‌ ಮಾಡಿದ್ದರು. ಆಗ ಸಚಿನ್‌ ಬಳಿ ಹೋದ ಖಾದಿರ್‌, “ಇದೇನೂ ಅಂತಾರಾಷ್ಟ್ರೀಯ ಪಂದ್ಯವಲ್ಲ. ನನ್ನ ಮುಂದಿನ ಓವರಿನಲ್ಲಿ ನೀವು ಸಿಕ್ಸರ್‌ಗೆ ಪ್ರಯತ್ನಿಸಬಹುದು. ಇದರಲ್ಲಿ ಯಶಸ್ವಿಯಾದರೆ ನೀವು ದೊಡ್ಡ ಸ್ಟಾರ್‌ ಆಗಲಿದ್ದೀರಿ’ ಎಂದು ಹೇಳಿದ್ದರು. ಆಗ ಇದಕ್ಕೆ ಸಚಿನ್‌ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಮುಂದಿನ ಓವರಿನಲ್ಲಿ ಬ್ಯಾಟಿನಿಂದಲೇ ಜವಾಬಿತ್ತರು!

ಖಾದಿರ್‌ ಆ ಕಾಲದ ಅತ್ಯುತ್ತಮ ಸ್ಪಿನ್ನರ್‌ಗಳಲ್ಲಿ ಒಬ್ಬರಾಗಿದ್ದರು. ಅವರ ಬೌಲಿಂಗ್‌ ಎದುರಿಸಿದ್ದನ್ನು ಮರೆತಿಲ್ಲ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು…
– ಸಚಿನ್‌ ತೆಂಡುಲ್ಕರ್‌

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Anil Kumble Reveals His IPL Bid 2008

IPL: ಆರ್ ಸಿಬಿ ತಂಡಕ್ಕಾಗಿ ಮಲ್ಯ ಅಂದು…..: ವಿಶೇಷ ಘಟನೆ ನೆನೆದ ಅನಿಲ್ ಕುಂಬ್ಳೆ

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

Ipl: ಡೆಲ್ಲಿ ಗೆಲುವಿಗೆ ಪಂತ್‌, ಪಟೇಲ್‌ ನೆರವು

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

1-asdasdas

IPL; ಸ್ಟಾಯಿನಿಸ್‌ ಏಟಿಗೆ ತವರಲ್ಲೆ ಚಾಂಪಿಯನ್‌ ಚೆನ್ನೈ ಠುಸ್‌!

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.